ನವದೆಹಲಿ: ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಭಾಷೆಯನ್ನು ಇಂಗ್ಲಿಷ್ನಿಂದ ಹಿಂದಿಗೆ ಬದಲಾಯಿಸುವ ಯಾವುದೇ ಪ್ರಸ್ತಾವವಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.
ಏಕರೂಪ ನಾಗರಿಕ ಸಂಹಿತೆಯ ವಿಷಯದ ಕುರಿತಾದ ಪ್ರಶ್ನೆಯ ಭಾಗವಾಗಿ, ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಭಾಷೆಯನ್ನು ಇಂಗ್ಲಿಷ್ನಿಂದ ಹಿಂದಿಗೆ ಬದಲಾಯಿಸಲು ಸರ್ಕಾರ ಪ್ರಸ್ತಾಪಿಸಿದೆಯೇ, ಇದರಿಂದ ಸಾಮಾನ್ಯ ಜನರು ಅವರ ಸ್ವಂತ ಭಾಷೆಯಲ್ಲಿ ವಿಚಾರಣೆಯನ್ನು ಅರ್ಥಮಾಡಿಕೊಳ್ಳಬಹುದು ಎಂದು ಸದಸ್ಯರೊಬ್ಬರು ಕೇಳಿದ್ದರು.
ಈ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಅಂತಹ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದರು.
ದೇಶದ ಆಯಾ ಹೈಕೋರ್ಟ್ಗಳಲ್ಲಿ ಸ್ಥಳೀಯ ಭಾಷೆಗಳನ್ನು ಪರಿಚಯಿಸಲು ಕೆಲವು ಅಡೆತಡೆಗಳಿವೆ. ಆದರೆ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ವೈಜ್ಞಾನಿಕ ನಾವೀನ್ಯತೆಗಳ ಸಹಾಯದಿಂದ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಏಪ್ರಿಲ್ 2022 ರಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್ ವಿ ರಮಣ ಅವರು ವಿಶ್ವಾಸ ಪಡಿಸಿದ್ದರು.
Advertisement