ಪ್ರತಿಭಟನೆ ನಂತರ ಶಿವಾಜಿ ಪ್ರತಿಮೆ ತೆರವು ಆದೇಶ ಹಿಂಪಡೆದ ಗೋವಾ ಪಂಚಾಯತ್

ತೀವ್ರ ಪ್ರತಿಭಟನೆಯ ನಂತರ ರಸ್ತೆಬದಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆರವುಗೊಳಿಸುವಂತೆ ಗೋವಾದ ಕಲಂಗುಟ್ ಪಂಚಾಯತ್‌ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಹಿಂಪಡೆಯಲಾಗಿದೆ.
ಶಿವಾಜಿ ಪ್ರತಿಮೆ, ಸಾಂದರ್ಭಿಕ ಚಿತ್ರ
ಶಿವಾಜಿ ಪ್ರತಿಮೆ, ಸಾಂದರ್ಭಿಕ ಚಿತ್ರ

ಪಣಜಿ: ತೀವ್ರ ಪ್ರತಿಭಟನೆಯ ನಂತರ ರಸ್ತೆಬದಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆರವುಗೊಳಿಸುವಂತೆ ಗೋವಾದ ಕಲಂಗುಟ್ ಪಂಚಾಯತ್‌ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಹಿಂಪಡೆಯಲಾಗಿದೆ.

ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಗೋವಾ ಜಿಲ್ಲಾಡಳಿತ, ಪಂಚಾಯತ್‌ನ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಇಂದು ಮಧ್ಯಾಹ್ನ ತಿಳಿಸಿದೆ.

ಇದಕ್ಕೂ ಮುನ್ನ ಕನಿಷ್ಠ 100 ಜನರನ್ನೊಳಗೊಂಡ ಗುಂಪು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಬೆಳಗ್ಗೆ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲವರು ಪಂಚಾಯತ್ ಕಚೇರಿ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸೋಮವಾರ ಹೊರಡಿಸಿದ ಆದೇಶದಲ್ಲಿ ವಿದ್ಯುತ್ ಕಂಬ ಹಾಕಲು ಶಿವಾಜಿ ಮಹಾರಾಜರ ಪ್ರತಿಮೆಯನ್ನು ರಸ್ತೆ ಬದಿಯಿಂದ ತೆಗೆದುಹಾಕುವಂತೆ ಸ್ಥಳೀಯ ಸಂಸ್ಥೆಗೆ ಸೂಚಿಸಲಾಗಿತ್ತು.

ಪಂಚಾಯಿತಿ ಆದೇಶವನ್ನು ಹಿಂಪಡೆದರೂ ತೃಪ್ತರಾಗದ ಪ್ರತಿಭಟನಾಕಾರರು, ಕಲಂಗುಟ್ ಪಂಚಾಯತ್ ಸರಪಂಚ್ ಜೋಸೆಫ್ ಸಿಕ್ವೇರಾ ಅವರು ಈ ಆದೇಶ ಹೊರಡಿಸಿದ್ದಕ್ಕಾಗಿ ಕ್ಷಮೆಯಾಚಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com