ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 30 ಮಂದಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ

ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶುಶ್ರೂಷಾ ವೃತ್ತಿಪರರಿಗೆ 2022- 2023ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಒಟ್ಟು 30 ಆರೋಗ್ಯ ಸೇವಾಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೈಟಿಂಗೇಲ್ ಪ್ರಶಸ್ತಿ ಸ್ವೀಕರಿಸಿದ ಶುಶ್ರೂಷಕರು
ನೈಟಿಂಗೇಲ್ ಪ್ರಶಸ್ತಿ ಸ್ವೀಕರಿಸಿದ ಶುಶ್ರೂಷಕರು
Updated on

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶುಶ್ರೂಷಾ ವೃತ್ತಿಪರರಿಗೆ 2022- 2023ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಒಟ್ಟು 30 ಆರೋಗ್ಯ ಸೇವಾಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನರ್ಸ್ ಸೇವೆ ಮತ್ತು ಅಸಾಧಾರಣ ವೃತ್ತಿಪರತೆಗಾಗಿ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾಗಿದೆ.  ನರ್ಸಿಂಗ್ ವೃತ್ತಿಪರರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು  ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನ ಮಾಡಿದರು.

ಕರ್ನಾಟಕದ ಡಾ ಪೊರೆಡ್ಡಿ ವಿಜಯಲಕ್ಷ್ಮಿ ಅವರಿಗೂ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಲಭಿಸಿದೆ, ಇವರ ಜೊತೆಗೆ ನಾಗರತ್ನ ಟಿ ಅವರು 2023 ನೇ ಸಾಲಿನ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕದ ಹೊನ್ನಾಳಿ, ಜನರಲ್ ಆಸ್ಪತ್ರೆಯ ಉಪ ಕೇಂದ್ರದಲ್ಲಿ ಎಎನ್‌ಎಂ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ಐದು ಗ್ರಾಮಗಳಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊರೋನಾ ಸಾಂಕ್ರಾಮಿಕ ಸಮಯದ ಮೇಳೆ 35,000 ಜನರಿಗೆ ಕೋವಿಡ್-19 ಲಸಿಕೆಯ ಗುರಿಯನ್ನು ಸಾಧಿಸಿದ್ದರು. ಆಕೆಯ ಕೆಲಸ ಮತ್ತು ಸಮರ್ಪಣಾ ಮನೋಭಾವವನ್ನು ಕಂಡು ರಾಜ್ಯ ಸರ್ಕಾರವು 2022 ರಲ್ಲಿ ರಾಜ್ಯ ಮಟ್ಟದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್ (ನಿಮ್ಹಾನ್ಸ್) ಕಾಲೇಜಿನ ನರ್ಸಿಂಗ್ ಕಾಲೇಜಿನ ಕ್ಲಿನಿಕಲ್ ಬೋಧಕರಾದ ವಿಜಯಲಕ್ಷ್ಮಿ ಅವರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಯ ಟೆಲಿನರ್ಸಿಂಗ್ ಅಭ್ಯಾಸ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದರು. ಸಮಾಲೋಚನೆ ಸೇವೆಗಳನ್ನು ಒದಗಿಸುವಲ್ಲಿ ಅದರ ಸಹಾಯವಾಣಿಯ ಭಾಗವಾಗಿತ್ತು. ಪಿಎಚ್‌ಡಿಯೊಂದಿಗೆ, ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕೇರಳದ ಗೀತಾ ಎ ಆರ್ ಅವರು ತಮ್ಮ ನಿಸ್ವಾರ್ಥ ಕೆಲಸಕ್ಕಾಗಿ 2023 ನೇ ಸಾಲಿನ ಪ್ರಶಸ್ತಿಯನ್ನು ಪಡೆದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರು ಮಾಡಿದ ಕೆಲಸಕ್ಕಾಗಿ ಗೀತಾ ಅವರನ್ನು ಪುರಸ್ಕರಿಸಲಾಗಿದೆ, ಇದಕ್ಕಾಗಿ ಅವರು 2021 ಮತ್ತು 2022 ರ ಅತ್ಯುತ್ತಮ ಆಸ್ಪತ್ರೆ ಸಿಬ್ಬಂದಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಗ್ರೇಡ್-1 ನರ್ಸಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇರಳದ ಕೊಲ್ಲಂನಲ್ಲಿರುವ ಎ ಆರ್ ರಹೀಮ್ ಸ್ಮಾರಕ ಜಿಲ್ಲಾ ಆಸ್ಪತ್ರೆಯಲ್ಲಿ ಅಧಿಕಾರಿ.

ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 1973ರಲ್ಲಿ ಶುಶ್ರೂಷಕರು ಮತ್ತು ಶುಶ್ರೂಷಾ ವೃತ್ತಿಪರರು ಸಮಾಜಕ್ಕೆ ಸಲ್ಲಿಸಿದ ಗೌರವಾನ್ವಿತ ಸೇವೆಗಳನ್ನು ಗುರುತಿಸುವ ಸಂಕೇತವಾಗಿ ಸ್ಥಾಪಿಸಿದ. ಒಟ್ಟು ಪ್ರಶಸ್ತಿ ಪುರಸ್ಕೃತರಲ್ಲಿ 10 ಸಹಾಯಕ ದಾದಿಯರು ಮತ್ತು ಶುಶ್ರೂಷಕಿಯರು, 4 ಮಹಿಳಾ ಆರೋಗ್ಯ ಸಂದರ್ಶಕರು ಮತ್ತು 16 ಮಂದಿ ದಾದಿಯರು ಇದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com