ಬೀದಿ ನಾಯಿಗಳನ್ನು 'ಅಸ್ಸಾಂಗೆ ಕಳುಹಿಸಿ, ಅಲ್ಲಿನ ಜನರು ಬಹಳ ಉತ್ಸಾಹದಿಂದ ತಿನ್ನುತ್ತಾರೆ: ಮಹಾರಾಷ್ಟ್ರ ಶಾಸಕ

ಮಹಾರಾಷ್ಟ್ರದ ಬೀದಿ ನಾಯಿಗಳನ್ನು ಅಸ್ಸಾಂಗೆ ಕಳುಹಿಸಬೇಕು. ಅಲ್ಲಿನ ಜನರು ನಾಯಿಗಳನ್ನು ಕೊಂದು ಬಹಳ ಉತ್ಸಾಹದಿಂದ ತಿನ್ನುತ್ತಾರೆ ಎಂದು ಮಹಾರಾಷ್ಟ್ರದ ಶಾಸಕ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥ ಬಚ್ಚು ಕಾಡು ಹೇಳಿದ್ದು ಈ ಹೇಳಿಕೆ ಇದೀಗ ಕೋಲಾಹಲ ಎಬ್ಬಿಸಿದೆ.
ಬಚ್ಚು ಕಡು
ಬಚ್ಚು ಕಡು
Updated on

ಮುಂಬೈ: ಮಹಾರಾಷ್ಟ್ರದ ಬೀದಿ ನಾಯಿಗಳನ್ನು ಅಸ್ಸಾಂಗೆ ಕಳುಹಿಸಬೇಕು. ಅಲ್ಲಿನ ಜನರು ನಾಯಿಗಳನ್ನು ಕೊಂದು ಬಹಳ ಉತ್ಸಾಹದಿಂದ ತಿನ್ನುತ್ತಾರೆ ಎಂದು ಮಹಾರಾಷ್ಟ್ರದ ಶಾಸಕ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥ ಬಚ್ಚು ಕಾಡು ಹೇಳಿದ್ದು ಈ ಹೇಳಿಕೆ ಇದೀಗ ಕೋಲಾಹಲ ಎಬ್ಬಿಸಿದೆ.

ಬೀದಿನಾಯಿಗಳು ಮತ್ತು ಅವುಗಳಿಂದಾಗುವ ಸಮಸ್ಯೆಗಳ ಕುರಿತು ವಿಧಾನಸೌಧದಲ್ಲಿ ಚರ್ಚೆ ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಶಾಸಕ ಬಚ್ಚು ಕಾಡು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಇತರ ಶಾಸಕರಾದ ಪ್ರತಾಪ್ ಸರ್ನಾಯಕ್ ಮತ್ತು ಅತುಲ್ ಭಟ್ಕಳಕರ್ ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಸ್ಸಾಂನಲ್ಲಿ ಬೀದಿ ನಾಯಿಗಳಿಗೆ ಭಾರಿ ಬೇಡಿಕೆ ಇದೆ ಎಂದು ಮಹಾರಾಷ್ಟ್ರ ಶಾಸಕ ಬಚ್ಚು ಕಡು ಹೇಳಿದ್ದಾರೆ. ಅಲ್ಲಿ ನಾಯಿಗೆ 8 ಸಾವಿರ ರೂಪಾಯಿ ಬೆಲೆ ಇದೆ. ಇದರೊಂದಿಗೆ ರಾಜ್ಯದಲ್ಲಿನ ಬೀದಿ ನಾಯಿಗಳ ಸಂಖ್ಯೆಯೂ ನಿಯಂತ್ರಣಕ್ಕೆ ಬರಲಿದೆ. ಹೀಗಾಗಿ ನಾಯಿಗಳನ್ನು ಅಸ್ಸಾಂಗೆ ಕಳುಹಿಸಬೇಕು. ಮೊದಲು ಈ ಪ್ರಯೋಗವನ್ನು ನಗರದಲ್ಲಿ ನಡೆಸಬೇಕು ಎಂದರು. 

ಬಚ್ಚು ಕಡು ಹೇಳಿಕೆಗೆ ತೀವ್ರ ಟೀಕೆ ಎದುರಾಗಿದ್ದು ಈ ಹೇಳಿಕೆಯನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರಾಣಿ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ಶಾಸಕರ ಹೇಳಿಕೆ ತೀರಾ ಅವಹೇಳನಕಾರಿಯಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com