ಹಿಂದೂ ಪತಿಯಿಂದ ದಲಿತ ಮಹಿಳೆಯ ಹತ್ಯೆ: ಮೃತದೇಹ ಸ್ವೀಕರಿಸಲು ಪೋಷಕರು ನಿರಾಕರಣೆ!
ಮಧುರೈ: ಮೇಲ್ಜಾತಿ ಹಿಂದೂ ಪತಿಯಿಂದ ಹತ್ಯೆಗೀಡಾದ ದಲಿತ ಮಹಿಳೆಯ ಕುಟುಂಬಸ್ಥರು ಭಾನುವಾರ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಮೃತದೇಹ ಸ್ವೀಕರಿಸಲು ನಿರಾಕರಿಸಿದ್ದಾರೆ.
ಮುನಿಯಾಂಡಿಪುರಂನ 22 ವರ್ಷದ ಡಬ್ಲ್ಯು ರಮ್ಯಾ ಎಂಬಾಕೆಯನ್ನು ಆಕೆಯ ಪತಿ 32 ವರ್ಷದ ಎಸ್ ಸತೀಶ್ಕುಮಾರ್ ಎಂಬ ಮೇಲ್ಜಾತಿ ಹಿಂದೂ ಎಂಬಾತ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ಜನವರಿಯಲ್ಲಿ ಮದುವೆಯಾಗಿದ್ದು ರಮ್ಯಾ ಗರ್ಭಿಣಿಯಾಗಿದ್ದಳು.
ವಿವಾದದ ಹಿನ್ನೆಲೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಶನಿವಾರ ಮನೆಗೆ ಮರಳಿದ ನಂತರ ಮತ್ತೆ ಜಗಳ ನಡೆದು ಸತೀಶ್ಕುಮಾರ್ ಪತ್ನಿಯ ಮೇಲೆ ಮರದ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ರಮ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜಾಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ತಂದೆ ಕೆ ಸೆಲ್ವಂ ಅವರು ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮಗಳ ಜಾತಿಯ ಕಾರಣದಿಂದ ಮಗುವಿಗೆ ಗರ್ಭಪಾತ ಮಾಡಿಸುವಂತೆ ಸತೀಶ್ಕುಮಾರ್ ಹೇಳಿದ್ದಾರೆ. ಸತೀಶ್ ಕುಮಾರ್ ಪೋಷಕರಾದ ಎಸ್ ಸೆಲ್ವಂ ಮತ್ತು ಎಸ್ ಪಂಚವರ್ಣಂ ಅವರನ್ನು ಭಾನುವಾರ ಬಂಧಿಸಲಾಗಿದ್ದು, 302 ಐಪಿಸಿ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಾವಿನ ಕುರಿತು ಆರ್ಡಿಒ ಮಟ್ಟದ ತನಿಖೆ ಆರಂಭಿಸಲಾಗಿದೆ.
ಸತೀಶ್ಕುಮಾರ್ಗೆ ಮಾನಸಿಕ ಸ್ಥೈರ್ಯ ಇರಲಿಲ್ಲ, ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ