ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ: ಜನರ ಹೃದಯಕ್ಕೆ ಕಾಲಿಟ್ಟ ರಾಹುಲ್- ಕಮಲ್ ಹಾಸನ್

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸುತ್ತಿದ್ದಂತೆಯೇ ಹಿರಿಯ ನಟ-ರಾಜಕಾರಣಿ ಕಮಲ್ ಹಾಸನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶುಭಾಶಯ ಸಲ್ಲಿಸಿದ್ದಾರೆ.
ಕಮಲ್ ಹಾಸನ್, ರಾಹುಲ್ ಗಾಂಧಿ
ಕಮಲ್ ಹಾಸನ್, ರಾಹುಲ್ ಗಾಂಧಿ
Updated on

ಚೆನ್ನೈ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಗಳಿಸುತ್ತಿದ್ದಂತೆಯೇ ಹಿರಿಯ ನಟ-ರಾಜಕಾರಣಿ ಕಮಲ್ ಹಾಸನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶುಭಾಶಯ ಸಲ್ಲಿಸಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತಕ್ಕೆ ಬೇಕಾದ 113 ಸ್ಥಾನಗಳನ್ನು ದಾಟುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಚ್ಚಳವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಮಲ್ ಹಾಸನ್, ಈ ಮಹತ್ವದ ಗೆಲುವಿಗೆ ರಾಹುಲ್ ಗಾಂಧೀಜಿಗೆ ಹೃತ್ಪೂರ್ವಕ ಅಭಿನಂದನೆಗಳು! ಗಾಂಧೀಜಿಯಂತೆ ನೀವು ಜನರ ಹೃದಯಕ್ಕೆ ಕಾಲಿಟ್ಟಿದ್ದೀರಿ ಮತ್ತು ಅವರು ಮಾಡಿದಂತೆ  ಸೌಮ್ಯವಾದ ರೀತಿಯಲ್ಲಿ ಪ್ರಪಂಚದ ಶಕ್ತಿಗಳನ್ನು ಪ್ರೀತಿ ಮತ್ತು  ವಿನಯತೆಯಿಂದ ಅಲುಗಾಡಿಸಬಹುದು ಎಂಬುದನ್ನು ಪ್ರದರ್ಶಿಸಿದ್ದೀರಿ ಎಂದಿದ್ದಾರೆ.

ನಿಮ್ಮ ವಿಶ್ವಾಸಾರ್ಹ ಮತ್ತು ಶ್ರೇಯಸ್ಸಿನ ವಿಧಾನ, ಧೈರ್ಯ ಅಥವಾ ಎದೆ ಬಡಿತವಿಲ್ಲದೆ ಜನರಿಗೆ ತಾಜಾ ಗಾಳಿಯ ಉಸಿರನ್ನು ತಂದಿದೆ, ವಿಭಜನೆ ತಿರಸ್ಕರಿಸಲು ನೀವು ಕರ್ನಾಟಕದ ಜನರನ್ನು ನಂಬಿದ್ದೀರಿ, ಅವರು ಒಗ್ಗಟ್ಟಿನಿಂದ ಪರಸ್ಪರ ಪ್ರತಿಕ್ರಿಯಿಸಿದ್ದಾರೆ. ಗೆಲುವು ಮಾತ್ರವಲ್ಲದೆ ಗೆಲುವಿನ ವಿಧಾನಕ್ಕೂ ಅಭಿನಂದನೆಗಳು ಎಂದು ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com