ಅದಾನಿ-ಹಿಂಡನ್ಬರ್ಗ್ ವಿವಾದ: ಅದಾನಿ ಸಮೂಹಕ್ಕೆ ಕ್ಲೀನ್ ಚಿಟ್ ಕೊಟ್ಟ ಸುಪ್ರೀಂ ಕೋರ್ಟ್ ಸಮಿತಿ!
ನವದೆಹಲಿ: ಅದಾನಿ-ಹಿಂಡೆನ್ಬರ್ಗ್ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು ಅದಾನಿ ಗ್ರೂಪ್ಗೆ ಕ್ಲೀನ್ ಚಿಟ್ ನೀಡಿದೆ.
ಅದಾನಿ ಗ್ರೂಪ್ ಮೇಲೆ ಹಿಂಡೆನ್ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಸಂಬಂಧ ಸಮಿತಿಯು ತನಿಖೆ ನಡೆಸುತ್ತಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯ ಕಡೆಯಿಂದ ಯಾವುದೇ ನಿಯಂತ್ರಕ ಲೋಪ ಕಂಡುಬರುತ್ತಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ. ತಜ್ಞರ ಸಮಿತಿಯು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ತನ್ನ ವರದಿಯಲ್ಲಿ, ಅದಾನಿ ಗ್ರೂಪ್ನಿಂದ ಷೇರು ಬೆಲೆಗಳಲ್ಲಿ ತಿರುಚುವಿಕೆ ನಡೆದಿಲ್ಲ. ಚಿಲ್ಲರೆ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಗ್ರೂಪ್ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ.
ಸಮಿತಿಯ ಪ್ರಕಾರ, ಸೆಬಿ ಒದಗಿಸಿದ ಡೇಟಾವು ಅದಾನಿ ಕಂಪನಿಗಳ ಷೇರುಗಳ ಬೆಲೆಯಲ್ಲಿ ಯಾವುದೇ ನಿರ್ದಿಷ್ಟ ಮಾದರಿಯಿಲ್ಲ ಎಂದು ಸೂಚಿಸಿದೆ. ಮಾರುಕಟ್ಟೆಗೆ ಅನುಗುಣವಾಗಿ ಇದರಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಹಿಂಡೆನ್ಬರ್ಗ್ ತನ್ನ ವರದಿಯಲ್ಲಿ ಅದಾನಿ ಗ್ರೂಪ್ ಷೇರುಗಳನ್ನು ಕುಶಲತೆಯಿಂದ ಬಳಸಿದೆ ಮತ್ತು ಬೆಲೆಯನ್ನು ಹೆಚ್ಚು ಮೌಲ್ಯೀಕರಿಸಿದೆ ಎಂದು ಆರೋಪಿಸಿತ್ತು.
ಸಮಿತಿಯ ಪ್ರಕಾರ, ಸೆಬಿ 13 ವಿವಿಧ ರೀತಿಯ ವಹಿವಾಟುಗಳನ್ನು ಗುರುತಿಸಿದೆ. ಸಕ್ರಿಯವಾಗಿ ಡೇಟಾವನ್ನು ಸಂಗ್ರಹಿಸುತ್ತಿದೆ ಮತ್ತು ಪರಿಶೀಲಿಸುತ್ತಿದೆ. ನಿಯಮಾವಳಿಗಳ ವಿಷಯದಲ್ಲಿ ಸೆಬಿಯ ವೈಫಲ್ಯವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. 2023ರ ಜನವರಿ 24ರ ನಂತರ ಅದಾನಿ ಷೇರುಗಳಲ್ಲಿ ಚಿಲ್ಲರೆ ಹೂಡಿಕೆದಾರರ ಹೂಡಿಕೆ ಹೆಚ್ಚಾಗಿದೆ ಎಂದು ಸಮಿತಿಯು ಗಮನಿಸಿದೆ. ಜನವರಿ 24 ರಂದು ಹಿಂಡೆನ್ಬರ್ಗ್ ತನ್ನ ವರದಿಯನ್ನು ಮಂಡಿಸಿದ ನಂತರ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಚಂಚಲತೆ ಕಂಡುಬಂದಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಅವರ ನೇತೃತ್ವದ ಸಮಿತಿಯನ್ನು ನ್ಯಾಯಾಲಯ ರಚಿಸಿತ್ತು. ಈ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಜೆಪಿ ದೇವಧರ್, ಕೆವಿ ಕಾಮತ್, ನಂದನ್ ನಿಲೇಕಣಿ, ಒಪಿ ಭಟ್ ಮತ್ತು ಸೋಮಶೇಖರ್ ಸುಂದರೇಶನ್ ಇದ್ದರು.
ಈ ಸುದ್ದಿಯ ನಡುವೆಯೇ ಅದಾನಿ ಸಮೂಹದ ಷೇರುಗಳಲ್ಲಿ ಚೇತರಿಕೆ ಕಂಡುಬಂದಿದೆ. ಸಮೂಹದ ಪ್ರಮುಖ ಕಂಪನಿಯಾದ ಅದಾನಿ ಎಂಟರ್ಪ್ರೈಸಸ್ನ ಷೇರುಗಳು ಶೇಕಡಾ 3ರಷ್ಟು ಏರಿಕೆ . ಅದೇ ಸಮಯದಲ್ಲಿ, ಅದಾನಿ ಪೋರ್ಟ್, ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್, ಅದಾನಿ ವಿಲ್ಮರ್ ಷೇರುಗಳಲ್ಲಿ ಸಹ ಬಲವಾದ ಚೇತರಿಕೆ ಕಂಡುಬಂದಿದೆ.
ಗೌತಮ್ ಅದಾನಿ ಗ್ರೂಪ್ನಿಂದ ಷೇರುಗಳ ಬೆಲೆಯ ದುರ್ಬಳಕೆಯ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಆಗಸ್ಟ್ 14ರವರೆಗೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸಮಯ ನೀಡಿದೆ ಎಂದು ವಿವರಿಸಿ. ಮಾರ್ಚ್ 2ರಂದು ನ್ಯಾಯಾಲಯವು ಸೆಬಿ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಆದೇಶ ಹೊರಡಿಸಿದೆ. ಈ ಅವಧಿಯು ಮೇ 2ರಂದು ಪೂರ್ಣಗೊಳ್ಳುವ ಮೊದಲು, ಸೆಬಿ ಹೆಚ್ಚುವರಿ 6 ತಿಂಗಳುಗಳನ್ನು ಕೇಳಿದೆ. ಆದರೆ, ಈ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ ಆಗಸ್ಟ್ 14ರವರೆಗೆ ಕಾಲಾವಕಾಶ ನೀಡಿದೆ.
ಗೌತಮ್ ಅದಾನಿ ನೇತೃತ್ವದ ಗ್ರೂಪ್ ನ ಷೇರು ಬೆಲೆಯಲ್ಲಿ ರಿಗ್ಗಿಂಗ್ ಆರೋಪದ ಬಗ್ಗೆ ತನಿಖೆ ನಡೆಸಲು ಆರು ಸದಸ್ಯರ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಮಾರ್ಚ್ 2ರ ತೀರ್ಪಿನಲ್ಲಿ ಆದೇಶಿಸಿತ್ತು. ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಇತ್ತೀಚಿನ ಏರಿಳಿತದ ನಿಖರವಾದ ಕಾರಣಗಳನ್ನು ಕಂಡುಹಿಡಿಯುವುದು ಸೇರಿದಂತೆ ಪರಿಸ್ಥಿತಿಯ ಸಂಪೂರ್ಣ ಮೌಲ್ಯಮಾಪನವನ್ನು ಸಮಿತಿಗೆ ವಹಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ