ದೆಹಲಿ: ವಿದ್ಯಾರ್ಥಿನಿ ಜೊತೆ ಮಾತನಾಡುತ್ತಿದ್ದ ಜೂನಿಯರ್ ವಿದ್ಯಾರ್ಥಿಯ ಬೆರಳು ಕತ್ತರಿಸಿದ ಸೀನಿಯರ್ ವಿದ್ಯಾರ್ಥಿ!

ದೆಹಲಿಯ ದ್ವಾರಕಾದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜೊತೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಯೊಬ್ಬ ಆತನ ಕೈಬೆರಳನ್ನು ಕತ್ತರಿಸಿದ್ದಾನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯ ದ್ವಾರಕಾದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜೊತೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಯೊಬ್ಬ ಆತನ ಕೈಬೆರಳನ್ನು ಕತ್ತರಿಸಿದ್ದಾನೆ. 

ಈ ಘಟನೆ ಅಕ್ಟೋಬರ್ 21ರಂದು ನಡೆದಿದೆ ಎನ್ನಲಾಗಿದ್ದರೂ ಇದೀಗ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಈ ಘಟನೆಯಿಂದ ವಿದ್ಯಾರ್ಥಿಯು ತುಂಬಾ ಹೆದರಿ ತನ್ನ ಪೋಷಕರಿಗೆ ಈ ಬಗ್ಗೆ ಏನನ್ನೂ ಹೇಳಲಿಲ್ಲ. ಈ ಹಿಂದೆ ತನ್ನ ಬೆರಳನ್ನು ಮೋಟಾರ್ ಸೈಕಲ್ ಚೈನ್ ನಿಂದ ಕತ್ತರಿಸಿರುವುದಾಗಿ ಮಾತ್ರ ಹೇಳಿದ್ದನು. ಆದರೆ ಕಳೆದ ಶುಕ್ರವಾರ, ಅವನು ತನ್ನ ಪೋಷಕರಿಗೆ ನಡೆದ ಘಟನೆ ಸಂಪೂರ್ಣ ಸತ್ಯವನ್ನು ಹೇಳಿದ್ದಾರೆ. ನಂತರ ಅವರು ಪೊಲೀಸರಿಗೆ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಶಾಲೆಯ ಹೊರಗೆ ಅವನನ್ನು ಹಿಡಿದು ಪಾರ್ಕ್ ಗೆ ಕರೆದೊಯ್ದರು ಎಂದು ಸಂತ್ರಸ್ತ ಹೇಳಿದ್ದಾನೆ. ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಆತನ ಟ್ಯೂಷನ್ ವಿದ್ಯಾರ್ಥಿ ನಡುವಿನ ಸ್ನೇಹಕ್ಕೆ ಆಕ್ಷೇಪವಿದೆ ಎಂದು ಆರೋಪಿ ಹೇಳಿದ್ದಾನೆ. ಇದಾದ ಬಳಿಕ ವಿದ್ಯಾರ್ಥಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಬೆರಳನ್ನು ಕತ್ತರಿಸಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com