155 ಕೋಟಿ ರೂ. ದುರುಪಯೋಗ ಆರೋಪ: ಅಸ್ಸಾಂನ ಎನ್‌ಆರ್‌ಸಿಯ ಮಾಜಿ ಸಂಯೋಜಕ ಪ್ರತೀಕ್ ಹಜೇಲಾಗೆ ಸಮನ್ಸ್

ಅಸ್ಸಾಂ ನ್ಯಾಯಾಲಯವು ನವೆಂಬರ್ 17ರಂದು ತನ್ನ ಮುಂದೆ ಹಾಜರಾಗುವಂತೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಜಿ ರಾಜ್ಯ ಸಂಯೋಜಕ ಪ್ರತೀಕ್ ಹಜೇಲಾಗೆ ಸಮನ್ಸ್ ನೀಡಿದೆ.
ಪ್ರತೀಕ್ ಹಜೇಲಾ
ಪ್ರತೀಕ್ ಹಜೇಲಾ
Updated on

ಗುವಾಹಟಿ: ಅಸ್ಸಾಂ ನ್ಯಾಯಾಲಯವು ನವೆಂಬರ್ 17ರಂದು ತನ್ನ ಮುಂದೆ ಹಾಜರಾಗುವಂತೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಜಿ ರಾಜ್ಯ ಸಂಯೋಜಕ ಪ್ರತೀಕ್ ಹಜೇಲಾಗೆ ಸಮನ್ಸ್ ನೀಡಿದೆ.

ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಲೂಯಿಟ್ ಕುಮಾರ್ ಬರ್ಮನ್ ಅವರು ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯ ಆಧಾರದ ಮೇಲೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ವಿಪ್ರೋ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಉತ್ಪಲ್ ಹಜಾರಿಕಾ ಅವರೊಂದಿಗೆ ಹಜೇಲಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಅರ್ಜಿದಾರರು ಸೆಕ್ಷನ್ 397 CrPC ಅಡಿಯಲ್ಲಿ ಕ್ರಿಮಿನಲ್ ಪರಿಷ್ಕರಣೆ ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಿ. ಆಕ್ಷೇಪಣೆಗಳಿದ್ದಲ್ಲಿ 2023ರ ನವೆಂಬರ್ 17ರಂದು ಬೆಳಗ್ಗೆ 10.30ಕ್ಕೆ ಈ ನ್ಯಾಯಾಲಯದ ಮುಂದೆ ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ತಿಳಿಸಲಾಗಿದೆ ಎಂದು ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ ತನ್ನ ಆದೇಶದಲ್ಲಿ ತಿಳಿಸಿದೆ.

ಸಮನ್ಸ್ ನೀಡಲಾಗಿರುವ ವ್ಯಕ್ತಿಗಳು ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದರೆ, ಪ್ರಕರಣವನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎನ್‌ಆರ್‌ಸಿ ಕುರಿತು ಭಾರತದ ಕಂಟ್ರೋಲರ್ ಮತ್ತು ಆಡಿಟರ್-ಜನರಲ್ ವರದಿಯನ್ನು ಆಧರಿಸಿ ಬರ್ಮನ್ ಅರ್ಜಿ ಸಲ್ಲಿಸಿದ್ದರು. ಎನ್‌ಆರ್‌ಸಿ ನವೀಕರಣದ ಸಂದರ್ಭದಲ್ಲಿ ಹಜೇಲಾ ಅವರು 155 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಸ್ಸಾಂನ 3.3 ಕೋಟಿ ಅರ್ಜಿದಾರರಲ್ಲಿ 19.06 ಲಕ್ಷಕ್ಕೂ ಹೆಚ್ಚು ಜನರು 2019ರ ಆಗಸ್ಟ್ ನಲ್ಲಿ ಪ್ರಕಟಿಸಲಾದ NRC ಸಂಪೂರ್ಣ ಪಟ್ಟಿಯಿಂದ ಹೊರಗುಳಿದಿದ್ದಾರೆ. ಹಜೇಲಾ ಅವರು ಅಸ್ಸಾಂ-ಮೇಘಾಲಯ ಕೇಡರ್‌ನ 1995-ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಅವರು ಆಗಸ್ಟ್‌ನಲ್ಲಿ ಅಸ್ಸಾಂ ಸರ್ಕಾರದಿಂದ ವಿಆರ್‌ಎಸ್‌ಗೆ ಅನುಮೋದನೆ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com