ಭುವನೇಶ್ವರ್: ಆಂಧ್ರಪ್ರದೇಶದ ವಿಜಿಯನಗರಂ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತಕ್ಕೆ ಮಾನವ ಲೋಪವೇ ಕಾರಣವಾಗಿರಬಹುದು ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಹೇಳಿದೆ.
ರೈಲು ಅಪಘಾತದಲ್ಲಿ 3 ಬೋಗಿಗಳು ಹಳಿ ತಪ್ಪಿದ ಪರಿಣಾಮ 8 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ವಿಶಾಖಪಟ್ಟಣಂ- ರಾಯಗಢ ಪ್ಯಾಸೆಂಜರ್ ರೈಲು ಮಾನವ ದೋಷದಿಂದಾಗಿ ಸಿಗ್ನಲ್ ಮೀರಿದ್ದು, ಇದೇ ಅಪಘಾತಕ್ಕೆ ಕಾರಣವಿರಬಹುದು ಎಂದು ಇಸಿಓಆರ್ ಸಿಪಿಆರ್ ಒ ಬಿಸ್ವಜೀತ್ ಸಾಹೂ ವರದಿಗಾರರಿಗೆ ಹೇಳಿದ್ದಾರೆ.
ನಿಲುಗಡೆಗೆ ಸಿಗ್ನಲ್ ತೋರುತ್ತಿದ್ದರೂ ಅದನ್ನು ಗಮನಿಸದೇ ರೈಲು ಚಲಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಇದನ್ನೇ ಸಿಗ್ನಲ್ ಓವರ್ ಶೂಟಿಂಗ್ ಎನ್ನುತ್ತಾರೆ ಎಂದು ಸಾಹು ತಿಳಿಸಿದ್ದಾರೆ.
ಅಪಘಾತದ ಪರಿಣಾಮವಾಗಿ ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲಿನ ಹಿಂಭಾಗದಿಂದ ಎರಡು ಕೋಚ್ಗಳು ಮತ್ತು ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ನ ಲೊಕೊ ಹಳಿತಪ್ಪಿದೆ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
Advertisement