ಸಂಸತ್ತಿನಲ್ಲಿ 'ಭಾರತ್ ಮಾತಾ ಕಿ ಹತ್ಯಾ' ಎಂದು ಹೇಳಬಾರದು: ಕೇಂದ್ರ ಸರ್ಕಾರ

ಅಧೀರ್ ರಂಜನ್ ಚೌಧರಿ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕಡೆಗೆ ಮೊದಲು ಸ್ಪೀಕರ್ ಮತ್ತು ಸಂಸದ್ ಟಿವಿಯ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು. ನಿನ್ನೆ ರಾಹುಲ್ ಗಾಂಧಿ ಭಾಷಣ ಮಾಡುವಾಗ ಎಂದಿಗೂ ವಿಚಲಿತರಾಗಲಿಲ್ಲ, ಆದರೆ 'ಭಾರತ್ ಮಾತಾ ಕಿ ಹತ್ಯೆ' ಎಂಬ ಪದವನ್ನು ಸಂಸತ್ತಿನಲ್ಲಿ ಬಳಸುವಂತಿಲ್ಲ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಾಲ್ ಪ್ರತಿಕ್ರಿಯಿಸಿದ್ದಾರೆ. 
ರಾಹುಲ್ ಗಾಂಧಿ ಭಾಷಣ
ರಾಹುಲ್ ಗಾಂಧಿ ಭಾಷಣ

ನವದೆಹಲಿ: ರಾಹುಲ್ ಗಾಂಧಿ ಸದನದಲ್ಲಿ ನಿನ್ನೆ ನೀಡಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಅಸಂಸದೀಯ ಪದವಾಗಿದ್ದರೆ ಅದನ್ನು ತೆಗೆದುಹಾಕಲು ಅವಕಾಶವಿದೆ, ರಾಹುಲ್ ಗಾಂಧಿ ಅಂತಹ ಯಾವುದೇ ಅಸಂಸದೀಯ ಹೇಳಿಕೆ ನೀಡಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಭಾರತ ಮಾತೆಯನ್ನು ಅವಮಾನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯವನ್ನು ಲೋಕಸಭೆ ಸ್ಪೀಕರ್‌ಗೆ ತಿಳಿಸಿದ್ದೇನೆ ಮತ್ತು ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಅಧೀರ್ ರಂಜನ್ ಚೌಧರಿ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕಡೆಗೆ ಮೊದಲು ಸ್ಪೀಕರ್ ಮತ್ತು ಸಂಸದ್ ಟಿವಿಯ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು. ನಿನ್ನೆ ರಾಹುಲ್ ಗಾಂಧಿ ಭಾಷಣ ಮಾಡುವಾಗ ಎಂದಿಗೂ ವಿಚಲಿತರಾಗಲಿಲ್ಲ, ಆದರೆ 'ಭಾರತ್ ಮಾತಾ ಕಿ ಹತ್ಯೆ' ಎಂಬ ಪದವನ್ನು ಸಂಸತ್ತಿನಲ್ಲಿ ಬಳಸುವಂತಿಲ್ಲ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಾಲ್ ಪ್ರತಿಕ್ರಿಯಿಸಿದ್ದಾರೆ. 

ಮಣಿಪುರದ ಹಿಂಸಾಚಾರವನ್ನು ನಿಭಾಯಿಸಿದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹರಿಹಾಯ್ದರು. ಬಿಜೆಪಿ ರಾಜಕೀಯ ಆ  ರಾಜ್ಯದಲ್ಲಿ 'ಭಾರತ ಮಾತೆಯನ್ನು ಕೊಂದಿದೆ' ಎಂದು ಆರೋಪಿಸಿದಾಗ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮೃತಿ ಅವರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. 

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಎರಡನೇ ದಿನದ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯು ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಆಡಳಿತ ಪಕ್ಷದ ಸದಸ್ಯರು ಭಾರತದ 'ರಕ್ಷಕರಲ್ಲ' ಎಂದು ಗಾಂಧಿ ಹೇಳಿದಾಗ, ಗೃಹ ಸಚಿವ ಶಾ ಮಣಿಪುರದಲ್ಲಿ ಶಾಂತಿಗಾಗಿ ಮನವಿ ಮಾಡಿದರು ಅಲ್ಲದೇ, ಜನಾಂಗೀಯ ಹಿಂಸಾಚಾರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮೈಟೈ ಸಮುದಾಯಗಳೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com