ಅಮಿತ್ ಶಾ
ಅಮಿತ್ ಶಾ

ಪಿಒಕೆ ನಮ್ಮದು, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ

370ನೇ ವಿಧಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Published on

ನವದೆಹಲಿ: 370ನೇ ವಿಧಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 24 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದು ನಮ್ಮದು, ಅದನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಹೇಳುತ್ತಿದ್ದೇನೆ ಎಂದರು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಆರ್ಟಿಕಲ್ 370 ರ ತೀರ್ಪು ನೀಡುವಾಗ ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ವಿಲೀನಗೊಂಡ ನಂತರ ಆಂತರಿಕ ಸಾರ್ವಭೌಮತ್ವದ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದ್ದರು. ಆರ್ಟಿಕಲ್ 370 ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ಅಮಿತ್ ಶಾ ಹೇಳಿದರು.

ಕಾಶ್ಮೀರದ ವಿಲೀನಕ್ಕೆ ಜವಾಹರಲಾಲ್ ನೆಹರು ಹೊಣೆಗಾರ ಎಂದು ಅಮಿತ್ ಶಾ ಹೇಳಿದರು. ನೆಹರೂ ಕಾಶ್ಮೀರವನ್ನು ಅರ್ಧದಷ್ಟು ಬಿಟ್ಟು ಹೋದರು. ಅಕಾಲಿಕ ಕದನ ವಿರಾಮ ಇಲ್ಲದಿದ್ದರೆ ಇಂದು ಪಾಕ್ ಆಕ್ರಮಿತ ಕಾಶ್ಮೀರ ಇರುತ್ತಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಎರಡೂ ವಿಧೇಯಕಗಳನ್ನು ಕಳೆದ ವಾರ ಲೋಕಸಭೆ ಅಂಗೀಕರಿಸಿತ್ತು.

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಹಿಂದೆ ಜಮ್ಮುವಿನಲ್ಲಿ 37 ಸ್ಥಾನಗಳಿದ್ದವು. ಈಗ ಹೊಸ ಡಿಲಿಮಿಟೇಶನ್ ಆಯೋಗದ ನಂತರ 43 ಸ್ಥಾನಗಳಿವೆ. ಮೊದಲು ಕಾಶ್ಮೀರದಲ್ಲಿ 46 ಸ್ಥಾನಗಳಿದ್ದರೆ, ಈಗ 47 ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 24 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ ಏಕೆಂದರೆ ಪಿಒಕೆ ನಮ್ಮದು. ಇದಕ್ಕೂ ಮುನ್ನ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಟಾರ್ಗೆಟ್ ಮಾಡಿದ್ದರು. ಇಂದು 370ನೇ ವಿಧಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ಬಂದಿದೆ ಎಂದರು. ಅದೇನೇ ಇದ್ದರೂ, ಕಾಂಗ್ರೆಸ್ ಇದನ್ನು ಒಪ್ಪುವುದಿಲ್ಲ ಮತ್ತು 370ನೇ ವಿಧಿಯನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ನಂಬುತ್ತದೆ. ವಾಸ್ತವ ಏನೆಂಬುದನ್ನು ನಾನು ಅವರಿಗೆ ವಿವರಿಸಲಾರೆ.

370ನೇ ವಿಧಿ ಪ್ರತ್ಯೇಕತಾವಾದವನ್ನು ಹೆಚ್ಚಿಸಿತು
370ನೇ ವಿಧಿಯು ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತದೆ. ಪ್ರತ್ಯೇಕತಾವಾದವು ಭಯೋತ್ಪಾದನೆಗೆ ಕಾರಣವಾಯಿತು ಎಂದು ಅಮಿತ್ ಶಾ ಹೇಳಿದರು. ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಹುದು ಆದರೆ ಇತಿಹಾಸ ಮತ್ತು ಸಮಯವು ನಿರ್ಧಾರ ತಪ್ಪು ಎಂದು ಸಾಬೀತುಪಡಿಸಿದಾಗ ಒಬ್ಬರು ರಾಷ್ಟ್ರೀಯ ಹಿತಾಸಕ್ತಿಗೆ ಮರಳಬೇಕು. ನಾನು ಈಗಲೂ ಹೇಳುತ್ತೇನೆ, ಹಿಂತಿರುಗಿ ಬನ್ನಿ ಇಲ್ಲದಿದ್ದರೆ ಉಳಿದಿರುವ ಸಂಸದರ ಸಂಖ್ಯೆಯೂ ಇರುವುದಿಲ್ಲ ಎಂದು ಶಾ ಕಾಂಗ್ರೆಸ್‌ಗೆ ಹೇಳಿದರು. ನೀವು ಇಂದಿಗೂ ಈ ನಿರ್ಧಾರಕ್ಕೆ ಅಂಟಿಕೊಳ್ಳಲು ಬಯಸಿದರೆ, ಸಾರ್ವಜನಿಕರು ನೋಡುತ್ತಿದ್ದಾರೆ - 2024 ರಲ್ಲಿ ಸ್ಪರ್ಧೆ ನಡೆಯಲಿದೆ ಮತ್ತು ಪಿಎಂ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ. ನಿನ್ನೆಯೂ ಹಲವು ಪ್ರಶ್ನೆಗಳು ಎದ್ದಿವೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಮಸೂದೆ ಇನ್ನೂ ಬಾಕಿ ಉಳಿದಿದ್ದು, ತರಾತುರಿಯಲ್ಲಿ ತರಲಾಗುತ್ತಿದೆ ಎಂದು ಲೋಕಸಭೆಯಲ್ಲಿ ಹೇಳಲಾಗಿದೆ. ಸುಪ್ರಿಂ ಕೋರ್ಟ್ ನ್ಯಾಯ ನೀಡಲಿದ್ದು, ಅದಕ್ಕಾಗಿ ಕಾಯಬೇಕು. ಇವೆಲ್ಲವೂ ನ್ಯಾಯಕ್ಕಾಗಿ ಅಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಬಾಕಿಯಿಡಲು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com