ರಾಮ ನನ್ನ ಹೃದಯದಲ್ಲಿದ್ದಾನೆ, ಶೋ-ಆಫ್ ಅಗತ್ಯವಿಲ್ಲ: ಕಪಿಲ್ ಸಿಬಲ್

ಭಗವಾನ್ ರಾಮ ನನ್ನ ಹೃದಯದಲ್ಲಿದ್ದು, ತೋರಿಸುವ ಯಾವುದೇ  ಅಗತ್ಯವಿಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ್ ಲಲ್ಲಾ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಉದ್ದೇಶವಿದೆಯೇ ಎಂದು ಸಿಬಲ್ ಅವರನ್ನು ಕೇಳಿದಾಗ ಈ ಹೇಳಿಕೆ ನೀಡಿದರು. 
ಕಪಿಲ್ ಸಿಬಲ್
ಕಪಿಲ್ ಸಿಬಲ್
Updated on

ನವದೆಹಲಿ: ಭಗವಾನ್ ರಾಮ ನನ್ನ ಹೃದಯದಲ್ಲಿದ್ದು, ತೋರಿಸುವ ಯಾವುದೇ  ಅಗತ್ಯವಿಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ್ ಲಲ್ಲಾ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಉದ್ದೇಶವಿದೆಯೇ ಎಂದು ಸಿಬಲ್ ಅವರನ್ನು ಕೇಳಿದಾಗ ಈ ಹೇಳಿಕೆ ನೀಡಿದರು. 

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, "ನನ್ನ ಹೃದಯದಲ್ಲಿ ರಾಮನಿದ್ದಾನೆ, ತೋರಿಸಿಕೊಳ್ಳುವ ಅಗತ್ಯವಿಲ್ಲ, ನಾನು ಹೇಳಿದ್ದು, ನನ್ನ ಹೃದಯದಿಂದ ಬಂದದ್ದು ಏಕೆಂದರೆ  ಈ ಎಲ್ಲ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ್ ನನ್ನ ಹೃದಯದಲ್ಲಿದ್ದರೆ ಮತ್ತು ನನ್ನ ಪ್ರಯಾಣದುದ್ದಕ್ಕೂ ರಾಮ್ ನನಗೆ ಮಾರ್ಗದರ್ಶನ ನೀಡಿದ್ದಾನೆ. ಅದರರ್ಥ ನಾನು ಏನನ್ನಾದರೂ ಸರಿಯಾಗಿ ಮಾಡಿದ್ದೇನೆ ಎಂದರು.

ಇಡೀ ರಾಮಮಂದಿರ ನಿರ್ಮಾಣ ವಿಷಯ "ಶೋ-ಆಫ್" ಆಗಿದೆ ಏಕೆಂದರೆ ಆಡಳಿತ ಪಕ್ಷದ ನಡವಳಿಕೆ, ಸ್ವಭಾವವು ಎಲ್ಲಿಯೂ ರಾಮನನ್ನು ಹೋಲುವುದಿಲ್ಲ "ಈ ಇಡೀ ವಿಷಯವು ಪ್ರದರ್ಶನವಾಗಿದೆ. ಬಿಜೆಪಿಯವರು ರಾಮನ ಬಗ್ಗೆ ಮಾತನಾಡುತ್ತಾರೆ ಆದರೆ ಅವರ ನಡವಳಿಕೆ, ಅವರ ಸ್ವಭಾವವು ರಾಮನಿಗೆ ಎಲ್ಲಿಯೂ ಹತ್ತಿರವಾಗುವುದಿಲ್ಲ. ಸತ್ಯತೆ, ಸಹನೆ, ತ್ಯಾಗ ಮತ್ತು ಇತರರನ್ನು ಗೌರವಿಸುವುದು ರಾಮನ ಕೆಲವು ಗುಣಲಕ್ಷಣಗಳು, ಆದರೆ ಅವರು ಅದರ ವಿರುದ್ಧವಾಗಿದ್ದಾರೆ. ನಾವೇ ರಾಮ ಮಂದಿರ ನಿರ್ಮಾಣ ಮಾಡಿದ್ದುಅಂತಾ ಜಂಬಾ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ರಾಮನ ತತ್ವಗಳನ್ನು ಹೃದಯದಲ್ಲಿಟ್ಟುಕೊಂಡು ಅವರ ತತ್ವಗಳನ್ನು ಅನುಸರಿಸಿ ಸಾಂವಿಧಾನಿಕ ಗುರಿಗಳನ್ನು ಪೂರೈಸುವ ಅಗತ್ಯವಿದೆ ಎಂದು ಹಿರಿಯ ರಾಜಕಾರಣಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com