ನವದೆಹಲಿ: ಜಮ್ಮು-ಕಾಶ್ಮೀರ ಪೊಲೀಸ್ ಕಮಾಂಡೋ ಮುದಾಸಿರ್ ಅಹ್ಮದ್ ಶೇಖ್ (ಮರಣೋತ್ತರವಾಗಿ) ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಮಾಂಡೋ ಮುದಾಸಿರ್ ಅಹ್ಮದ್ ಶೇಖ್, ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ಜೆ & ಕೆ ಪೋಲಿಸ್ ಸಹೋದ್ಯೋಗಿಗಳಿಗೆ ಬಿಂದಾಸ್ ಎಂದೇ ಹೆಸರಾಗಿದ್ದರು.
ಕಳೆದ ವರ್ಷ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಶೇಖ್ ಹುತಾತ್ಮರಾಗಿದ್ದರು. ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾದಾಟದಲ್ಲಿ ಮೂವರು ಉಗ್ರರು ಹತರಾಗಿದ್ದರು.
Advertisement