ಅದು ಭಾರತದ ಆಂತರಿಕ ವಿಷಯ ಆದರೆ ಹೃದಯವಿದ್ರಾವಕ; ಮಣಿಪುರದ ಬಗ್ಗೆ ಅಮೇರಿಕಾ ರಾಯಭಾರ ಕಚೇರಿ

ಮಣಿಪುರದಲ್ಲಿನ ಹಿಂಸಾಚಾರ ಭಾರತದ ಆಂತರಿಕ ವಿಷಯವಾಗಿದೆ. ಆದರೆ ಅದು ಹೃದಯವಿದ್ರಾವಕ ಎಂದು ಅಮೇರಿಕಾ ರಾಯಭಾರ ಕಚೇರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎರಿಕ್ ಗಾರ್ಸೆಟ್ಟಿ
ಎರಿಕ್ ಗಾರ್ಸೆಟ್ಟಿ
Updated on

ನವದೆಹಲಿ: ಮಣಿಪುರದಲ್ಲಿನ ಹಿಂಸಾಚಾರ ಭಾರತದ ಆಂತರಿಕ ವಿಷಯವಾಗಿದೆ. ಆದರೆ ಅದು ಹೃದಯವಿದ್ರಾವಕ ಎಂದು ಅಮೇರಿಕಾ ರಾಯಭಾರ ಕಚೇರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ನವದೆಹಲಿಯಲ್ಲಿರುವ ಅಮೇರಿಕಾದ ಉನ್ನತ ಮಟ್ಟದ ರಾಯಭಾರ ಕಚೇರಿ ಅಧಿಕಾರಿ ಎರಿಕ್ ಗಾರ್ಸೆಟ್ಟಿ,  ಮನುಷ್ಯರು ನೋವು ಎದುರಿಸಿದಾಗಲೆಲ್ಲಾ ಹೃದಯ ಒಡೆಯುತ್ತದೆ ಎಂದು ಹೇಳಿದ್ದಾರೆ. 

ಪ್ರಸ್ತುತ US ಸರ್ಕಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆಗಾಗಿ ವಾಷಿಂಗ್ಟನ್‌ನಲ್ಲಿರುವ ಗಾರ್ಸೆಟ್ಟಿ, ಮಣಿಪುರದಲ್ಲಿ ಜನಸಮೂಹದಿಂದ ಇಬ್ಬರು ವಿವಸ್ತ್ರಗೊಂಡ ಮಹಿಳೆಯರನ್ನು ಕ್ರೂರವಾಗಿ ನಡೆಸುತ್ತಿರುವ ಗ್ರಾಫಿಕ್ ವೀಡಿಯೊದ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಮಣಿಪುರ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಘಟನೆ 140 ಕೋಟಿ ಭಾರತೀಯರನ್ನು ನಾಚಿಕೆಪಡಿಸಿದೆ ಎಂದು ಹೇಳಿದ್ದಾರೆ "ಯಾವುದೇ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಮತ್ತು ಕಾನೂನು ತನ್ನ "ಪೂರ್ಣ ಶಕ್ತಿ ಮತ್ತು ದೃಢತೆ" ಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ. 

ನಾನು ವೀಡಿಯೋ ನೋಡಿಲ್ಲ. ಇದೇ ಮೊದಲ ಬಾರಿಗೆ ಇದರ ಬಗ್ಗೆ ಕೇಳಿದ್ದೇನೆ. ಆದರೆ ನಾನು ಮೊದಲೇ ಹೇಳಿದಂತೆ, ನಮ್ಮ ನೆರೆಹೊರೆಯಲ್ಲಾಗಲಿ ಅಥವಾ ಜಗತ್ತಿನಾದ್ಯಂತ ಅಥವಾ ನಾವು ವಾಸಿಸುವ ದೇಶದಲ್ಲಿ ಮಾನವ ದುಃಖ ಬಂದಾಗಲೆಲ್ಲಾ ನಮ್ಮ ಹೃದಯಗಳು ಒಡೆಯುತ್ತವೆ, ”ಎಂದು ಯುಎಸ್ ರಾಯಭಾರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com