ಕಾರ್ಗಿಲ್ ವಿಜಯ ದಿನ: ಹುತಾತ್ಮ ಯೋಧರಿಗೆ ರಕ್ಷಣಾ ಸಚಿವರ ಗೌರವಾರ್ಪಣೆ, ತ್ಯಾಗ ಬಲಿದಾನದ ಒಂದು ಮೆಲುಕು

ನಮ್ಮ ದೇಶದ ಗಡಿ ಭಾಗದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಭಾರತೀಯರಿಗಾಗಿ ಬಿಸಿಲು, ಚಳಿ ಹಾಗೂ ಮಳೆ ಎನ್ನದೇ ಸೈನಿಕರು ಹಗಲು-ರಾತ್ರಿ ಶ್ರಮಿಸುತ್ತಿರುತ್ತಾರೆ. ಜುಲೈ 26, ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಕಟುವಾದ ಅಧ್ಯಾಯವಾಗಿ ನಿಂತಿದೆ.
ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
Updated on

ನವದೆಹಲಿ/ಲಡಾಕ್: ನಮ್ಮ ದೇಶದ ಗಡಿ ಭಾಗದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಭಾರತೀಯರಿಗಾಗಿ ಬಿಸಿಲು, ಚಳಿ ಹಾಗೂ ಮಳೆ ಎನ್ನದೇ ಸೈನಿಕರು ಹಗಲು-ರಾತ್ರಿ ಶ್ರಮಿಸುತ್ತಿರುತ್ತಾರೆ. ಜುಲೈ 26, ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಕಟುವಾದ ಅಧ್ಯಾಯವಾಗಿ ನಿಂತಿದೆ.

ರಾಷ್ಟ್ರದ ಸಾಮೂಹಿಕ ಸ್ಮರಣೆಯಲ್ಲಿ ಶಾಶ್ವತ ಸ್ಥಾನ ಪಡೆಯುತ್ತದೆ. ಆಪರೇಷನ್ ವಿಜಯ್ ನ್ನು ಮುನ್ನಡೆಸಿದ ಕಾರ್ಗಿಲ್ ಯುದ್ಧ ವೀರರ ಶೌರ್ಯ, ತ್ಯಾಗ-ಬಲಿದಾನಕ್ಕೆ ಸಾಕ್ಷಿಯಾಗಿದೆ. 

ಪ್ರತಿ ವರ್ಷ ಜುಲೈ 26 ರಂದು, ಭಾರತವು ಕಾರ್ಗಿಲ್ ವಿಜಯ್ ದಿವಸ್ ಎಂದು ಸ್ಮರಿಸುತ್ತದೆ. ಇದು ತಮ್ಮ ಮಾತೃಭೂಮಿಗಾಗಿ ಅಂತಿಮ ತ್ಯಾಗ ಮಾಡಿದ ಧೈರ್ಯಶಾಲಿ ಸೈನಿಕರನ್ನು ಗೌರವಿಸಲು ಸಮರ್ಪಿತವಾದ ಸಂದರ್ಭವಾಗಿದೆ. 

ಲಡಾಕ್ ನಲ್ಲಿ ರಕ್ಷಣಾ ಸಚಿವರಿಂದ ಹುತಾತ್ಮ ಯೋಧರಿಗೆ ಗೌರವ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಕ್ ನ ಕಾರ್ಗಿಲ್ ಜಿಲ್ಲೆಯಲ್ಲಿರುವ ಡ್ರಾಸ್ಸ್ ಪ್ರದೇಶಲ್ಲಿ ಕಾರ್ಗಿಲ್ ವಿಜಯ ದಿನದ 24ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು. 

ಇಂದು ಬೆಳಗ್ಗೆಯೇ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ರಕ್ಷಣಾ ಮಂತ್ರಿಗಳು ಹುತಾತ್ಮ ಯೋಧರಿಗೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಸಹ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದರು. ಗೌರವಾರ್ಥವಾಗಿ ಅವರಿಗೆ ಸ್ಮರಣಿಕೆ ಮತ್ತು ಶಾಲನ್ನು ಸಹ ನೀಡಿದರು.

ರಕ್ಷಣಾ ಪಡೆ ಮುಖ್ಯಸ್ಥ(CDS) ಜನರಲ್ ಅನಿಲ್ ಚೌಹಾಣ್ ಸಹ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿದರು. 

ಕಾರ್ಗಿಲ್ ಯುದ್ಧ: ಕಾರ್ಗಿಲ್ ಸಂಘರ್ಷವು ಮೇ ಮತ್ತು ಜುಲೈ 1999 ರ ನಡುವೆ ಭಾರತದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆಯಿತು. ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ಒಳನುಸುಳುವಿಕೆ ಮತ್ತು ಒಳನುಗ್ಗುವಿಕೆಯ ಪರಿಣಾಮವಾಗಿ ಯುದ್ಧ ನಡೆಯಿತು. ಅಂದು ಪಾಕಿಸ್ತಾನ ಪ್ರಧಾನಿಯಾಗಿದ್ದವರು ಜನರಲ್ ಪರ್ವೇಜ್ ಮುಷರಫ್. 

“ಆಪರೇಷನ್ ವಿಜಯ್” ಎಂಬ ಪದವು ಆಕ್ರಮಿತ ಕಾರ್ಗಿಲ್ ನ್ನು ಮರಳಿ ವಶಪಡಿಸಿಕೊಳ್ಳಲು ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಸೂಚಿಸುತ್ತದೆ.

ಕಾರ್ಗಿಲ್ ಯುದ್ಧವು ವಿಶಿಷ್ಟವಾದದ್ದು. ಇದು ಎತ್ತರದ ಅತ್ಯಂತ ಕ್ಲಿಷ್ಟಕರ ಪ್ರದೇಶದಲ್ಲಿ ನಡೆದ ಯುದ್ಧವಾಗಿದೆ. ಕೆಲವು ಪ್ರದೇಶಗಳು 18,000 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿವೆ. ಇದು ಯುದ್ಧಕ್ಕೆ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾಗಿದೆ.

ಈ ಸಂಘರ್ಷವು ಎರಡೂ ಕಡೆಗಳಲ್ಲಿ ಸಾವಿರಾರು ಯೋಧರ ಬಲಿ ತೆಗೆದುಕೊಂಡಿತು, ಸುಮಾರು 500 ಭಾರತೀಯ ಮತ್ತು 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡರು. ಯುದ್ಧವು ಫಿರಂಗಿ, ವಾಯು ಶಕ್ತಿ ಮತ್ತು ಪದಾತಿ ದಳದ ಕಾರ್ಯಾಚರಣೆಗಳ ವ್ಯಾಪಕ ಬಳಕೆಯನ್ನು ಒಳಗೊಂಡಿತ್ತು.

ಭಾರತೀಯ ವಾಯುಪಡೆಯು ಸಂಘರ್ಷದ ಸಮಯದಲ್ಲಿ ವೈಮಾನಿಕ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು, ಶತ್ರುಗಳನ್ನು ವ್ಯೂಹಾತ್ಮಕ ಸ್ಥಾನಗಳಿಂದ ಹೊರಹಾಕಲು ನಿರ್ಣಾಯಕ ವಾಯುದಾಳಿಗಳನ್ನು ನಡೆಸಿತು.

ಭಾರತೀಯ ಸೇನಾ ಅಧಿಕಾರಿಯಾಗಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಯುದ್ಧದ ಸಮಯದಲ್ಲಿ ಅವರ ಶೌರ್ಯ ಮತ್ತು ಧೈರ್ಯಶಾಲಿ ಕಾರ್ಯಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. “ಯೇ ದಿಲ್ ಮಾಂಗೆ ಮೋರ್” ಎಂಬ ಅವರ ಪ್ರಸಿದ್ಧ ಪದಗಳು ಅಪ್ರತಿಮವಾಗಿವೆ.

ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ರ ಆಯಕಟ್ಟಿನ ಶಿಖರಗಳನ್ನು ಪುನಃ ವಶಪಡಿಸಿಕೊಂಡಿತು. ಕಾರ್ಗಿಲ್ ಯುದ್ಧವು 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಮೊದಲ ಬಾರಿಗೆ ಎರಡು ದೇಶಗಳು ನೇರ ಮಿಲಿಟರಿ ಸಂಘರ್ಷದಲ್ಲಿ ತೊಡಗಿದವು.

ಈ ಸಂಘರ್ಷವು ಅಂತಾರಾಷ್ಟ್ರೀಯ ಗಮನವನ್ನು ಸೆಳೆಯಿತು, ಈ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ವಿವಿಧ ದೇಶಗಳು ಪಾಕಿಸ್ತಾನವನ್ನು ಆಗ ಒತ್ತಾಯಿಸಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com