ಉತ್ತರಾಖಂಡ ಸುರಂಗ ಕುಸಿತ: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ, ದೆಹಲಿಯಿಂದ ಹೊಸ ಡ್ರಿಲ್ ಮಷಿನ್ ರವಾನೆ

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಬಿದ್ದಿದ್ದು, ಸುರಂಗದಲ್ಲಿ 40 ಕಾರ್ಮಿಕರು ಸಿಲುಕಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ
Updated on

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಬಿದ್ದಿದ್ದು, ಸುರಂಗದಲ್ಲಿ 40 ಕಾರ್ಮಿಕರು ಸಿಲುಕಿದ್ದಾರೆ.

ಕಳೆದ ಮೂರು ದಿನಗಳಿಂದ ಉತ್ತರಕಾಶಿ-ಯಮುನೋತ್ರಿ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ 4.5 ಕಿಮೀ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಪರಿಹಾರ ಕಾರ್ಯಾಚರಣೆ ಬುಧವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಕಾರ್ಮಿಕರನ್ನು ಸ್ಥಳಾಂತರಿಸಲು ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವು ಅಡೆತಡೆಗಳು ಉಂಟಾಗುತ್ತಿವೆ. ಭೂಕುಸಿತ ಸಹ ಸಂಭವಿಸಿದ್ದು, ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಡಳಿತದ ಮೂಲಗಳ ಪ್ರಕಾರ, ‘ಹಾಳಾದ ಹಳೆಯ ತಂತ್ರಜ್ಞಾನ ಆಗರ್ ಯಂತ್ರದ ಜಾಗದಲ್ಲಿ ಈಗ ದೆಹಲಿಯಿಂದ ಅತ್ಯಾಧುನಿಕ ಡ್ರಿಲ್ ಮಷಿನ್ ತರಲಾಗುತ್ತಿದ್ದು, ವಾಯುಪಡೆಯ ಸಹಾಯದಿಂದ ಅದನ್ನು ಸುರಂಗ ಸ್ಥಳಕ್ಕೆ ಸಾಗಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಪರಿಹಾರ ಮತ್ತು ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿರುವ ಕರ್ನಲ್ ದೀಪಕ್ ಪಾಟೀಲ್ ಅವರು ಮಾತನಾಡಿ, "ಅಮೆರಿಕ ನಿರ್ಮಿತ ಹೊಸ ಯಂತ್ರ ಬಳಸಲು ಆದೇಶಿಸಲಾಗುತ್ತಿದೆ. ಅದು ವೇಗವಾಗಿ ಕೆಲಸ ಮಾಡುತ್ತದೆ" ಎಂದು ತಿಳಿಸಿದ್ದಾರೆ. 

ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರ ಸ್ಥಿತಿ ಈಗ ಹದಗೆಡಲು ಪ್ರಾರಂಭಿಸಿದೆ. ಅವರಿಗೆ ಜ್ವರ, ಮೈಕೈ ನೋವು ಮತ್ತು ನರಗಳ ಸಮಸ್ಯೆಯಾಗುತ್ತಿರುವ ಬಗ್ಗೆ ತಿಳಿಸಿದ ನಂತರ, ಅಧಿಕಾರಿಗಳು ತಕ್ಷಣವೇ ಪೈಪ್‌ಗಳ ಮೂಲಕ ಔಷಧಿಗಳನ್ನು ಕಳುಹಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com