ಮಧ್ಯಪ್ರದೇಶ ಚುನಾವಣೆ 2023: ಬಿಜೆಪಿಗೆ ದೊಡ್ಡ ಹೊಡೆತ: ಓರ್ವ ಶಾಸಕ ಸೇರಿ 10 ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

ಮಧ್ಯಪ್ರದೇಶದ ಬಿಜೆಪಿ ಹಾಲಿ ಶಾಸಕ ಮತ್ತು ಎಂಟು ಜಿಲ್ಲೆಗಳ ಇತರ ಒಂಬತ್ತು ನಾಯಕರು ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ನಾಯಕರು ಭೋಪಾಲ್‌ನಲ್ಲಿರುವ ರಾಜ್ಯ ಕಾಂಗ್ರೆಸ್...
ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕರು
ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕರು

ಮಧ್ಯಪ್ರದೇಶದ ಬಿಜೆಪಿ ಹಾಲಿ ಶಾಸಕ ಮತ್ತು ಎಂಟು ಜಿಲ್ಲೆಗಳ ಇತರ ಒಂಬತ್ತು ನಾಯಕರು ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ನಾಯಕರು ಭೋಪಾಲ್‌ನಲ್ಲಿರುವ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಕೆಲವು ತಿಂಗಳುಗಳ ಮೊದಲು ಇದು ನಡೆದಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಾಜಿ 'ನಿಷ್ಠಾವಂತರು' ಬಿಜೆಪಿಯಿಂದ ಕಾಂಗ್ರೆಸ್‌ಗೆ ಸಾಮೂಹಿಕ ವಲಸೆ ಹೋಗುತ್ತಿದ್ದಾರೆ.

ಶಿವಪುರಿ ಜಿಲ್ಲೆಯ ಕೋಲಾರಸ್ ಕ್ಷೇತ್ರದ ಶಾಸಕ ವೀರೇಂದ್ರ ರಘುವಂಶಿ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅವರು ಆಗಸ್ಟ್ 31ರಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ ಶಾಸಕರು ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತು ಭ್ರಷ್ಟಾಚಾರದ ಕುರಿತು ಆರೋಪಿಸಿದ್ದಾರೆ.

ಎರಡನೇ ಪ್ರಮುಖ ನಾಯಕರಲ್ಲಿ ಧಾರ್ ಜಿಲ್ಲೆಯ ಬಿಜೆಪಿಯ ಮಾಜಿ ಶಾಸಕ ಭವರ್ ಸಿಂಗ್ ಶೇಖಾವತ್ ಮತ್ತು ಮೂರನೇ ನಾಯಕ ಸಾಗರ ಜಿಲ್ಲೆಯ ಚಂದ್ರಭೂಷಣ ಸಿಂಗ್ ಬುಂದೇಲಾ (ಗುಡ್ಡು ರಾಜ) ಸೇರಿದ್ದಾರೆ. ಝಾನ್ಸಿಯಿಂದ ಎರಡು ಬಾರಿ ಸಂಸದ ಸಹ ಆಗಿದ್ದಾರೆ. ಪಕ್ಷಕ್ಕೆ ಸೇರ್ಪಡೆಗೊಳ್ಳಲು ಗುಡ್ಡುರಾಜ ತವರು ಜಿಲ್ಲೆಯಿಂದ 500 ವಾಹನಗಳ ಬೆಂಗಾವಲು ಪಡೆಯೊಂದಿಗೆ ಆಗಮಿಸಿದ್ದರು.

ಜೂನ್‌ನಲ್ಲಿ ಕೊಲಾರಸ್‌ನಲ್ಲಿ ಸಿಂಧಿಯಾ ಅವರೊಂದಿಗೆ ಕೆಲಸ ಮಾಡುತ್ತಿದ್ದ ಶಿವಪುರಿ ಪ್ರಬಲ ವ್ಯಕ್ತಿ ಬೈಜನಾಥ್ ಸಿಂಗ್ ಯಾದವ್ ಅವರು ತಮ್ಮ ಹಲವಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಯಾದರು. ನಂತರ, ಬಿಜೆಪಿಯ ಶಿವಪುರಿ ಜಿಲ್ಲಾ ಮಾಜಿ ಉಪಾಧ್ಯಕ್ಷ ರಾಕೇಶ್ ಗುಪ್ತಾ, ಇನ್ನೊಬ್ಬ ಸಿಂಧಿಯಾ 'ನಿಷ್ಠಾವಂತ' ಇದನ್ನು ಅನುಸರಿಸಿದರು.

2020ರ ಮಾರ್ಚ್ ನಲ್ಲಿ ಸಿಂಧಿಯಾ ಅವರು 22 ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹಿಂದಿನ ಕಮಲ್ ನಾಥ್ ನೇತೃತ್ವದ ಸರ್ಕಾರ ಪತನವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com