social_icon

ಆಕ್ರಮಣಕಾರಿ ವಿದೇಶಿ ಸಸ್ಯ, ಪ್ರಾಣಿ ಪ್ರಭೇದಗಳಿಂದ ಜೈವಿಕ ವೈವಿಧ್ಯತೆ, ಆರ್ಥಿಕತೆ ಮೇಲೆ ಗಂಭೀರ ಬೆದರಿಕೆ!

ವಿದೇಶಿ ಸಸ್ಯ,ಪ್ರಾಣಿ ಪ್ರಭೇದಗಳು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒಳ ಬರಲು ಆರಂಭವಾಗಿದ್ದು, ಜೈವಿಕ ವೈವಿಧ್ಯತೆ, ಆರ್ಥಿಕತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಹೊಸ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. 

Published: 05th September 2023 04:23 PM  |   Last Updated: 05th September 2023 07:39 PM   |  A+A-


The two new species of rare wasp mimicking flower flies. Image used for representational purpose

(ಸಾಂಕೇತಿಕ ಚಿತ್ರ)

Posted By : Srinivas Rao BV
Source : The New Indian Express

ನವದೆಹಲಿ: ವಿದೇಶಿ ಸಸ್ಯ,ಪ್ರಾಣಿ ಪ್ರಭೇದಗಳು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒಳ ಬರಲು ಆರಂಭವಾಗಿದ್ದು, ಜೈವಿಕ ವೈವಿಧ್ಯತೆ, ಆರ್ಥಿಕತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಹೊಸ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. 

ಇದಷ್ಟೇ ಅಲ್ಲದೇ ದೇಶೀಯವಾಗಿ ನಿಸರ್ಗದ ಮೇಲೆ ಅವಲಂಬಿತವಾಗಿರುವ ಜೈವಿಕ ವೈವಿಧ್ಯತೆಯ ಮೇಲೂ ಈ ವಿದೇಶಿ ಪ್ರಭೇದಗಳು ಪರಿಣಾಮ ಉಂಟು ಮಾಡುತ್ತಿದ್ದು,  ಅನೇಕ ಸ್ಥಳೀಯ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳ ಅಳಿವಿನಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ಈ ಅಧ್ಯಯನ ವರದಿ ಹೇಳಿದೆ. 

ಜಾಗತಿಕ ವ್ಯಾಪಾರ ಮತ್ತು ಮಾನವ ಪ್ರಯಾಣದಲ್ಲಿ ಏರಿಕೆಯಾಗಿರುವುದರ ಪರಿಣಾಮ, ಆಕ್ರಮಣಕಾರಿ ವಿದೇಶಿ ಪ್ರಭೇದಗಳಿಂದ ಉಂಟಾಗುತ್ತಿರುವ ನಷ್ಟ 1970 ರಿಂದ ಈ ವರೆಗೆ ಪ್ರತಿ ದಶಕದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದು, ವಾರ್ಷಿಕ 423 ಬಿಲಿಯನ್ ಅಮೇರಿಕನ್ ಡಾಲರ್ ನಷ್ಟು ಬೆಲೆ ತೆರುವಂತಾಗಿದೆ.

ಸಸ್ಯಗಳು, ಕುರುಚಲು ಗಿಡಗಳು, ಸೂಕ್ಷ್ಮಜೀವಿಗಳು ಮತ್ತು ಇತರವುಗಳನ್ನು ಒಳಗೊಂಡಿರುವ ವಿದೇಶಿ ಪ್ರಭೇದಗಳನ್ನು ಮಾನವ ಚಟುವಟಿಕೆಗಳ ಮೂಲಕ ಹೊಸ ಪ್ರದೇಶಗಳಿಗೆ ಪರಿಚಯಿಸಲಾಗಿದೆ. ಈ ಅನ್ಯಪ್ರಭೇದ ಪರಿಸರ ವ್ಯವಸ್ಥೆಯ ಕಾರ್ಯ, ಸರಕು ಮತ್ತು ಸೇವೆಗಳ ಮೇಲೆ ಸ್ಥಳೀಯ ಪ್ರಭೇದಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ.

ಉದಾಹರಣೆ ನೋಡುವುದಾದರೆ, ಕೇರಳದಲ್ಲಿ ಸ್ಥಳೀಯ ಮೀನುಗಾರರಿಗೆ ಮುಖ್ಯವಾಗಿರುವ ಮೃದ್ವಂಗಿಗಳು ಹಾಗೂ ಇನ್ನಿತರ ಸ್ಥಳೀಯ ಜೈವಿಕ ವೈವಿಧ್ಯಗಳನ್ನು ಮೈಟಿಲೋಪ್ಸಿಸ್ ಸಲೇಯ್ (Mytilopsissallei, ಇದನ್ನು Caribbean false mussel ಎಂದೂ ಕರೆಯುತ್ತಾರೆ) ನಾಶ ಮಾಡಿವೆ.

ಈ ಮೈಟಿಲೋಪ್ಸಿಸ್ ಸಲೇಯ್ ಗಳು ಮೂಲತಃ ದಕ್ಷಿಣ ಮತ್ತು ಮಧ್ಯ ಅಮೆರಿಕದ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಕರಾವಳಿ ಪ್ರದೇಶದ್ದಾಗಿದ್ದು, ಸಂಶೋಧಕರ ಪ್ರಕಾರ ಭಾರತಕ್ಕೆ ಇವು ಹಡಗುಗಳ ಮೂಲಕ ತಲುಪಿದ್ದು, ನಂತರ ಸಣ್ಣ ಮೀನುಗಾರಿಕೆ ಹಡಗುಗಳ ಮೂಲಕ ನದೀಮುಖಗಳಿಗೆ ಹರಡುತ್ತದೆ. 

ಇದು ಹೊಸ ನೀರಿಗೆ ಒಯ್ಯುವ ಮೂಲಕ ರಾಜ್ಯದಾದ್ಯಂತ 'ವರತನ್‌ಕ್ಕ' (ಮಲಯಾಳಂನಲ್ಲಿ 'ಅನ್ಯಲೋಕದ ಬಿವಾಲ್ವ್ ಮೃದ್ವಂಗಿ') ಹರಡಲು ಪ್ರಚೋದಿಸಿರಬಹುದು ಎನ್ನುತ್ತಾರೆ ಸಂಶೋಧಕರು. 

ಆಕ್ರಮಣಕಾರಿ ಏಲಿಯನ್ ಪ್ರಭೇದಗಳು ಮತ್ತು ಅವುಗಳ ನಿಯಂತ್ರಣದ ಮೇಲಿನ ಮೌಲ್ಯಮಾಪನ ವರದಿಯ ಪ್ರಕಾರ ಎಲ್ಲಾ ವಿದೇಶಿ ಪ್ರಭೇದಗಳು ಆಕ್ರಮಣಕಾರಿಯಾಗುವುದಿಲ್ಲ ಆದರೆ ಗಮನಾರ್ಹ ಪ್ರಮಾಣವು ಆಕ್ರಮಣಕಾರಿ ಪ್ರಭೇದಗಳಾಗಿರುತ್ತವೆ. ಜೈವಿಕ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆ ಸೇವೆಗಳ (IPBES) ಇಂಟರ್‌ಗವರ್ನಮೆಂಟಲ್ ಪ್ಲಾಟ್‌ಫಾರ್ಮ್‌ನ 143 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಒಂದು ವರದಿಯ ಪ್ರಕಾರ, ಸುಮಾರು 6% ವಿದೇಶಿ ಸಸ್ಯಗಳು; 22% ವಿದೇಶಿ ಅಕಶೇರುಕಗಳು; 14% ವಿದೇಶಿ ವರ್ಟಿಬ್ರೇಟ್ ಗಳು; ಮತ್ತು 11% ವಿದೇಶಿ ಸೂಕ್ಷ್ಮಜೀವಿಗಳು ಆಕ್ರಮಣಕಾರಿ ಎಂದು ತಿಳಿದುಬಂದಿದೆ, ಇದು ಪ್ರಕೃತಿ ಮತ್ತು ಜನರಿಗೆ ಪ್ರಮುಖ ಅಪಾಯಗಳನ್ನು ಉಂಟುಮಾಡುತ್ತದೆ.

ಅರಣ್ಯ, ಕೃಷಿ, ತೋಟಗಾರಿಕೆ, ಜಲಚರಗಳು ಅಥವಾ ಸಾಕುಪ್ರಾಣಿಗಳಲ್ಲಿ ಅವುಗಳ ಋಣಾತ್ಮಕ ಪರಿಣಾಮಗಳ ಪರಿಗಣನೆ ಅಥವಾ ಜ್ಞಾನವಿಲ್ಲದೆಯೇ, ಗ್ರಹಿಸಿದ ಪ್ರಯೋಜನಗಳಿಗಾಗಿ ಅನೇಕ ಆಕ್ರಮಣಕಾರಿ ವಿದೇಶಿ ಪ್ರಭೇದದ ಸಸ್ಯ, ಪ್ರಾಣಿಗಳನ್ನು ಉದ್ದೇಶಪೂರ್ವಕವಾಗಿ ಪರಿಚಯಿಸಲಾಗಿದೆ. ವ್ಯಾಪಾರ ಮಾರ್ಗಗಳು ಮತ್ತು ಮಾಲಿನ್ಯಕಾರಕಗಳ ಮೂಲಕ ಉದ್ಧೇಶಪೂರ್ವಕವಲ್ಲದೆ ಪರಿಚಯಿಸಲಾದ ಕೆಲವು ಪ್ರಬೇಧಗಳೂ ಇವೆ. ಈ ಆಕ್ರಮಣಕಾರಿ ವಿದೇಶಿ ಪ್ರಭೇದಗಳು ದಾಖಲಾದ ಜಾಗತಿಕ ಸಸ್ಯ ಮತ್ತು ಪ್ರಾಣಿಗಳ ಅಳಿವಿನ 60% ನಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.


Stay up to date on all the latest ದೇಶ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp