ಜಿ20 ವೇದಿಕೆ 'ಭಾರತ ಮಂಟಪ'ಕ್ಕೆ ಪ್ರಧಾನಿ ಮೋದಿ, ವಿಶ್ವ ನಾಯಕರು ಆಗಮನ; 'ಒಂದು ಭೂಮಿ · ಒಂದು ಕುಟುಂಬ · ಒಂದು ಭವಿಷ್ಯ' ಧ್ಯೇಯವಾಕ್ಯ

ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪ ಬಳಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶ್ವ ನಾಯಕರ ಆಗಮನದೊಂದಿಗೆ ಶೃಂಗಸಭೆಯು ಬೆಳಗ್ಗೆ 9.30 ರಿಂದ ಪ್ರಾರಂಭವಾಗಿದೆ. 
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವ ದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪ ಬಳಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶ್ವ ನಾಯಕರ ಆಗಮನದೊಂದಿಗೆ ಶೃಂಗಸಭೆಯು ಬೆಳಗ್ಗೆ 9.30 ರಿಂದ ಪ್ರಾರಂಭವಾಗಿದೆ. 

ಜಿ20 ನಾಯಕರ ಶೃಂಗಸಭೆಯ ಅಧಿವೇಶನದಲ್ಲಿ ಒಂದು ಭೂಮಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ಅಧಿವೇಶನವು ಹವಾಮಾನ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಸಾಧ್ಯವಾದಷ್ಟು ಬೇಗ ಜಾಗತಿಕ ನಿವ್ವಳ ಶೂನ್ಯ ಹೊರಸೂಸುವಿಕೆಯ ಕಾರ್ಯಸೂಚಿಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವರ್ಷದ G20 ಶೃಂಗಸಭೆಯ ವಿಷಯವು 'ವಸುಧೈವ ಕುಟುಂಬಕಂ'  'ಒಂದು ಭೂಮಿ · ಒಂದು ಕುಟುಂಬ · ಒಂದು ಭವಿಷ್ಯ' -- ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ಪಡೆಯಲಾಗಿದೆ.

ಪ್ರಧಾನಿಯಿಂದ ಸ್ವಾಗತ: ಜಿ20 ನಾಯಕರು ದೆಹಲಿಯ ಪ್ರಗತಿ ಮೈದಾನದಲ್ಲಿ ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪಕ್ಕೆ ಆಗಮಿಸಲು ಪ್ರಾರಂಭಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟ್ನಿಯೊ ಗುಟೆರಸ್, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರಿಗೆ ಭಾರತ್ ಮಂಟಪದಲ್ಲಿ ಆತಿಥ್ಯ ನೀಡಿದರು.

ಒಡಿಶಾದ ಕೋನಾರ್ಕ್ ಚಕ್ರವನ್ನು ಪ್ರದರ್ಶನ ಮುಂದೆ ನಿಂತು ಮೋದಿಯವರು ಹಸ್ತಲಾಘವ ನೀಡಿ ವಿಶ್ವ ನಾಯಕರನ್ನು ಸ್ವಾಗತಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com