ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಏಕರೂಪ ನಾಗರಿಕ ಸಂಹಿತೆ ಕಾಯ್ದೆ (ಯುಸಿಸಿ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಾವಣಿ (ಎನ್ ಆರ್ ಸಿ) ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಈದ್-ಉಲ್-ಫಿತರ್ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, "ನಾವು ದೇಶಕ್ಕಾಗಿ ರಕ್ತ ಹರಿಸಲು ಸಿದ್ಧರಿದ್ದೇವೆ ಆದರೆ ದೇಶಕ್ಕಾಗಿ ಚಿತ್ರಹಿಂಸೆಯನ್ನು ಸಹಿಸುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ಎಲ್ಲಾ ಧರ್ಮಗಳ ನಡುವೆ ಸಾಮರಸ್ಯವನ್ನು ಬಯಸುತ್ತೇನೆ. ನಿಮ್ಮ ಸುರಕ್ಷತೆ, ನಿಮ್ಮ ಜೀವನ ಮುಖ್ಯವಾಗಿದೆ ಹೊರತು NRC ಇಲ್ಲ, CAA ಇಲ್ಲ ಎಂದರು.
ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಮತಾ, ಸ್ಫೋಟವಾದರೆ, ಅವರು (ಬಿಜೆಪಿ) ಎಲ್ಲರನ್ನು ಬಂಧಿಸಲು ಎನ್ಐಎ ಕಳುಹಿಸುತ್ತಾರೆ. ಎಲ್ಲರನ್ನೂ ಬಂಧಿಸುವ ಮೂಲಕ ನಿಮ್ಮ ದೇಶವು ನಿರ್ಜನವಾಗುತ್ತದೆ. ನಮಗೆ ಸುಂದರ ಆಕಾಶ ಬೇಕು.ಅದಕ್ಕಾಗಿ ಎಲ್ಲರೂ ಒಟ್ಟಿಗೆ ಇರಬೇಕು, ಯಾರಾದರೂ ಗಲಭೆಗೆ ಬಂದರೆ, ನೀವು ಸುಮ್ಮನಿರಿ, ಯಾವುದೇ ತಲೆ ಕೆಡಿಸಿಕೊಳ್ಳಬೇಡಿ ಎಂದು ಅವರು ಹೇಳಿದರು.
"ಈದ್ ಮುಬಾರಕ್. ಇದು ಸಂತೋಷದ ಈದ್. ಇದು ಶಕ್ತಿ ನೀಡುವ ಈದ್. ಒಂದು ತಿಂಗಳ ಕಾಲ ನೀರು ಕುಡಿಯದೆ ಉಪವಾಸ ಮಾಡುವ ಮೂಲಕ ಈ ಈದ್ ಅನ್ನು ಆಚರಿಸುವುದು ದೊಡ್ಡ ವಿಷಯ" ಎಂದು ಅವರು ತಿಳಿಸಿದರು.
Advertisement