ಕೇಂದ್ರ ಮತ್ತು ಗಣಿಗಾರಿಕೆ ಸಂಸ್ಥೆಗಳಿಂದ ಖನಿಜಗಳ ಮೇಲಿನ ರಾಯಧನ ಹಿಂಪಡೆಯಿರಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಅನುಮತಿ

ಜುಲೈ 25 ರಂದು, ಸುಪ್ರೀಂ ಕೋರ್ಟ್‌ನ ಪೀಠವು ನೀಡಿದ್ದ ಮಹತ್ವದ ತೀರ್ಪಿನಲ್ಲಿ, ಖನಿಜ ಹೊಂದಿರುವ ಭೂಮಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಸಾಮರ್ಥ್ಯ ಮತ್ತು ಅಧಿಕಾರವಿದೆ ಎಂದು ಹೇಳಿತ್ತು.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಖನಿಜ ಹಕ್ಕುಗಳು ಮತ್ತು ಖನಿಜಗಳನ್ನು ಹೊಂದಿರುವ ಭೂಮಿಯ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರವನ್ನು ಎತ್ತಿಹಿಡಿದು ಜುಲೈ 25ರಂದು ನೀಡಿದ ತೀರ್ಪಿನಿಂದ ಭವಿಷ್ಯದ ಮೇಲೆ ಆಗುವ ಪರಿಣಾಮ ಬಗ್ಗೆ ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ ಅಲ್ಲದೆ ಏಪ್ರಿಲ್ 1, 2005ರಿಂದ ಕೇಂದ್ರ ಸರ್ಕಾರ ಮತ್ತು ಗಣಿಗಾರಿಕೆ ಗುತ್ತಿಗೆ ಹೊಂದಿದವರಿಂದ ರಾಯಧನ ಮರುಪಡೆಯಲು ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಿದೆ.

ಸುಪ್ರೀಂ ಕೋರ್ಟ್ ನ ಈ ಆದೇಶವು ಖನಿಜ ಸಮೃದ್ಧ ರಾಜ್ಯಗಳಿಗೆ ಆರ್ಥಿಕವಾಗಿ ಉತ್ತೇಜನ ನೀಡಿದಂತಾಗುತ್ತದೆ. ಅದರ ಜೊತೆಗೆ, ಏಪ್ರಿಲ್ 1, 2026 ರಿಂದ 12 ವರ್ಷಗಳ ಕಾಲ ತೆರಿಗೆ ಬಾಕಿಯನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪಾವತಿಸಬಹುದು ಎಂದು ಹೇಳಿದೆ.

ಕೇಂದ್ರೀಯ ಸುಂಕಗಳ ಹೊರತಾಗಿ ಖನಿಜಗಳ ಮೇಲೆ ತೆರಿಗೆ ಮತ್ತು ರಾಯಧನವನ್ನು ವಿಧಿಸಲು ರಾಜ್ಯ ಸರ್ಕಾರಗಳಿಗೆ ಹಕ್ಕು ನೀಡುವಾಗ, ಖನಿಜ ಶ್ರೀಮಂತ ರಾಜ್ಯಗಳು ಹಿಂದಿನ ಬಾಕಿಗಳಿಗೆ ದಂಡ ಅಥವಾ ತೆರಿಗೆಯನ್ನು ವಿಧಿಸಬಾರದು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ.

ಕಳೆದ ಜುಲೈ 25 ರಂದು, ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಪೀಠವು ನೀಡಿದ್ದ ಮಹತ್ವದ ತೀರ್ಪಿನಲ್ಲಿ, ಖನಿಜ ಹೊಂದಿರುವ ಭೂಮಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಸಾಮರ್ಥ್ಯ ಮತ್ತು ಅಧಿಕಾರವಿದೆ ಎಂದು ಹೇಳಿತ್ತು.

ಸುಪ್ರೀಂ ಕೋರ್ಟ್
ಗಣಿ-ಖನಿಜಭರಿತ ಜಮೀನುಗಳಿಗೆ ತೆರಿಗೆ ವಿಧಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇದೆ: ಸುಪ್ರೀಂ ಕೋರ್ಟ್

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 ರ ಅಡಿಯಲ್ಲಿ ಖನಿಜಗಳ ಮೇಲೆ ಪಾವತಿಸಬೇಕಾದ ರಾಯಧನವು ತೆರಿಗೆಯೇ ಮತ್ತು ಕೇಂದ್ರಕ್ಕೆ ಮಾತ್ರ ವಿಧಿಸುವ ಅಧಿಕಾರವನ್ನು ಹೊಂದಿದ್ದರೆ ಮಾತ್ರವೇ ಎಂಬ ವಿವಾದಾತ್ಮಕ ವಿಷಯದ ಕುರಿತು ಸುಪ್ರೀಂ ಕೋರ್ಟ್ ಮಾರ್ಚ್ 14 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಅಂತಹ ದಂಡನೆ ಅಥವಾ ರಾಜ್ಯಗಳು ತಮ್ಮ ಭೂಪ್ರದೇಶದಲ್ಲಿ ಖನಿಜ ಹೊಂದಿರುವ ಭೂಮಿಗೆ ಸುಂಕವನ್ನು ವಿಧಿಸುವ ಅಧಿಕಾರವನ್ನು ಹೊಂದಿವೆ.

ವಿವಿಧ ರಾಜ್ಯ ಸರ್ಕಾರಗಳು, ಗಣಿ ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಸಲ್ಲಿಸಿದ 86 ಮೇಲ್ಮನವಿಗಳ ಕುರಿತು ವಿಚಾರಣೆ ನಡೆಸಿದ ಸಿಜೆಐ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು ಎಂಟು ದಿನಗಳ ಕಾಲ ಈ ವಿಷಯವನ್ನು ಆಲಿಸಿತು.

ವಿಚಾರಣೆಯ ಸಂದರ್ಭದಲ್ಲಿ, ಸಂಸತ್ತಿನಲ್ಲಿ ಮಾತ್ರವಲ್ಲದೆ ರಾಜ್ಯಗಳಲ್ಲಿಯೂ ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಸಂವಿಧಾನವು ಹೊಂದಿದೆ ಮತ್ತು ಅಂತಹ ಅಧಿಕಾರವನ್ನು ದುರ್ಬಲಗೊಳಿಸಬಾರದು ಎಂದು ಒತ್ತಿಹೇಳಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com