ದುರ್ಬಲ ಮುಂಗಾರು: ಅಂತಾರಾಜ್ಯ ಬಿಂದು ಬಿಳಿಗುಂಡ್ಲುವಿನಲ್ಲಿ ಕಾವೇರಿ ಹರಿವು ಕಡಿಮೆ- CWRC

ಪ್ರಸ್ತುತ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ ಅದರ ಸಾಮಾನ್ಯ FRL 93 ಟಿಎಂಸಿಯಿಂದ ಸುಮಾರು 89 ಟಿಎಂಸಿಗೆ ಇಳಿದಿದೆ.
ಮೆಟ್ಟೂರು ಜಲಾಶಯ
ಮೆಟ್ಟೂರು ಜಲಾಶಯ
Updated on

ನವದೆಹಲಿ: ಕರ್ನಾಟಕದಿಂದ ಅಂತಾರಾಜ್ಯ ಬಿಂದು ಬಿಳಿಗುಂಡ್ಲುವಿಗೆ ಹರಿಯುತ್ತಿರುವ ಕಾವೇರಿ ನೀರಿನ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತೃಪ್ತಿ ವ್ಯಕ್ತಪಡಿಸಿದೆ.

ಆದಾಗ್ಯೂ ದುರ್ಬಲ ಮಾನ್ಸೂನ್ ಕಳೆದ ವಾರದಿಂದ ದಿನದ ನಿಗದಿತ ಹರಿವನ್ನು 1.5 ಟಿಎಂಸಿಯಿಂದ 0.5 ಟಿಎಂಸಿಗೆ ಕಡಿಮೆ ಮಾಡಿದೆ.

ಇದು ಮೆಟ್ಟೂರು ಜಲಾಶಯದ ನೀರಿನ ಮಟ್ಟವನ್ನು ಪೂರ್ಣ ಜಲಾಶಯದ ಮಟ್ಟದಿಂದ (FRL) ಸ್ವಲ್ಪ ಕಡಿಮೆ ಮಾಡಿದೆ.

ಪ್ರಸ್ತುತ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ ಅದರ ಸಾಮಾನ್ಯ FRL 93 ಟಿಎಂಸಿಯಿಂದ ಸುಮಾರು 89 ಟಿಎಂಸಿಗೆ ಇಳಿದಿದೆ. ಈ ವರ್ಷದ ಜೂನ್ 1 ಮತ್ತು ಆಗಸ್ಟ್ 29 ರ ನಡುವೆ ಅಂತರರಾಜ್ಯ ಬಿಂದು ಬಿಳಿಗುಂಡ್ಲುವಿನಲ್ಲಿ ಕರ್ನಾಟಕ ಸುಮಾರು 177 ಟಿಎಂಸಿ ನೀರಿನ ಹರಿವನ್ನು ಬಿಡುಗಡೆ ಮಾಡಿದೆ ಎಂದು CWRC ನಿರ್ಣಯಿಸಿದೆ. ಇದು ಇಡೀ ಮುಂಗಾರು ಋತುವಿನ ಅಗತ್ಯ 123 ಟಿಎಂಸಿಗಿಂತ ಹೆಚ್ಚಿದೆ.

ಮುಂದಿನ 8-10 ದಿನಗಳಲ್ಲಿ ಮಾನ್ಸೂನ್ ಬಲಗೊಳ್ಳಲಿದೆ ಎಂದು IMD ಭವಿಷ್ಯ ನುಡಿದಿದೆ ಎಂದು CWRC ಅಧ್ಯಕ್ಷ ವಿನೀತ್ ಗುಪ್ತಾ TNIE ಗೆ ತಿಳಿಸಿದ್ದಾರೆ. ಅಂತಾರಾಜ್ಯ ಬಿಂದುವಿನಲ್ಲಿ ನೀರಿನ ಹರಿವು ಕಡಿಮೆಯಾದ ಬಗ್ಗೆ ಪ್ರತಿಕ್ರಿಯಿಸಿದ ಟಿಎನ್ ಅಧಿಕಾರಿಗಳು ಕರ್ನಾಟಕವು ತನ್ನ ಜಲಾಶಯಗಳು ತುಂಬಿದಾಗ ಮಾತ್ರ ನೀರು ಬಿಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com