Insurance ಹಣಕ್ಕಾಗಿ ತನ್ನ ಸಾವನ್ನು ನಕಲು ಮಾಡಲು ಸ್ನೇಹಿತನನ್ನೇ ಕೊಂದ ವ್ಯಕ್ತಿ; ಅರ್ಧ ಬೆಂದ ದೇಹ ಪತ್ತೆ!

ಯಾರೂ ವಾಸಿಸದೇ ಇದ್ದ ಮನೆಯೊಂದರಲ್ಲಿ ಮೃತದೇಹ ಪತ್ತೆಯಾಗಿದ್ದು ಹಿತೇಶ್ ಧಂಜಾ ಎಂಬ ವ್ಯಕ್ತಿ ತಾನು ಅರ್ಧ ಸುಟ್ಟುಹೋಗಿರುವ ಮೃತದೇಹವನ್ನು ಕಂಡಿದ್ದಾಗಿ ಕಥೆ ಕಟ್ಟಿದ್ದಾನೆ.
Hasmukh is on the run after the murder of his friend Sandeep Goswami (right)
ಹಸ್ಮುಖ್ (ಎಡಭಾಗದ ಚಿತ್ರ) ಸಂದೀಪ್ ಗೋಸ್ವಾಮಿ (ಬಲಭಾಗದ ಚಿತ್ರ)online desk
Updated on

ರಾಜ್ ಕೋಟ್: Insurance ಹಣಕ್ಕಾಗಿ ವ್ಯಕ್ತಿಯೋವ ಸ್ನೇಹಿತನನ್ನೇ ಕೊಂದ ಘಟನೆ ಗುಜರಾತ್ ನ ರಾಕ್ ಜೋಟ್ ನಲ್ಲಿ ವರದಿಯಾಗಿದೆ.

ಯಾರೂ ವಾಸಿಸದೇ ಇದ್ದ ಮನೆಯೊಂದರಲ್ಲಿ ಮೃತದೇಹ ಪತ್ತೆಯಾಗಿದ್ದು ಹಿತೇಶ್ ಧಂಜಾ ಎಂಬ ವ್ಯಕ್ತಿ ತಾನು ಅರ್ಧ ಸುಟ್ಟುಹೋಗಿರುವ ಮೃತದೇಹವನ್ನು ಕಂಡಿದ್ದಾಗಿ ಕಥೆ ಕಟ್ಟಿದ್ದಾನೆ. ಅಲ್ಲಿ ಮೃತದೇಹದ ಪಕ್ಕದಲ್ಲಿ ತನ್ನ ಹಿರಿಯ ಸಹೋದರ ಹಸ್ಮುಖ್ ಗೆ ಸೇರಿದ ಫೋನ್ ಹಾಗೂ ವಾಲೆಟ್ ನ್ನು ಕಂಡಿದ್ದಾಗಿ ಹೇಳಿದ್ದಾನೆ.

ಮೃತದೇಹ ಕಂಡೊಡನೆಯೇ ಹಿತೇಶ್ ಧಂಜಾ ಗ್ರಾಮದ ಮುಖ್ಯಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರಿಗೆ ಸುದ್ದಿ ತಿಳಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ದೇಹವನ್ನು ಮತ್ತು ಶವಪರೀಕ್ಷೆಗೆ ಕಳುಹಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಸಾವಿಗೆ ಕಾರಣ ಕತ್ತು ಹಿಸುಕಿ ಸುಟ್ಟ ಗಾಯಗಳಲ್ಲ ಎಂಬುದು ಬಹಿರಂಗಗೊಂಡಿದೆ. ಹಸ್ಮುಖ್ ಅವರನ್ನು ಕೊಂದು ನಂತರ ಅವರ ದೇಹವನ್ನು ಸುಟ್ಟುಹಾಕಲಾಗಿದೆ ಎಂದು ಶಂಕಿಸಿ, ಅಪರಾಧದ ಹಿಂದೆ ಯಾರೆಂದು ಗುರುತಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

ಹಸ್ಮುಖ್ ತನ್ನ ಸ್ನೇಹಿತ ಸಂದೀಪ್ ಗೋಸ್ವಾಮಿ (40) ಅವರನ್ನು ಭೇಟಿಯಾಗಲು ಹೋಗಿದ್ದರು ಎಂದು ತನಿಖೆಯಿಂದ ತಿಳಿದುಬಂದಾಗ, ಪೊಲೀಸರು ಆತನನ್ನು ಹುಡುಕಲು ಪ್ರಾರಂಭಿಸಿದರು. ಅವರ ಫೋನ್ ಸ್ವಿಚ್ ಆಫ್ ಆಗಿರುವುದನ್ನು ಕಂಡು ಪತ್ನಿ ಗಾಯತ್ರಿ ಅವರನ್ನು ಸಂಪರ್ಕಿಸಿದರು. ಡಿಸೆಂಬರ್ 25 ರಂದು ಸಂದೀಪ್‌ಗೆ ಹಸ್ಮುಖ್‌ನಿಂದ ಕರೆ ಬಂದಿತ್ತು ಮತ್ತು ಶೀಘ್ರದಲ್ಲೇ ಮನೆಯಿಂದ ಹೊರಟುಹೋದರು ಎಂದು ಆಕೆ ಪೊಲೀಸರಿಗೆ ತಿಳಿಸಿದರು. ಇಬ್ಬರೂ ಸ್ನೇಹಿತರಾಗಿದ್ದು, ವ್ಯಾಪಾರ ಪ್ರವಾಸಕ್ಕಾಗಿ ಮುಂಬೈಗೆ ಭೇಟಿ ನೀಡಲು ಯೋಜಿಸಿದ್ದರು ಎಂದು ಅವರು ಹೇಳಿದರು. ಗಾಯತ್ರಿ ತನ್ನ ಪತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಳು, ಆದರೆ ಅವನ ಫೋನ್ ಆಫ್ ಆಗಿತ್ತು.

ಪೊಲೀಸರು ಅರ್ಧ ಸುಟ್ಟ ದೇಹವನ್ನು ಗಾಯತ್ರಿಗೆ ತೋರಿಸಿದಾಗ, ಅದು ಹಸ್ಮುಖ್ ಅಲ್ಲ, ತನ್ನ ಪತಿ ಎಂದು ಹೇಳಿದರು. ವಿಧಿವಿಜ್ಞಾನ ಪರೀಕ್ಷೆಯೂ ಇದನ್ನು ದೃಢಪಡಿಸಿದೆ.

Hasmukh is on the run after the murder of his friend Sandeep Goswami (right)
Insurance scam: 24 ಅಪಘಾತ ಮಾಡಿದ್ದ ಚಾಲಕನ ಬಂಧನ, ಬಹುದೊಡ್ಡ ವಿಮಾ ಹಗರಣ ಬಯಲಿಗೆ!

ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದರು ಮತ್ತು ಶವ ಪತ್ತೆಯಾದ ಪ್ರದೇಶದಲ್ಲಿ ಜನರನ್ನು ವಿಚಾರಿಸಿದಾಗ, ಹಸ್ಮುಖ್ ಮತ್ತು ಸಂದೀಪ್ ಅವರೊಂದಿಗೆ ಅಪ್ರಾಪ್ತ ಬಾಲಕ ಕಾಣಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅಪ್ರಾಪ್ತ ಬಾಲಕನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಆತ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಹಸ್ಮುಖ್ ಅವರ ಕುಟುಂಬದ ಮನೆಯಲ್ಲಿ ಸಂದೀಪ್ ನನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಬಾಲಕ ಹೇಳಿದ್ದಾನೆ. ನಂತರ ದೇಹಕ್ಕೆ ಬೆಂಕಿ ಹಚ್ಚಿದರು. ಹಸ್ಮುಖ್ ಮೃತದೇಹದ ಬಳಿ ತನ್ನ ದಾಖಲೆಗಳು ಮತ್ತು ವಸ್ತುಗಳನ್ನು ಎಸೆದಿದ್ದಾನೆ.

ಸಂದೀಪ್ ಪತ್ನಿ ಗಾಯತ್ರಿ ನೀಡಿದ ದೂರಿನ ಮೇರೆಗೆ ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ.ಜಿ.ಝಾಲಾ ತಿಳಿಸಿದ್ದಾರೆ. "ಸಂದೀಪ್ ಗಿರಿಯನ್ನು ಹಸ್ಮುಖ್ ಧಂಜಾ ಮತ್ತು ಅಪ್ರಾಪ್ತ ಬಾಲಕ ಕೊಲೆ ಮಾಡಿದ್ದರು. ನಾವು ಅಪ್ರಾಪ್ತರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಮತ್ತು ಹಸ್ಮುಖನನ್ನು ಹುಡುಕುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ನೆಲೆಸಿರುವ ಹಸ್ಮುಖ್ ಅವರ ಪತ್ನಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಆಡೋದರಿಯಾ ಎನ್‌ಡಿಟಿವಿಗೆ ತಿಳಿಸಿದ್ದಾರೆ. "ಅವನು ವಿಮಾ ಪಾಲಿಸಿಯನ್ನು ಖರೀದಿಸಿದ್ದಾನೆ ಎಂದು ಅವಳು ನಮಗೆ ಹೇಳಿದಳು. ಆದರೆ ಹಸ್ಮುಖ್ ಇನ್ನೂ ನಾಪತ್ತೆಯಾಗಿದ್ದು, ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com