ಮಥುರಾದಲ್ಲಿ ಕೃಷ್ಣ ಜನ್ಮಭೂಮಿಯ ದೇವಸ್ಥಾನವನ್ನು ಔರಂಗಜೇಬ್ ಕೆಡವಿದ್ದ: ಎಎಸ್‌ಐ

ಮಥುರಾದಲ್ಲಿರುವ ಕೃಷ್ಣನ ಜನ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಆರ್‌ಟಿಐಗೆ ಪ್ರತಿಕ್ರಿಯೆಯಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮೊಘಲ್ ದೊರೆ ಔರಂಗಜೇಬ್ ಮಸೀದಿಗೆ ದಾರಿ ಮಾಡಿಕೊಡಲು ಸಂಕೀರ್ಣದಲ್ಲಿದ್ದ ಹಿಂದೂ ದೇವಾಲಯವನ್ನು ಕೆಡವಿದ್ದಾನೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಥುರಾದಲ್ಲಿರುವ ಕೃಷ್ಣನ ಜನ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಆರ್‌ಟಿಐಗೆ ಪ್ರತಿಕ್ರಿಯೆಯಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮೊಘಲ್ ದೊರೆ ಔರಂಗಜೇಬ್ ಮಸೀದಿಗೆ ದಾರಿ ಮಾಡಿಕೊಡಲು ಸಂಕೀರ್ಣದಲ್ಲಿದ್ದ ಹಿಂದೂ ದೇವಾಲಯವನ್ನು ಕೆಡವಿದ್ದಾನೆ ಎಂದು ಹೇಳಿದೆ. 

ಆದರೆ, ಆರ್‌ಟಿಐ ಉತ್ತರದಲ್ಲಿ 'ಕೃಷ್ಣ ಜನ್ಮಭೂಮಿ'ಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ, ಆದರೆ ಕೇಶವದೇವ ದೇವಸ್ಥಾನವೆಂದು ಉಲ್ಲೇಖಿಸಲಾಗಿದೆ. ಶಾಹಿ ಈದ್ಗಾವನ್ನು ತೆಗೆದುಹಾಕಲು ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಆರ್‌ಟಿಐ ಪ್ರತಿಕ್ರಿಯೆಯು ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದ ಮೈನ್‌ಪುರಿಯ ಅಜಯ್‌ ಪ್ರತಾಪ್‌ ಸಿಂಗ್‌ ಅವರು ಕೇಶವದೇವ್‌ ದೇಗುಲ ಕೆಡವಿದ ಬಗ್ಗೆ ಮಾಹಿತಿ ಕೋರಿ ಆರ್‌ಟಿಐ ಸಲ್ಲಿಸಿದ್ದರು. ಇದು ಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿದೆ ಎಂದು ಹೇಳಲಾಗಿದೆ. ಆರ್‌ಟಿಐಗೆ ಎಎಸ್‌ಐ ಆಗ್ರಾ ಸರ್ಕಲ್‌ನ ಅಧಿಕಾರಿ ಉತ್ತರ ನೀಡಿದ್ದಾರೆ. ವಿವಾದಿತ ಸ್ಥಳದಲ್ಲಿದ್ದ ಕೇಶವದೇವ ದೇವಾಲಯವನ್ನು ಮೊಘಲ್ ದೊರೆ ಕೆಡವಿದ್ದು ದೃಢಪಟ್ಟಿದೆ.

ಮಾಧ್ಯಮ ವರದಿಗಳ ಪ್ರಕಾರ, ಮಥುರಾ ಕೃಷ್ಣ ಜನ್ಮಭೂಮಿಯ 1920ರ ಗೆಜೆಟ್‌ನ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಎಎಸ್‌ಐ ಈ ಮಾಹಿತಿಯನ್ನು ನೀಡಿದೆ. ಇದು ಗೆಜೆಟ್‌ನ ಆಯ್ದ ಭಾಗವನ್ನೂ ಒಳಗೊಂಡಿತ್ತು. 'ಕೇಶವದೇವನ ದೇವಾಲಯವು ಹಿಂದೆ ಇದ್ದ ನಜುಲ್‌ನ ಸ್ವಾಧೀನದಲ್ಲಿರದ ಕತ್ರಾ ದಿಬ್ಬದ ಕೆಲವು ಭಾಗಗಳನ್ನು ಕೆಡವಲಾಯಿತು. ಇದನ್ನು ಔರಂಗಜೇಬನ ಮಸೀದಿಗೆ ಬಳಸಲಾಯಿತು ಎಂದು ತಿಳಿದುಬಂದಿದೆ.

ಏಕೆ ಮುಖ್ಯ?
ವರದಿಯ ಪ್ರಕಾರ, ಮಸೀದಿಯ ವಿರುದ್ಧದ ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಮುಖ ಸಾಕ್ಷ್ಯವನ್ನು ಪ್ರಸ್ತುತಪಡಿಸುವುದಾಗಿ ಹೇಳುತ್ತಾರೆ. 'ಐತಿಹಾಸಿಕ ಪುರಾವೆಗಳ ಆಧಾರದ ಮೇಲೆ, ಔರಂಗಜೇಬ್ 1670ರಲ್ಲಿ ಮಥುರಾದ ಕೇಶವದೇವ ದೇವಾಲಯವನ್ನು ಕೆಡವಲು ಆದೇಶವನ್ನು ನೀಡಿದ್ದರು ಎಂದು ನಾವು ನಮ್ಮ ಅರ್ಜಿಯಲ್ಲಿ ಹೇಳಿದ್ದೇವೆ' ಎಂದು ಅವರು ಹೇಳಿದರು.

ಇದಾದ ಬಳಿಕ ಅಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದರು. ಇದೀಗ ಆರ್ ಟಿಐಗೆ ಪ್ರತಿಕ್ರಿಯೆಯಾಗಿ ಎಎಸ್ ಐ ಮಾಹಿತಿ ನೀಡಿದೆ. ಫೆಬ್ರವರಿ 22ರಂದು ಮುಂದಿನ ವಿಚಾರಣೆಯ ಸಮಯದಲ್ಲಿ ನಾವು ಎಎಸ್‌ಐ ಅವರ ಉತ್ತರವನ್ನು ಹೈಕೋರ್ಟ್‌ನಲ್ಲಿ ಪ್ರಸ್ತುತಪಡಿಸುತ್ತೇವೆ. ಇದರಿಂದ ಶಾಹಿ ಈದ್ಗಾ ಮಸೀದಿಯ ಸರ್ವೇ ನಮ್ಮ ಬೇಡಿಕೆಗೆ ಬಲ ಬರಲಿದೆ ಎಂದರು. ಶಾಹಿ ಈದ್ಗಾ ಮಸೀದಿಯ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಕಳೆದ ವಾರವೇ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಈ ನಿಷೇಧವು ಏಪ್ರಿಲ್ ಮಧ್ಯದವರೆಗೆ ಜಾರಿಯಲ್ಲಿರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com