ಜಾರ್ಖಂಡ್‌ನಲ್ಲಿ ಪೊಲೀಸರು-ಮಾವೋವಾದಿಗಳ ನಡುವೆ ಎನ್‌ಕೌಂಟರ್: ಇಬ್ಬರು ಪೊಲೀಸರು ಹುತಾತ್ಮ; ಒಬ್ಬರಿಗೆ ಗಂಭೀರ ಗಾಯ!

ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಬೋರಿಯೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾವೋವಾದಿಗಳು ಜೊತೆಗಿನ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಕ್ಸಲ್
ನಕ್ಸಲ್
Updated on

ರಾಂಚಿ: ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಬೋರಿಯೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾವೋವಾದಿಗಳು ಜೊತೆಗಿನ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುಂಡಿನ ಕಾಳಗದಲ್ಲಿ ಆಕಾಶ್ ಸಿಂಗ್ ಸ್ಥಿತಿ ಚಿಂತಾಜನಕವಾಗಿದ್ದು ಏರ್ ಲಿಫ್ಟ್ ಮೂಲಕ ಚಿಕಿತ್ಸೆಗಾಗಿ ರಾಂಚಿಯ ಆರ್ಕಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಇತರ ಇಬ್ಬರು ಯೋಧರಾದ ಲುಗುನ್ ಮತ್ತು ಕೃಷ್ಣ ಹಜ್ರಾ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುತಾತ್ಮ ಪೊಲೀಸರ ಪೈಕಿ ಸುಕನ್ ರಾಮ್ ಪಲಾಮು ನಿವಾಸಿಯಾಗಿದ್ದು, ಸಿಕಂದರ್ ಸಿಂಗ್ ಗಯಾದ ವಜೀರ್ ಗಂಜ್ ನಿವಾಸಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆಕಾಶ್ ಸಿಂಗ್ ಭಭುವಾ ನಿವಾಸಿ. ಮಾಹಿತಿ ಪ್ರಕಾರ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಮ್ಹರ್ತರಿ ಅರಣ್ಯದಲ್ಲಿ ಗಸಗಸೆ ಬೆಳೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. 

ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಅರುಂದತ್ ಶರ್ಮಾ ಮತ್ತು ನಾಲ್ವರು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಸಂಜೆ 4.30ರ ಸುಮಾರಿಗೆ ಅಲ್ಲಿದ್ದ ಅಫೀಮು ಧ್ವಂಸಗೊಳಿಸಿ ಪೊಲೀಸರು ಹಿಂತಿರುಗುತ್ತಿದ್ದಾಗ ಗಮ್ಹರ್ತರಿ ಅರಣ್ಯದ ಬಳಿ ಹೊಂಚುದಾಳಿಯಲ್ಲಿ ಕುಳಿತಿದ್ದ ನಕ್ಸಲೀಯರು ಗುಂಡಿನ ದಾಳಿ ಆರಂಭಿಸಿದ್ದಾರೆ. ಪೊಲೀಸರಿಗೆ ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೇ ಮನಬಂದಂತೆ ಗುಂಡಿನ ದಾಳಿ ಆರಂಭವಾಯಿತು.

ಪೊಲೀಸರೂ ಅತ್ಯಂತ ಧೈರ್ಯದಿಂದ ಕಾರ್ಯ ನಿರ್ವಹಿಸಿ ಅಧಿಕಾರ ವಹಿಸಿಕೊಂಡು ಪ್ರತಿದಾಳಿ ನಡೆಸಿದರು. ಆದರೆ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದ ಕೂಡಲೇ ನೂತನ ಎಸ್‌ಡಿಪಿಒ ಸಂದೀಪ್ ಸುಮನ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಅಷ್ಟರೊಳಗೆ ನಕ್ಸಲೀಯರು ಅಲ್ಲಿಂದ ಪರಾರಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com