ನವದೆಹಲಿ: ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಕೇಂದ್ರೀಕರಿಸಿದ ಪ್ರಾಯೋಗಿಕ ಯೋಜನೆಯ ಅನುಷ್ಠಾನಕ್ಕೆ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ಈ ಯೋಜನೆಯನ್ನು ಪರಿಚಯಿಸುವ ನಿರೀಕ್ಷೆಯಿದೆ.
ಶನಿವಾರ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಅವರ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಾಗತಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ನಂತಹ ತಡೆ ರಹಿತ ಟೋಲಿಂಗ್ ಮುಕ್ತ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಲಹಾ ಸೇವೆಗಳನ್ನು ಒದಗಿಸಲು ಸಲಹೆಗಾರರನ್ನು ನೇಮಿಸಿದೆ ಎಂದು ಹೇಳಿದರು
ಜಿಎನ್ ಎಸ್ ಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ವಿವರಿಸಿದ ಸಚಿವರು, ಇದು ಹೆದ್ದಾರಿಯಲ್ಲಿ ವಾಹನದ ಸ್ಥಾನವನ್ನು ಹಿಂಪಡೆಯುತ್ತದೆ ಮತ್ತು ಪ್ರಯಾಣಿಸಿದ ದೂರದ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಲೆಕ್ಕಾಚಾರ ಮಾಡುತ್ತದೆ ಎಂದು ಒತ್ತಿ ಹೇಳಿದರು. ಲೋಕಸಭೆ ಚುನಾವಣೆಯ ಘೋಷಣೆಗೂ ಮುನ್ನ ತಂತ್ರಜ್ಞಾನವನ್ನು ಪ್ರದರ್ಶಿಸುವ ಬೆಂಗಳೂರು-ಮೈಸೂರು ಎನ್ಎಚ್-275 ಸೇರಿದಂತೆ ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸಲು ಸಚಿವಾಲಯ ಯೋಜಿಸಿದೆ.
ಬೆಂಗಳೂರು ಸುತ್ತಮುತ್ತಲಿನ 742 ಕಿಮೀ ರೈಲ್ವೆ ಜಾಲದ ಸಮೀಕ್ಷೆ: ಉಪನಗರ ರೈಲು ಯೋಜನೆಗಳ ಕುರಿತು ಲಹರ್ ಸಿಂಗ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬೆಂಗಳೂರಿನ ಉಪನಗರ ಪಟ್ಟಣಗಳಿಂದ ಪ್ರಯಾಣಿಕರ ಬೇಡಿಕೆಗಳನ್ನು ಪರಿಹರಿಸಲು ಒಟ್ಟು 742 ಕಿಮೀ ರೈಲ್ವೆ ನೆಟ್ವರ್ಕ್ಗೆ ಅಂತಿಮ ಸ್ಥಳ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್ 2 (ಬೈಯ್ಯಪನಹಳ್ಳಿ–ಚಿಕ್ಕಬಾಣಾವರ - 25.01 ಕಿಮೀ) ಮತ್ತು 4 (ಹೀಲಳಿಗೆ–ರಾಜನಕುಂಟೆ -46.25 ಕಿಮೀ) ಗಾಗಿ ಭೂಸ್ವಾಧೀನ ಪೂರ್ಣಗೊಂಡಿದ್ದು, ಕಾರಿಡಾರ್ 2 ನಿರ್ಮಾಣ ಪ್ರಗತಿಯಲ್ಲಿದೆ. ಕಾರಿಡಾರ್-4 ಗಾಗಿ ಇತ್ತೀಚೆಗೆ ಟೆಂಡರ್ಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ, ಕಾರಿಡಾರ್ 1 (ಕೆಎಸ್ಆರ್ ಬೆಂಗಳೂರು ನಗರ–ದೇವನಹಳ್ಳಿ - 41.4 ಕಿಮೀ) ಮತ್ತು 3 (ಕೆಂಗೇರಿ–ವೈಟ್ಫೀಲ್ಡ್ - 35.52 ಕಿಮೀ) ಗಾಗಿ ಸಮೀಕ್ಷೆ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
Advertisement