ಇವಿ ವಾಹನ ಅಪಘಾತ
ಇವಿ ವಾಹನ ಅಪಘಾತ

ಪ್ರಯೋಗಾರ್ಥ ಇವಿ ವಾಹನ ಅಪಘಾತದಲ್ಲಿ ಇಬ್ಬರು ಅರಣ್ಯ ವಲಯಾಧಿಕಾರಿ ಸೇರಿ ನಾಲ್ವರ ದುರ್ಮರಣ

ರಿಷಿಕೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಅರಣ್ಯ ಇಲಾಖೆಯ ಇಬ್ಬರು ರೇಂಜ್ ಆಫೀಸರ್‌ಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವ ಕಾರ್ಮಿಕ ನಾಪತ್ತೆಯಾಗಿದ್ದಾರೆ. 
Published on

ಡೆಹ್ರಾಡೂನ್: ರಿಷಿಕೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಅರಣ್ಯ ಇಲಾಖೆಯ ಇಬ್ಬರು ರೇಂಜ್ ಆಫೀಸರ್‌ಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವ ಕಾರ್ಮಿಕ ನಾಪತ್ತೆಯಾಗಿದ್ದಾರೆ. 

ಅಪಘಾತದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಅರಣ್ಯ ಸಚಿವ ಸುಬೋಧ್ ಉನಿಯಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ದೊರೆತ ಮಾಹಿತಿಯ ಪ್ರಕಾರ ಅರಣ್ಯ ಇಲಾಖೆ ಅಧಿಕಾರಿಗಳು ಹೊಸ ಎಲೆಕ್ಟ್ರಿಕ್ ವಾಹನವನ್ನು ಪ್ರಯೋಗಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ವಿಚಾರಣೆ ವೇಳೆ ಎಲ್ಲರೂ ಗೌಹರಿ ರೇಂಜ್ ಗೆ ಹೋಗುತ್ತಿದ್ದರು. ಚೀಲಾ ರಸ್ತೆಯಲ್ಲಿ ಏಕಾಏಕಿ ಟೈರ್ ಒಡೆದ ಪರಿಣಾಮ ವಾಹನ ನಿಯಂತ್ರಣ ತಪ್ಪಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಅಪಘಾತದಲ್ಲಿ ರೇಂಜ್ ಆಫೀಸರ್ ಶೈಲೇಶ್ ಗಿಲ್ಡಿಯಾಲ್, ಉಪ ಅರಣ್ಯ ರೇಂಜ್ ಆಫೀಸರ್ ಪ್ರಮೋದ್ ಧ್ಯಾನಿ, ಸೈಫ್ ಅಲಿ ಖಾನ್ ಮತ್ತು ಕುಲರಾಜ್ ಸಿಂಗ್ ಸಾವನ್ನಪ್ಪಿದ್ದು, ರಾಕೇಶ್ ನೌಟಿಯಾಲ್ (ಪಶುವೈದ್ಯಾಧಿಕಾರಿ, ರಾಜಾಜಿ ರಾಷ್ಟ್ರೀಯ ಉದ್ಯಾನವನ) ಜೊತೆಗೆ ಚಾಲಕ ಹಿಮಾಂಶು ಗುಸೇನ್, ಅಂಕುಶ್, ಅಮಿತ್ ಸೆಂವಾಲ್ ಮತ್ತು ಅಶ್ವಿನಿ ಸ್ಥಿತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೇ ವೇಳೆ ರಾಜಾಜಿ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ರಕ್ಷಕ ಅಲೋಕ್ ಚಿಲ್ಲಾ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ. ಸದ್ಯ ಅವರು ನಾಪತ್ತೆಯಾಗಿದ್ದಾರೆ. ಎಲ್ಲಾ ಗಾಯಾಳುಗಳನ್ನು ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಂಜರ್ ಶೈಲೇಶ್ ಗಿಲ್ಡಿಯಾಲ್ ಅವರು ಪಿಎಂಒ ಕಚೇರಿಯ ಕಾರ್ಯದರ್ಶಿ ಮತ್ತು ಮಾಜಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗೇಶ್ ಗಿಲ್ಡಿಯಾಲ್ ಅವರ ಸಹೋದರ ಎಂದು ಹೇಳಲಾಗುತ್ತದೆ. ಅಪಘಾತದ ನಂತರ ಮೃತರ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com