ಮಗುವಿನ ಹತ್ಯೆ: ಗೋವಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಬೆಂಗಳೂರು ಸಿಇಒ ಪತಿ!

ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಎಐ ಸ್ಟಾರ್ಟ್‌ಅಪ್ ಸಿಇಒ ಸುಚನಾ ಸೇಠ್ ಅವರ ವಿಚ್ಛೇದಿತ ಪತಿ ಶನಿವಾರ ವಿಚಾರಣೆಯ ಭಾಗವಾಗಿ ಗೋವಾದ ಕಲಾಂಗುಟ್ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಇಒ ಪತಿ ವೆಂಕಟ್ ರಾಮನ್
ಸಿಇಒ ಪತಿ ವೆಂಕಟ್ ರಾಮನ್

ಪಣಜಿ: ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಎಐ ಸ್ಟಾರ್ಟ್‌ಅಪ್ ಸಿಇಒ ಸುಚನಾ ಸೇಠ್ ಅವರ ವಿಚ್ಛೇದಿತ ಪತಿ ಶನಿವಾರ ವಿಚಾರಣೆಯ ಭಾಗವಾಗಿ ಗೋವಾದ ಕಲಾಂಗುಟ್ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಸೇಠ್ ತನ್ನ ಮಗನನ್ನು  ಕೊಂದು, ಮೃತದೇಹವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಜನವರಿ 8 ರಂದು ಕರ್ನಾಟಕದ ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದರು.

"ಆರೋಪಿಯ ಪತಿ ವೆಂಕಟ್ ರಾಮನ್ ಬೆಂಗಳೂರಿನಿಂದ ಮಧ್ಯಾಹ್ನ ಇಲ್ಲಿಗೆ ಆಗಮಿಸಿದ್ದು, ಕಲಾಂಗುಟೆ ಠಾಣೆಗೆ ಬಂದಿದ್ದಾರೆ.  ತನಿಖೆಯ ಭಾಗವಾಗಿ ಪ್ರಕರಣದಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊಲೆ ನಡೆದಾಗ ರಾಮನ್ ಇಂಡೋನೇಷ್ಯಾದ ಜಕಾರ್ತದಲ್ಲಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com