ಅತ್ಯಾಚಾರ ಸಂತ್ರಸ್ತೆಗೆ 'ಬೆರಳಿನ ಪರೀಕ್ಷೆ' ನಡೆಸಿದ ವೈದ್ಯರಿಗೆ ಕೋರ್ಟ್ ಛೀಮಾರಿ!

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಬೆರಳಿನ ಮೂಲಕ ಪರೀಕ್ಷಿಸಿದ ಪ್ರಕರಣ ವರದಿಯಾಗಿದ್ದು ಕಾಂಗ್ರಾ ಸಿವಿಲ್ ಆಸ್ಪತ್ರೆಯ ವೈದ್ಯರಿಗೆ ಹಿಮಾಚಲ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಬೆರಳಿನ ಮೂಲಕ ಪರೀಕ್ಷಿಸಿದ ಪ್ರಕರಣ ವರದಿಯಾಗಿದ್ದು ಕಾಂಗ್ರಾ ಸಿವಿಲ್ ಆಸ್ಪತ್ರೆಯ ವೈದ್ಯರಿಗೆ ಹಿಮಾಚಲ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. 

ಈ ಮೊತ್ತವನ್ನು ವೈದ್ಯರ ವೇತನದಿಂದ ಕಡಿತಗೊಳಿಸಬೇಕು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರನ್ನೇ ಹೊಣೆಗಾರರನ್ನಾಗಿಸಬೇಕು. ಅತ್ಯಾಚಾರ ಸಂತ್ರಸ್ತೆಯ ಘನತೆಗೆ ಧಕ್ಕೆಯಾಗಿದೆ ಎಂದು ನ್ಯಾಯಮೂರ್ತಿ ತರ್ಲೋಕ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಸತ್ಯನ್ ವೈದ್ಯ ಅವರ ಪೀಠವು ಆದೇಶ ನೀಡಿದೆ. ಆಕೆಯ ಖಾಸಗಿತನದ ಬಗ್ಗೆಯೂ ಕಾಳಜಿ ವಹಿಸದ ಕಾರಣ ಸಂತ್ರಸ್ತೆ ಮಾನಸಿಕ ಯಾತನೆ ಅನುಭವಿಸಿದ್ದಾಳೆ. ಇದಲ್ಲದೇ ಎರಡು ಬೆರಳಿನ ಪರೀಕ್ಷೆಗೂ ಮುನ್ನ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ವೈದ್ಯರು ಮಾಡಿರುವುದು ಮಹಿಳೆಯ ಪವಿತ್ರತೆ ಮತ್ತು ಘನತೆಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಯಾರಿಗೆ ಆಗಲಿ ದೇಹವು ಅವರಿಗೆ ದೇವಾಲಯವಿದ್ದಂತೆ. ಅದನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಎರಡು ಬೆರಳಿನ ಪರೀಕ್ಷೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದಲ್ಲದೇ ಹಿಮಾಚಲ ಪ್ರದೇಶ ಸರ್ಕಾರ ಕೂಡ ಕೇಂದ್ರದ ಸೂಚನೆಗಳನ್ನು ಅಳವಡಿಸಿಕೊಂಡಿದೆ.

ಎರಡು ಬೆರಳು ಪರೀಕ್ಷೆ ಎಂದರೇನು?
ಎರಡು ಬೆರಳಿನ ಪರೀಕ್ಷೆಯನ್ನು ಅವೈಜ್ಞಾನಿಕ ಮತ್ತು ತಪ್ಪು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಈ ಪರೀಕ್ಷೆಯ ಮೂಲಕ ಸಂತ್ರಸ್ತರಿಗೆ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ಜಾರ್ಖಂಡ್ ಸರ್ಕಾರದ ಅರ್ಜಿಯ ಮೇರೆಗೆ ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠ ಈ ಆದೇಶವನ್ನು ನೀಡಿತ್ತು. ಎರಡು ಬೆರಳುಗಳ ಪರೀಕ್ಷೆಯಲ್ಲಿ ಸಂತ್ರಸ್ತೆಯ ಖಾಸಗಿ ಭಾಗದಲ್ಲಿ ಎರಡು ಬೆರಳುಗಳನ್ನು ಸೇರಿಸುವ ಮೂಲಕ ಸಂತ್ರಸ್ತೆ ಲೈಂಗಿಕವಾಗಿ ಸಕ್ರಿಯಳಾಗಿದ್ದಾಳೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತದೆ. ಈ ಪರೀಕ್ಷೆಯೊಂದಿಗೆ ಕನ್ಯಾಪೊರೆಯನ್ನು ಪರೀಕ್ಷಿಸಲಾಗುತ್ತದೆ. ಆಕೆ ಲೈಂಗಿಕವಾಗಿ ಸಕ್ರಿಯಳಾಗಿದ್ದಾಳೆಯೇ ಅಥವಾ ಇಲ್ಲವೇ ಎಂಬುದನ್ನು ಕನ್ಯಾಪೊರೆಯಿಂದ ಕಂಡುಹಿಡಿಯುವ ಪ್ರಯತ್ನವನ್ನು ಮಾಡಲಾಗುತ್ತದೆ. ಆದಾಗ್ಯೂ, ಈ ವಿಧಾನವು ತಪ್ಪು ಎಂದು ಹೇಳಲಾಗುತ್ತದೆ. ಕನ್ಯಾಪೊರೆ ಹಲವು ಕಾರಣಗಳಿಗಾಗಿ ಹರಿದು ಹೋಗಬಹುದು. ಗಾಯದಿಂದಾಗಿ ಅಥವಾ ಕ್ರೀಡೆಯ ಸಮಯದಲ್ಲಿ ಹಾನಿಗೊಳಗಾಗಬಹುದು ಎಂದು ವೈದ್ಯಕೀಯ ವಿಜ್ಞಾನವು ಒಪ್ಪಿಕೊಳ್ಳುತ್ತದೆ. 2013ರಲ್ಲಿಯೇ ಸುಪ್ರೀಂ ಕೋರ್ಟ್ ಇದನ್ನು ನಿಷೇಧಿಸಿತ್ತು.

ಪಾಲಂಪುರದ ಸಿವಿಲ್ ಆಸ್ಪತ್ರೆ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರೊಫಾರ್ಮಾ ಸಿದ್ಧಪಡಿಸಿ ಎಂಎಲ್‌ಸಿ ನೀಡಿದ ಎಲ್ಲ ವೈದ್ಯರ ವಿರುದ್ಧವೂ ತನಿಖೆ ನಡೆಸಲಾಗುವುದು. ವೈದ್ಯರು ನಿವೃತ್ತರಾಗಿದ್ದರೆ ಅವರ ವಿರುದ್ಧವೂ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com