ರಾಜಕೀಯದಲ್ಲಿ ಸೇಡು ಇಲ್ಲ, ಕ್ರೀಡಾ ಮನೋಭಾವವಷ್ಟೇ: ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮ

ಅಮೇತಿ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಸೋಲಿಸಿ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.
Amethi MP Kishori Lal Sharma
ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮonline desk
Updated on

ಅಮೇಥಿ: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಸೋಲಿಸಿ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.

ಅಮೇಥಿ ಸಂಸತ್ ಕ್ಷೇತ್ರ ಗಾಂಧಿ ಕುಟುಂಬದ ಭದ್ರಕೋಟೆ (ವಿಶ್ವಾಸಾರ್ಹ ಕ್ಷೇತ್ರ)ವಾಗಿದ್ದು, ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕಿಶೋರಿ ಲಾಲ್ ಶರ್ಮಾ ಹೇಳಿದ್ದಾರೆ.

ಕಿಶೋರಿ ಲಾಲ್ ಶರ್ಮಾ ಸ್ಮೃತಿ ಇರಾನಿ ವಿರುದ್ಧ 1.67 ಲಕ್ಷ ಮತಗಳಿಂದ ಗೆದ್ದಿದ್ದಾರೆ. ಪಿಟಿಐ ಗೆ ಸಂದರ್ಶನ ನೀಡಿರುವ ಕಿಶೋರಿ ಲಾಲ್ ಶರ್ಮಾ, ರಾಜಕೀಯದಲ್ಲಿ ಸೇಡು ಎಂಬುದು ಇಲ್ಲ. ಅದು ಒಂದು ರೀತಿಯ ಕ್ರೀಡಾ ಮನೋಭಾವನೆ. ಒಬ್ಬರು ಗೆಲ್ಲುತ್ತಾರೆ. ಮತ್ತೊಬ್ಬರು ಸೋಲುತ್ತಾರೆ, ನಾವು ಸೇಡೆಂಬುದನ್ನೆಲ್ಲಾ ಗಮನಿಸುವುದಿಲ್ಲ ಎಂದು ಹೇಳಿದ್ದಾರೆ.

Amethi MP Kishori Lal Sharma
ಅಮೇಥಿ ಕಾಂಗ್ರೆಸ್ ಕಚೇರಿ ಹೊರಗೆ ನಿಲ್ಲಿಸಿದ್ದ ಕಾರುಗಳು ಧ್ವಂಸ: ಬಿಜೆಪಿ ಕೈವಾಡದ ಆರೋಪ

ಇದೇ ವೇಳೆ ರಾಹುಲ್ ಗಾಂಧಿ ಬಗ್ಗೆಯೂ ಮಾತನಾಡಿರುವ ಕಿಶೋರಿ ಲಾಲ್, ರಾಹುಲ್ ಗಾಂಧಿ ವಯನಾಡು, ರಾಯ್ ಬರೇಲಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಷಯವಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ಅಮೇಥಿಯಲ್ಲಿನ ತಮ್ಮ ಗೆಲುವು ಜನತೆ ಹಾಗೂ ಗಾಂಧಿ ಕುಟುಂಬದ ಗೆಲುವಾಗಿದೆ ಎಂದು ಶರ್ಮಾ ಹೇಳಿದ್ದು, ರಾಹುಲ್ ಗಾಂಧಿಯಿಂದ ಮಾರ್ಗದರ್ಶನ ಪಡೆಯುತ್ತೇನೆ ಎಂದಿದ್ದಾರೆ. ರಾಯ್ ಬರೇಲಿ ಹಾಗೂ ಅಮೇಥಿಗಳಿಗೆ ಈ ಹಿಂದೆ ಶರ್ಮಾ ಸಂಸದರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com