ಉತ್ತರಾಖಂಡ್: 22 ಸದಸ್ಯರ ಚಾರಣಿಗರ ಪೈಕಿ 9 ಮಂದಿ ಸಾವು; 13 ಮಂದಿಯ ರಕ್ಷಣೆ

ಉತ್ತರಾಖಂಡದ ಶಾಸ್ತ್ರತಾಳದಲ್ಲಿ ಚಾರಣಕ್ಕೆಂದು ತೆರಳಿದ್ದ ರಾಜ್ಯದ 9 ಮಂದಿ ಮೃತಪಟ್ಟಿದ್ದು 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಪೈಕಿ 8 ಮಂದಿಯನ್ನು ಏರ್ ಲಿಫ್ಟ್ ಮಾಡಲಾಗಿದೆ.
ಚಾರಣಿಗರನ್ನು ರಕ್ಷಿಸಲಾಗಿದೆ
ಚಾರಣಿಗರನ್ನು ರಕ್ಷಿಸಲಾಗಿದೆ
Updated on

ಡೆಹ್ರಾಡೂನ್: ಉತ್ತರಾಖಂಡದ ಶಾಸ್ತ್ರತಾಳದಲ್ಲಿ ಚಾರಣಕ್ಕೆಂದು ತೆರಳಿದ್ದ ರಾಜ್ಯದ 9 ಮಂದಿ ಮೃತಪಟ್ಟಿದ್ದು 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಪೈಕಿ 8 ಮಂದಿಯನ್ನು ಏರ್ ಲಿಫ್ಟ್ ಮಾಡಲಾಗಿದೆ.

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮೇಲಿನ ಹಿಮಾಲಯದಲ್ಲಿ ಸಹಸ್ತ್ರ ತಾಲ್ ಟ್ರೆಕ್ಕಿಂಗ್ ಸಮಯದಲ್ಲಿ ಕೆಟ್ಟ ಹವಾಮಾನದಿಂದಾಗಿ ದಾರಿ ತಪ್ಪಿದ 22 ಸದಸ್ಯರ ಟ್ರೆಕ್ಕಿಂಗ್ ತಂಡದ 9 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ, ಉಳಿದ 13 ಚಾರಣಿಗರನ್ನು ರಕ್ಷಿಸಲಾಗಿದೆ.

ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಸ್ಥಳೀಯ ಅಧಿಕಾರಿಗಳು ಜಂಟಿ ವಾಯು-ನೆಲದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಕಾಶಿ-ತೆಹ್ರಿ ಗಡಿಯಲ್ಲಿನ ಚಾರಣದಿಂದ ರಕ್ಷಿಸಲ್ಪಟ್ಟ 13 ಚಾರಣಿಗರಲ್ಲಿ 8 ಮಂದಿಯನ್ನು ಡೆಹ್ರಾಡೂನ್‌ಗೆ ವಿಮಾನದ ಮೂಲಕ ರವಾನಿಸಲಾಯಿತು.

ಚಾರಣಿಗರನ್ನು ರಕ್ಷಿಸಲಾಗಿದೆ
ಉತ್ತರಕಾಶಿ: ಚಾರಣಕ್ಕೆ ತೆರಳಿದ್ದ ರಾಜ್ಯದ 9 ಮಂದಿ ಸಾವು; ಇತರರ ರಕ್ಷಣೆಗೆ ಶಕ್ತಿಮೀರಿ ಪ್ರಯತ್ನ- ಸಿಎಂ ಸಿದ್ದರಾಮಯ್ಯ

ಕರ್ನಾಟಕದ 18 ಚಾರಣಿಗರು ಮಹಾರಾಷ್ಟ್ರದ ಓರ್ವರು ಚಾರಣಕ್ಕೆ ತೆರಳಿದ್ದರು. ಮೃತ ಚಾರಣಿಗರನ್ನು ಸಿಂಧು ವಕೇಕಲಂ (45), ಆಶಾ ಸುಧಾಕರ್ (71), ಸುಜಾತಾ ಮುಂಗುರವಾಡಿ (51), ವಿನಾಯಕ್ ಮುಂಗುರವಾಡಿ (54), ಚಿತ್ರಾ ಪ್ರಣೀತ್ (48), ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ (50), ವೆಂಕಟೇಶ ಪ್ರಸಾದ್ ಕೆಎನ್ (53) ಎಂದು ಗುರುತಿಸಲಾಗಿದೆ. , ಅನಿತಾ ರಂಗಪ್ಪ (60) ಮತ್ತು ಪದ್ಮಿನಿ ಹೆಗಡೆ (34) ಕರ್ನಾಟಕದ ಬೆಂಗಳೂರಿನ ನಿವಾಸಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಗಾಗಿ ಹಿರಿಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com