ಪ್ರಧಾನಿಯಾಗಿ ಮೋದಿ ಭವಿಷ್ಯ ಅನಿಶ್ಚಿತ: ಗೌರವ್ ಗೊಗೊಯ್

ಸಮ್ಮಿಶ್ರ ಸರ್ಕಾರ ನಡೆಸಲು ದೊಡ್ಡ ಹೃದಯ, ಮುಕ್ತ ಮನಸ್ಸು ಮತ್ತು ಎಲ್ಲರನ್ನೂ ಒಳಗೊಳ್ಳುವ ಮನಸ್ಸು ಇರುವ ಅಗತ್ಯವಿರುವುದರಿಂದ ಪ್ರಧಾನಿಯಾಗಿ ನರೇಂದ್ರ ಮೋದಿ ಭವಿಷ್ಯ ಅನಿಶ್ಚಿತ.
ಗೌರವ್ ಗೊಗೊಯ್
ಗೌರವ್ ಗೊಗೊಯ್
Updated on

ನವದೆಹಲಿ: ಸಮ್ಮಿಶ್ರ ಸರ್ಕಾರ ನಡೆಸಲು ದೊಡ್ಡ ಹೃದಯ, ಮುಕ್ತ ಮನಸ್ಸು ಮತ್ತು ಎಲ್ಲರನ್ನೂ ಒಳಗೊಳ್ಳುವ ಮನಸ್ಸು ಇರುವ ಅಗತ್ಯವಿರುವುದರಿಂದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಶುಕ್ರವಾರ ಹೇಳಿದ್ದಾರೆ.

"ದೊಡ್ಡ ಹೃದಯ, ಮುಕ್ತ ಮನಸ್ಸು ಮತ್ತು ಎಲ್ಲರನ್ನೂ ಒಳಗೊಳ್ಳುವ ಮನಸ್ಸು ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿದ್ದವು. ಆದರೆ ಮೋದಿಯವರಲ್ಲಿ ಇವು ಇವೆ ಎಂದು ನಾನು ಭಾವಿಸುವುದಿಲ್ಲ. ಆದ್ದರಿಂದ, ಪ್ರಧಾನಿಯಾಗಿ ಅವರ ದೀರ್ಘಾವಧಿಯ ಭವಿಷ್ಯ ಪ್ರಶ್ನಾರ್ಹವಾಗಿದೆ" ಎಂದು ಗೊಗೊಯ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂದು ದೆಹಲಿಯಲ್ಲಿ ನೂತನ ಕಾಂಗ್ರೆಸ್ ಸಂಸದರ ಸಭೆಯಲ್ಲಿ ಭಾಗವಹಿಸಿದ್ದ

ಜೋರ್ಹತ್ ಲೋಕಸಭಾ ಕ್ಷೇತ್ರದ ಸಂಸದ ಗೊಗೊಯ್ ಅವರು, 'ರಾಹುಲ್ ಗಾಂಧಿಯನ್ನು ಪ್ರಧಾನಿಗಿಂತ ದೊಡ್ಡ ಸ್ಥಾನಕ್ಕೆ' ಏರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ಗೌರವ್ ಗೊಗೊಯ್
NDA ರಾಷ್ಟ್ರಕ್ಕೆ ಬದ್ಧವಾಗಿರುವ ಮೈತ್ರಿಕೂಟ; ಸರ್ವಾನುಮತದ ನಿರ್ಧಾರಗಳು, ಪರಸ್ಪರ ನಂಬಿಕೆ ಈ ಮೈತ್ರಿಯ ತಿರುಳು: ನರೇಂದ್ರ ಮೋದಿ

"ಬಿಜೆಪಿ ತನ್ನ 'ಡಬಲ್ ಇಂಜಿನ್ ಸರ್ಕಾರ' ಅಭಿವೃದ್ಧಿ ಮಾಡುತ್ತಿದೆ ಎಂದು ಹೇಳಿಕೊಳ್ಳುವ ಯುಪಿಯ ರಾಯ್ ಬರೇಲಿ ಮತ್ತು ವಾರಣಾಸಿಯ ಗೆಲುವಿನ ಅಂತರವನ್ನು ನಾವು ನೋಡಿದರೆ, ಗಾಂಧಿ ಅವರು ಮೋದಿಯವರ ಗೆಲುವಿನ ಎರಡು ಪಟ್ಟು ಹೆಚ್ಚು ಅಂತರದಿಂದ ಗೆದ್ದಿದ್ದಾರೆ" ಎಂದು ಗೊಗೊಯ್ ಹೇಳಿದರು.

"ಉತ್ತರ ಪ್ರದೇಶದ ಜನರು ಪ್ರಧಾನಿಯ ಬಗ್ಗೆ ಅತೃಪ್ತರಾಗಿರುವಾಗ, ಅವರ ನಾಯಕತ್ವದ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ" ಎಂದು ಅವರು ಹೇಳಿದರು.

"ಪ್ರಸ್ತುತ ಪರಿಸ್ಥಿತಿ ನೋಡಿದರೆ, ಮೋದಿ ಐದು ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರಿಯುವುದು ಅನುಮಾನವಾಗಿದೆ. ರಾಯ್ ಬರೇಲಿಗೆ ಹೋಲಿಸಿದರೆ ವಾರಣಾಸಿಯಲ್ಲಿ ಅವರ ಮತದಾನದ ಮಾದರಿಯು ಇದಕ್ಕೆ ಸಾಕ್ಷಿಯಾಗಿದೆ" ಎಂದು ಕಾಂಗ್ರೆಸ್ ನಾಯಕ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com