ಮಹಾರಾಷ್ಟ್ರದಲ್ಲಿ ಮತ್ತೆ ಮರಾಠಾ ಮೀಸಲಾತಿ ಕಿಚ್ಚು: ಉಪವಾಸ ಹೋರಾಟ ಆರಂಭಿಸಿದ ಜರಂಗೆ

ಮಹಾರಾಷ್ಟ್ರದಲ್ಲಿ ಮತ್ತೆ ಮರಾಠ ಮೀಸಲಾತಿ ಕಿಚ್ಚು ಹೆಚ್ಚಾಗಿದೆ. ಮೀಸಲಾತಿಗಾಗಿ ಬೇಡಿಕೆ ಮುಂದಿಟ್ಟು ಈ ಹಿಂದೆ ಹಲವು ಬಾರಿ ಹೋರಾಟಗಳನ್ನು ನಡೆಸಿದ್ದ ಮನೋಜ್ ಜರಂಗೆ ಈಗ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.
Jarange
ಜರಂಗೆonline desk
Updated on

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಮರಾಠ ಮೀಸಲಾತಿ ಕಿಚ್ಚು ಹೆಚ್ಚಾಗಿದೆ. ಮೀಸಲಾತಿಗಾಗಿ ಬೇಡಿಕೆ ಮುಂದಿಟ್ಟು ಈ ಹಿಂದೆ ಹಲವು ಬಾರಿ ಹೋರಾಟಗಳನ್ನು ನಡೆಸಿದ್ದ ಮನೋಜ್ ಜರಂಗೆ ಈಗ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.

ಕುಂಬಿ ಸಮುದಾಯವನ್ನು ಮರಾಠ ಸಮುದಾಯದ ಸದಸ್ಯದ ರಕ್ತ ಸಂಬಂಧಿ ಎಂದು ಗುರುತಿಸುವ ಅಧಿಸೂಚನೆಯನ್ನು ಪ್ರಕಟಿಸುವುದಕ್ಕಾಗಿ ಜರಂಗೆ ಆಗ್ರಹಿಸಿದ್ದಾರೆ.

ಕುಂಬಿಗಳನ್ನು ಮರಾಠರೆಂದು ಗುರುತಿಸಲು ಕಾನೂನು ರೂಪಿಸುವಂತೆಯೂ ಜರಂಗೆ ಕೋರಿದ್ದಾರೆ ಮತ್ತು ತಮ್ಮ ಬೇಡಿಕೆಗಳನ್ನು ಅಂಗೀಕರಿಸದಿದ್ದಲ್ಲಿ ಮುಂಬರುವ ರಾಜ್ಯ ಚುನಾವಣೆಯಲ್ಲಿ ಮಹಾರಾಷ್ಟ್ರದ ಎಲ್ಲಾ 288 ವಿಧಾನಸಭಾ ಸ್ಥಾನಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾದ್ ತೆಹಸಿಲ್‌ನ ತಮ್ಮ ಸ್ಥಳೀಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಜೂ.08 ರಂದು ಬೆಳಿಗ್ಗೆ ಜಾರಂಜ್ ಅವರು ಹೊಸ ಸುತ್ತಿನ ಆಂದೋಲನವನ್ನು ಪ್ರಾರಂಭಿಸಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಇದಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಮರಾಠರಿಗೆ ಇತರೆ ಹಿಂದುಳಿದ ಸಮುದಾಯ ಟ್ಯಾಗ್ ನೀಡಬೇಕು ಮತ್ತು ಅರ್ಹ ಕುಂಬಿ ಮರಾಠರ ರಕ್ತಸಂಬಂಧಿಗಳಿಗೆ ಪ್ರಮಾಣಪತ್ರ ನೀಡಲು ಈ ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Jarange
ಮುಸ್ಲಿಂ ಮೀಸಲಾತಿ ತೆಗೆದು ಅದನ್ನು SC/ST ಗಳಿಗೆ ನೀಡುತ್ತೇವೆ: ಗೃಹ ಸಚಿವ ಅಮಿತ್ ಶಾ

ಕುಂಬಿ, ಕೃಷಿಕ ಗುಂಪು, OBC ವರ್ಗದ ಅಡಿಯಲ್ಲಿ ಬರುತ್ತದೆ, ಮತ್ತು ಜರಂಗೆ ಎಲ್ಲಾ ಮರಾಠರಿಗೆ ಕುಂಬಿ ಪ್ರಮಾಣಪತ್ರಗಳನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಜರಂಗೆ ಬೇಡಿಕೆ ಈಡೇರಿದರೆ ಮರಾಠಿಗರು ಕೋಟಾ ಪ್ರಯೋಜನಗಳಿಗೆ ಅರ್ಹರಾಗುತ್ತಾರೆ.

‘ಮರಾಠಾ ಮೀಸಲಾತಿ ಸಿಗುವವರೆಗೂ ನಾನು ಬಿಡುವುದಿಲ್ಲ’ ಎಂದು ಕೋಟಾ ಆಂದೋಲನದ ಮುಂಚೂಣಿಯಲ್ಲಿರುವ ಜಾರಂಗೆ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com