ಯಾರಾಗ್ತಾರೆ ಬಿಜೆಪಿ ರಾಷ್ಟ್ರಾಧ್ಯಕ್ಷ?: ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಗೆ RSS ಮಣೆ; ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್ ಗೆ ಪ್ರಧಾನಿ ಒಲವು

ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿಯ ನೇತೃತ್ವ ಯಾರು ವಹಿಸುತ್ತಾರೆ ಎಂಬುದು ಈಗ ಬಿಸಿಬಿಸಿ ಚರ್ಚೆಯಾಗುತ್ತಿದೆ. ಪ್ರಸ್ತುತ ಬಿಜೆಪಿಯ ನೇತೃತ್ವ ವಹಿಸಿರುವ ಜೆಪಿ ನಡ್ಡಾ ಅವರ ಅವಧಿ ಜೂನ್ 30 ರಂದು ಕೊನೆಗೊಳ್ಳುತ್ತಿದೆ.
ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್
ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್
Updated on

ನವದೆಹಲಿ: ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿಯ ನೇತೃತ್ವ ಯಾರು ವಹಿಸುತ್ತಾರೆ ಎಂಬುದು ಈಗ ಬಿಸಿಬಿಸಿ ಚರ್ಚೆಯಾಗುತ್ತಿದೆ. ಪ್ರಸ್ತುತ ಬಿಜೆಪಿಯ ನೇತೃತ್ವ ವಹಿಸಿರುವ ಜೆಪಿ ನಡ್ಡಾ ಅವರ ಅವಧಿ ಜೂನ್ 30 ರಂದು ಕೊನೆಗೊಳ್ಳುತ್ತಿದೆ.

ಎಲ್ಲರಿಗೂ ಒಪ್ಪಿಗೆಯಾಗುವ ಅಭ್ಯರ್ಥಿಯನ್ನು ಹುಡುಕಲು ಪಕ್ಷದ ನಾಯಕತ್ವವು ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕದಲ್ಲಿದೆ. ಮೂಲಗಳ ಪ್ರಕಾರ, ಆರ್‌ಎಸ್‌ಎಸ್ ನಾಯಕತ್ವವು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್‌ಗೆ ಆದ್ಯತೆ ನೀಡಿದೆ. ಈ ಇಬ್ಬರು ಸಚಿವರಲ್ಲಿ ಒಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕೆಂದು ಸಂಘಪರಿವಾರ ಬಯಸಿದೆ ಎಂದು ಹೇಳಲಾಗುತ್ತಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಈ ಇಬ್ಬರನ್ನು ಸಚಿವ ಹುದ್ದೆಯಿಂದ ಬಿಟ್ಟುಕೊಡಲು ಮನಸ್ಸು ತೋರಿಲ್ಲ. ಪಕ್ಷದ ಪರಿಣಾಮಕಾರಿ ಪದಾಧಿಕಾರಿಗಳಲ್ಲಿ ಒಬ್ಬರನ್ನು ಉನ್ನತ ಹುದ್ದೆಗೆ ಏರಿಸಲು ಅವರು ಬಯಸುತ್ತಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತಾವ್ಡೆ ಮತ್ತು ಸುನಿಲ್ ಬನ್ಸಾಲ್ ಅವರ ಹೆಸರುಗಳು ಕೂಡ ಕೇಳಿಬರುತ್ತಿದೆ. ಈ ಇಬ್ಬರೂ ನಾಯಕರು ಉನ್ನತ ಶ್ರೇಣಿಯಲ್ಲಿ ಬೆಳೆದು ಸಂಘಟನೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರಲ್ಲಿ ಒಬ್ಬರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ.

ಆದರೆ ಈ ನಿರ್ಣಾಯಕ ಸಾಂಸ್ಥಿಕ ನೇಮಕಾತಿಯಲ್ಲಿ ಆರ್‌ಎಸ್‌ಎಸ್ ಬಿಜೆಪಿ ನಾಯಕತ್ವದ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗುತ್ತಿದೆ. ಆದಾಗ್ಯೂ, ಪಕ್ಷದ ನಿಯಂತ್ರಣವನ್ನು ಬಿಟ್ಟುಕೊಡಲು ಪ್ರಧಾನಿ ಉತ್ಸುಕರಾಗಿಲ್ಲ. ಶೀಘ್ರದಲ್ಲೇ ತಾವ್ಡೆ ಅಥವಾ ಬನ್ಸಾಲ್ ಅವರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆರ್‌ಎಸ್‌ಎಸ್‌ನೊಂದಿಗೆ ಸಂಘರ್ಷಕ್ಕಿಳಿಯುವುದನ್ನು ತಪ್ಪಿಸಲು ಪಕ್ಷವು ಜೆ ಪಿ ನಡ್ಡಾ ಅವರ ಅವಧಿಯನ್ನು ಕೆಲಕಾಲದವರೆಗೆ ಮುಂದುವರಿಸುವ ನಿರೀಕ್ಷೆಯಿದೆ.

ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್
ಲೋಕಸಭೆ ಚುನಾವಣೆ ಫಲಿತಾಂಶ ನಮ್ಮ ಸರ್ಕಾರದ ನೀತಿಗಳಿಗೆ ಸಿಕ್ಕಿದ ಜನರ ಅನುಮೋದನೆ: ಪ್ರಧಾನಿ ಮೋದಿ

ಮತದಾನಕ್ಕೆ ಸಿದ್ದತೆಗಳು: ಹರಿಯಾಣದ ಮತ್ತೊಂದು ಪ್ರಮುಖ ಕುಟುಂಬದ ಮೇಲೆ ಬಿಜೆಪಿ ಕಣ್ಣು

ಹರಿಯಾಣದ ಮೂವರು ಪ್ರಸಿದ್ಧ ಲಾಲ್‌ಗಳಲ್ಲಿ ಇಬ್ಬರ ವಂಶಸ್ಥರಾದ ಭಜನ್ ಲಾಲ್ ಮತ್ತು ಬನ್ಸಿ ಲಾಲ್ - ಮತ್ತು ಮೂರನೆಯವರಾದ ದೇವಿ ಲಾಲ್ ಅವರೊಂದಿಗೆ ಮೈತ್ರಿ ಮಾಡಿಕೊಂಡ ನಂತರ, ಬಿಜೆಪಿ ಈಗ ಹರಿಯಾಣದ ಮತ್ತೊಂದು ಪ್ರಮುಖ ಕುಟುಂಬದ ಮೇಲೆ ಕಣ್ಣಿಟ್ಟಿದೆ.

ಮೂಲಗಳ ಪ್ರಕಾರ, ನಾಲ್ಕು ಬಾರಿ ಸಂಸದ ಮತ್ತು ಹರಿಯಾಣದ ಅತ್ಯಂತ ಗೌರವಾನ್ವಿತ ಬ್ರಾಹ್ಮಣ ನಾಯಕ ಪಂಡಿತ್ ಚಿರಂಜಿ ಲಾಲ್ ಶರ್ಮಾ ಅವರ ಪುತ್ರ ಕುಲದೀಪ್ ಶರ್ಮಾ ಅವರನ್ನು ಬಿಜೆಪಿ ಮಡಿಲಿಗೆ ಸೇರಿಸಿಕೊಳ್ಳಲು ಪಕ್ಷವು ಉತ್ಸುಕವಾಗಿದೆ. ಕುಲದೀಪ್ ಶರ್ಮಾ ಕಾಂಗ್ರೆಸ್ ಸದಸ್ಯ ಮತ್ತು ಹರಿಯಾಣ ವಿಧಾನಸಭೆಯ ಮಾಜಿ ಸ್ಪೀಕರ್. ಇತ್ತೀಚಿನ ಚುನಾವಣೆಯಲ್ಲಿ 10 ಲೋಕಸಭಾ ಸ್ಥಾನಗಳ ಪೈಕಿ 5 ಸ್ಥಾನಗಳನ್ನು ಬಿಜೆಪಿಯಿಂದ ಕಾಂಗ್ರೆಸ್ ವಶಪಡಿಸಿಕೊಂಡಿದ್ದು, ಈ ವರ್ಷ ಅಕ್ಟೋಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತ ಪಕ್ಷವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

ಕುಲದೀಪ್ ಶರ್ಮಾ ಅವರನ್ನು ಸೇರಿಸುವುದು ಈ ಯೋಜನೆಯ ಭಾಗವಾಗಿದೆ. ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಶರ್ಮಾ ಅವರನ್ನು ಪಕ್ಷ ತೊರೆಯದಂತೆ ಸಾರ್ವಜನಿಕವಾಗಿ ವಿನಂತಿಸಿಕೊಂಡಿದ್ದಾರೆ.

ಕುಲದೀಪ್ ಶರ್ಮಾ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ, ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್ ಅವರ ಸೊಸೆ, ಕಾಂಗ್ರೆಸ್ ನಾಯಕಿ ಕಿರಣ್ ಚೌಧರಿ ಬಿಜೆಪಿಗೆ ಸೇರಿದ್ದರು. ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಪುತ್ರ ಕುಲದೀಪ್ ಬಿಷ್ಣೋಯ್ ಕಳೆದ ವರ್ಷ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಹರಿಯಾಣದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ರಾವ್ ಬೀರೇಂದ್ರ ಸಿಂಗ್ ಅವರ ಪುತ್ರ ರಾವ್ ಇಂದರ್‌ಜಿತ್ ಸಿಂಗ್ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ವಿಸ್ತರಿಸುವ ಕೆಲಸ ಮಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com