ಕೇಜ್ರಿವಾಲ್‌ ಜಾಮೀನು ಕುರಿತ ಶಾ ಹೇಳಿಕೆ 'ಆಕ್ಷೇಪಾರ್ಹ', ಸುಪ್ರೀಂ ನ್ಯಾಯಾಧೀಶರ ಉದ್ದೇಶ ಪ್ರಶ್ನೆ: ಕಪಿಲ್ ಸಿಬಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಕುರಿತು 'ವಿಶೇಷ ಉಪಚಾರ ಹೇಳಿಕೆ' ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಗುರುವಾರ ವಾಗ್ದಾಳಿ ನಡೆಸಿದ್ದು, ಇದು “ಆಕ್ಷೇಪಾರ್ಹ ಹೇಳಿಕೆ” ಎಂದು ಹೇಳಿದ್ದಾರೆ.
ಕಪಿಲ್ ಸಿಬಲ್
ಕಪಿಲ್ ಸಿಬಲ್
Updated on

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಕುರಿತು 'ವಿಶೇಷ ಉಪಚಾರ ಹೇಳಿಕೆ' ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಗುರುವಾರ ವಾಗ್ದಾಳಿ ನಡೆಸಿದ್ದು, ಇದು “ಆಕ್ಷೇಪಾರ್ಹ ಹೇಳಿಕೆ” ಎಂದು ಹೇಳಿದ್ದಾರೆ. ಇದು ಸುಪ್ರೀಂಕೋರ್ಟ್ ನ್ಯಾಯಾಧೀಶರ ಉದ್ದೇಶವನ್ನು ಪ್ರಶ್ನಿಸುತ್ತದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನನ್ನು ಉಲ್ಲೇಖಿಸಿದ ಶಾ, ಕೇಜ್ರಿವಾಲ್ ಅವರಿಗೆ ವಿಶೇಷ ಉಪಚಾರ ನೀಡಲಾಗಿದೆ ಎಂದು ದೇಶದ ಅನೇಕರು ನಂಬಿದ್ದಾರೆ ಎಂಬ ವರದಿ ನಂತರ ಸಿಬಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡುವಲ್ಲಿ ಕೇಜ್ರಿವಾಲ್ ಅವರಿಗೆ ವಿನಾಯಿತಿ ನೀಡಿರುವ ಬಗ್ಗೆ ರಾಜಕೀಯ ಚರ್ಚೆಯಿಂದ ಸುಪ್ರೀಂ ಕೋರ್ಟ್ ದೂರ ಸರಿದಿದೆ. ಆದರೆ "ತೀರ್ಪಿನ ವಿಮರ್ಶಾತ್ಮಕ ವಿಶ್ಲೇಷಣೆ ಸ್ವಾಗತಾರ್ಹ" ಎಂದು ಹೇಳಿದೆ.

ಕಪಿಲ್ ಸಿಬಲ್
ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ವಿಶೇಷ ಆತಿಥ್ಯ ನೀಡಿದೆ: ಅಮಿತ್ ಶಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಪಿಲ್ ಸಿಬಲ್, ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಉದ್ದೇಶವನ್ನು ಪ್ರಶ್ನಿಸಿದ್ದಾರೆ" ಎಂದು ಹೇಳಿದರು. ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅವರಿಂದ ವಿಶೇಷ ಉಪಚಾರ ಪಡೆದಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ ಎಂದು ಶಾ ತುಂಬಾ ಬುದ್ದಿವಂತಿಕೆಯಿಂದ ಹೇಳಿದ್ದಾರೆ. ಜನರು ಹೇಳುತ್ತಿರುವುದಾಗಿ ಶಾ ಹೇಳಿದ್ದಾರೆ. ಜನರು ಹೇಳುತ್ತಿದ್ದರೆ, ನಿಮಗೆ ನಂಬಿಕೆ ಇಲ್ಲದಿದ್ದರೆ, ಅದನ್ನು ಏಕೆ ಹೇಳುತ್ತೀರಿ? ಜನರು ಹೇಳಿದ್ದರೆ, ನೀವು ಅದನ್ನು ನಂಬಿದರೆ, ಮಾತ್ರ ಈ ಹೇಳಿಕೆ ನೀಡಿದ್ದೀರಿ" ಎಂದು ಸಿಬಲ್ ಹೇಳಿದರು.

ಕಪಿಲ್ ಸಿಬಲ್
ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು: ವಿನಾಯಿತಿ ನೀಡಿಲ್ಲ; ತೀರ್ಪಿನ ವಿಮರ್ಶೆಗಳಿಗೆ ಸ್ವಾಗತ- ಸುಪ್ರೀಂ ಕೋರ್ಟ್

ಅಮಿತ್ ಶಾ 400 ಸೀಟುಗಳನ್ನು ಗೆದ್ದರೆ, ಪಿಒಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ' ಎಂದು ಹೇಳುತ್ತಾರೆ. ನಿಮಗೆ ಇಷ್ಟು ಸ್ಥಾನಗಳನ್ನು ಪಡೆಯದಿದ್ದರೆ, ನೀವು ಪಿಒಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲವೇ? ನೀವು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಮೊದಲನೆಯದಾಗಿ, ಚೀನಾ ಕಿತ್ತುಕೊಂಡಿರುವ 4,000 ಕಿಲೋಮೀಟರ್‌ಗಳನ್ನು ನೀವು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನೀವು ಪ್ರಜ್ವಲ್ ರೇವಣ್ಣ ಬಗ್ಗೆ ಯೋಚಿಸಿ. ಅವರ ಬಗ್ಗೆ ಏಕೆ ಹೇಳಿಕೆ ನೀಡುವುದಿಲ್ಲ? ಅದು ಜೆಡಿಎಸ್‌ನ ಆಂತರಿಕ ವಿಷಯ, ನೀವು ಅಲ್ಲಿ ಮೌನವಾಗಿದ್ದೀರಿ ಮತ್ತು ಪ್ರಧಾನಿ ಕೂಡ ಮೌನವಾಗಿದ್ದಾರೆ ಎಂದು ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com