ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಛತ್ತೀಸ್ ಗಢ: ಬಿಜಾಪುರ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನ ಹತ್ಯೆ, ಮೂವರು ನಕ್ಸಲೀಯರ ಬಂಧನ

ಈ ವರ್ಷದ ಮಾರ್ಚ್‌ನಲ್ಲಿ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಬಿಜೆಪಿ ಮುಖಂಡನ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ನಕ್ಸಲೀಯರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published on

ಬಿಜಾಪುರ: ಈ ವರ್ಷದ ಮಾರ್ಚ್‌ನಲ್ಲಿ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಬಿಜೆಪಿ ಮುಖಂಡನ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ನಕ್ಸಲೀಯರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಮೀಸಲು ಪಡೆ, ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್) ಮತ್ತು ರಾಜ್ಯ ಪೊಲೀಸರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಬಿಜಾಪುರದ ಟೊಯ್ನಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂತನ್‌ಪಲ್ಲಿ ಗ್ರಾಮದಲ್ಲಿ ಈ ನಕ್ಸಲೀಯರನ್ನು ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಛತ್ತೀಸ್ ಗಢ: ಭದ್ರತಾ ಪಡೆಗಳ ಮುಂದೆ ಶರಣಾದ 30 ನಕ್ಸಲೀಯರು

ಬಂಧಿತರನ್ನು ಮುನ್ನಾ ಮುದ್ಮಾ (32) ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯ ಸದಸ್ಯ, ಸೇನಾ ಕಮಾಂಡರ್ ರಾಜು ಮುದ್ಮಾ (31) ಮತ್ತು ನಕ್ಸಲ್ ಸಂಘಟನೆಯ ಸದಸ್ಯ ಲಕ್ಷ್ಮು ಮುದ್ಮಾ (39) ಎಂದು ಗುರುತಿಸಲಾಗಿದೆ.

ಮೂವರೂ ಚಿಂತನಪಲ್ಲಿ ಮೂಲದವರು. "ಮಾರ್ಚ್ 1 ರಂದು ತೋಯ್ನಾರ್ ಗ್ರಾಮದಲ್ಲಿ ನಡೆದ ಜನಪದ ಪಂಚಾಯತ್ ಸದಸ್ಯ ತಿರುಪತಿ ಕಟ್ಲಾ ಅವರ ಕೊಲೆಯಲ್ಲಿ ಈ ಮೂವರು ಭಾಗಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದರು.

ಆಡಳಿತಾರೂಢ ಬಿಜೆಪಿಯ ಮುಖಂಡರಾಗಿದ್ದ ಕಟ್ಲಾ ಅವರು ತೊಯ್ನಾರ್ ನಲ್ಲಿ ಮದುವೆಯಲ್ಲಿ ಭಾಗವಹಿಸಲು ಹೋಗಿದ್ದಾಗ ನಕ್ಸಲೀಯರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com