ಇಂಡಿಯಾ ಒಕ್ಕೂಟದ ನಾಯಕರು ರಾವಣ- ಕಂಸನ ಸಂಸ್ಕೃತಿಯ ಅನುಯಾಯಿಗಳು: ಮೋಹನ್ ಯಾದವ್

ವಿರೋಧ ಪಕ್ಷದ ಇಂಡಿಯಾ ಒಕ್ಕೂಟದ ನಾಯಕರು ರಾವಣ ಮತ್ತು ಕಂಸನ ಸಂಸ್ಕೃತಿಯ ಅನುಯಾಯಿಗಳು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಮೋಹನ್ ಯಾದವ್
ಮೋಹನ್ ಯಾದವ್
Updated on

ಬಲ್ಲಿಯಾ: ವಿರೋಧ ಪಕ್ಷದ ಇಂಡಿಯಾ ಒಕ್ಕೂಟದ ನಾಯಕರು ರಾವಣ ಮತ್ತು ಕಂಸನ ಸಂಸ್ಕೃತಿಯ ಅನುಯಾಯಿಗಳು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.

ಬಲ್ಲಿಯಾ ಜಿಲ್ಲೆಯ ಶೇಖ್‌ಪುರ ಮತ್ತು ಬೈರಿಯಾದಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮನನ್ನು ನಂಬಬೇಡಿ, ಕೃಷ್ಣನನ್ನು ನಂಬಬೇಡಿ ಎಂದು ಹೇಳುವವರು, ಭಗವದ್ಗೀತೆ, ಗೋವಿನ ಬಗ್ಗೆ ನಂಬಿಕೆ ಇಲ್ಲದವರು ರಾವಣನಂತೆ ಮಾರುವೇಷ ತೊಟ್ಟು ಸೀತೆಯನ್ನು ಅಪಹರಿಸಿದಂತೆ ಇಲ್ಲಿ ಮತವನ್ನು ಅಪಹರಿಸಲು ಬಂದಿದ್ದಾರೆ ಎಂದರು.

ಇಂಡಿಯಾ ಒಕ್ಕೂಟ ಸನಾತನ ಧರ್ಮವನ್ನು ಅವಮಾನಿಸುತ್ತಿದೆ ಮತ್ತು ಅವರ ನಂಬಿಕೆಯೊಂದಿಗೆ ಆಟವಾಡುತ್ತಿದೆ ಹೀಗಾಗಿ ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಸೋಲಿಸಿ ಎಂದು ಜನರಿಗೆ ಮನವಿ ಮಾಡಿದರು.

ಮೋಹನ್ ಯಾದವ್
5ನೇ ಹಂತದ ಲೋಕಸಭೆ ಚುನಾವಣೆಗೆ ಮತದಾನ ಆರಂಭ: ದ್ವೇಷಕ್ಕಾಗಿ ಅಲ್ಲ ಪ್ರೀತಿಗೆ ಮತ ನೀಡಿ- ಮಲ್ಲಿಕಾರ್ಜುನ ಖರ್ಗೆ

ರಾವಣ ನಕಲಿ ಸಾಧುವಿನ ವೇಷ ಧರಿಸಿ ಸೀತೆಯನ್ನು ಅಪಹರಿಸಿದಂತೆಯೇ ಕಾಂಗ್ರೆಸ್ ಮತ್ತು ಸಮಾಜವಾದಿ ಸಿದ್ಧಾಂತದವರೂ ನಕಲಿ ವೇಷ ಧರಿಸಿ ಮತ ಕೇಳಲು ಬರುತ್ತಿದ್ದಾರೆ. ಈ ಕುಟುಂಬ (ಯಾದವ್ ಕುಟುಂಬ) ತನ್ನ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಯಾರನ್ನೂ ನಂಬುವುದಿಲ್ಲ. ಅವರು ಎಲ್ಲರನ್ನೂ ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡುತ್ತಾರೆ ಆದರೆ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ ಎಂದು ಯಾದವ್ ಹೇಳಿದರು.

ಗಾಜಿಪುರದಲ್ಲಿ ಕಾರ್ಖಾನೆಯೇ ಇಲ್ಲ. ಇಲ್ಲಿ ಕೇವಲ ಒಂದು ಕುಟುಂಬದ ಲೂಟಿ ಉದ್ಯಮ ನಡೆಯುವುದರಿಂದ ಇಲ್ಲಿ ಕೈಗಾರಿಕೆ ನಡೆಯುತ್ತಿಲ್ಲ. ಭಯೋತ್ಪಾದನೆಯ ಅಬ್ಬರ ಸೃಷ್ಟಿಯಾಗಿದೆ. ನೆನಪಿರಲಿ, ಎಷ್ಟೇ ಅವ್ಯವಸ್ಥೆ ಮಾಡಿದರೂ ಈಗ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಎಲ್ಲದಕ್ಕೂ ಲೆಕ್ಕ ಸಿಗುತ್ತದೆ ಎಂದು ಹೇಳಿದರು.

ಶಿಶುಪಾಲನು ಶ್ರೀಕೃಷ್ಣನನ್ನು ನಿಂದಿಸುತ್ತಿದ್ದನು ಮತ್ತು ಇಂದು ಮೋದಿ, ಬಿಜೆಪಿ ಮತ್ತು ಪ್ರಜಾಪ್ರಭುತ್ವವನ್ನು ವಿರೋಧ ಪಕ್ಷಗಳು ನಿಂದಿಸುತ್ತಿವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com