ಸತ್ಯ ಹೊರಬರುತ್ತಿದೆ: The Sabarmati Report ಸಿನಿಮಾ ಹೊಗಳಿದ ಪ್ರಧಾನಿ ಮೋದಿ

ಈ ಸತ್ಯ ಹೊರಬರುವುದು ಒಳ್ಳೆಯದು, ಮತ್ತು ಸಾಮಾನ್ಯ ಜನರು ಅದನ್ನು ನೋಡುವ ರೀತಿಯಲ್ಲಿ ಸತ್ಯ ಹೊರಬರುತ್ತಿದೆ. ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಉಳಿಯಬಹುದು.
PM Modi
ಪ್ರಧಾನಿ ಮೋದಿ online desk
Updated on

ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸಾಬರಮತಿ ವರದಿ’ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಈ ಸತ್ಯ ಹೊರಬರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

"ಚೆನ್ನಾಗಿ ಹೇಳಿದ್ದೀರಿ. ಈ ಸತ್ಯ ಹೊರಬರುವುದು ಒಳ್ಳೆಯದು, ಮತ್ತು ಸಾಮಾನ್ಯ ಜನರು ಅದನ್ನು ನೋಡುವ ರೀತಿಯಲ್ಲಿ ಸತ್ಯ ಹೊರಬರುತ್ತಿದೆ. ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಉಳಿಯಬಹುದು. ಅಂತಿಮವಾಗಿ , ಸತ್ಯಗಳು ಯಾವಾಗಲೂ ಹೊರಬರುತ್ತವೆ!" ಎಂದು ಮೋದಿ ಹೇಳಿದ್ದಾರೆ.

2002 ರಲ್ಲಿ ಗೋಧ್ರಾ ರೈಲು ದುರಂತಕ್ಕೆ ಕಾರಣವಾದ ಘಟನೆಗಳ ಮೇಲೆ ಈ ಸಿನಿಮಾ ಕೇಂದ್ರೀಕೃತವಾಗಿದೆ. ಈ ಘಟನೆಯನ್ನು "ಪಟ್ಟಭದ್ರ ಹಿತಾಸಕ್ತಿ ಗುಂಪು" ರಾಜಕೀಯಗೊಳಿಸಿದ್ದು, ಇದನ್ನು "ಒಬ್ಬ ನಾಯಕನ ಪ್ರತಿಷ್ಠೆಗೆ" ಕಳಂಕ ತರುವ ಅವಕಾಶವಾಗಿ ಬಳಸಿಕೊಂಡಿದೆ ಎಂದು ಮೋದಿ ಹೇಳಿದ್ದಾರೆ.

ಧೀರಜ್ ಸರ್ನಾ ನಿರ್ದೇಶನದ ಈ ಚಿತ್ರವು 2002 ರ ದುರಂತದ ಕಥೆಯನ್ನು ಹೇಳುತ್ತದೆ. ವಿಕ್ರಾಂತ್ ಮಾಸ್ಸೆ ನಟಿಸಿರುವ ಈ ಚಿತ್ರ ನವೆಂಬರ್ 15ರಂದು ಬಿಡುಗಡೆಯಾಯಿತು.

ವಿಕ್ರಾಂತ್ ಮಾಸ್ಸೆ ಅವರು ಚಿತ್ರವನ್ನು ಹೊಗಳಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ "ಸಕಾರಾತ್ಮಕ ಪದಗಳು" ತಂಡವನ್ನು ಉತ್ತೇಜಿಸಿದೆ ಎಂದು ವಿಕ್ರಾಂತ್ ಹೇಳಿದ್ದಾರೆ. ಸಬರಮತಿ ವರದಿಯ ನಿರ್ಮಾಪಕಿ ಏಕ್ತಾ ಕಪೂರ್ ಅವರು ತಮ್ಮ ಕೃತಜ್ಞತೆಯನ್ನು ಹಂಚಿಕೊಂಡಿದ್ದಾರೆ, ಪ್ರಧಾನಿ ಮೋದಿಯವರ ಮೆಚ್ಚುಗೆಯು ಚಿತ್ರ ತಂಡಕ್ಕೆ ಗಮನಾರ್ಹವಾದ ಉತ್ತೇಜನವನ್ನು ನೀಡಿದೆ ಎಂಬುದನ್ನು ಅವರು ಒತ್ತಿಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com