ನ್ಯಾಯಾಲಯ ಒಪ್ಪಿಗೆಯಿಲ್ಲದೆ ದೆಹಲಿಯಲ್ಲಿ GRAP-4 ಸಡಿಲಿಸಬೇಡಿ: ಸುಪ್ರೀಂ ಕೋರ್ಟ್

ಮಾಲಿನ್ಯ ಮಟ್ಟಗಳ ಅಪಾಯಕಾರಿ ಏರಿಕೆಯನ್ನು ತಡೆಯಲು ನ್ಯಾಯಾಲಯವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತಿಳಿಯಲು ಬಯಸುತ್ತದೆ ಎಂದು ನ್ಯಾಯಪೀಠ ದೆಹಲಿ ಸರ್ಕಾರಕ್ಕೆ ಹೇಳಿದೆ.
A woman crosses the Kartavya Path amid low visibility due to smog as air quality remains in 'severe' category, in New Delhi, Monday, Nov. 18, 2024.
ಇಂದು ಬೆಳಗ್ಗೆ ದೆಹಲಿಯಲ್ಲಿ ಕಂಡುಬಂದ ದೃಶ್ಯ
Updated on

ನವದೆಹಲಿ: GRAP-4 ಅಡಿಯಲ್ಲಿ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ. ತನ್ನ ಪೂರ್ವಾನುಮತಿಯಿಲ್ಲದೆ ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ರಾಷ್ಟ್ರೀಯ ಮಟ್ಟದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಆತಂಕಕಾರಿ ಮಟ್ಟವನ್ನು ಮುಟ್ಟಿದ ನಂತರವೂ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ 4 ರ ಅಡಿಯಲ್ಲಿ ತಡೆಗಟ್ಟುವ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಗಮನಸೆಳೆದಿದೆ.

ಆರಂಭದಲ್ಲಿ, ದೆಹಲಿ ಸರ್ಕಾರದ ಪರ ವಕೀಲರು ಸೋಮವಾರದಿಂದ ಜಿಆರ್ ಎಪಿ 4 ನೇ ಹಂತವನ್ನು ಜಾರಿಗೊಳಿಸಲಾಗಿದೆ. ಭಾರೀ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಎಕ್ಯುಐ 300 ಮತ್ತು 400 ರ ನಡುವೆ ತಲುಪಿದಾಗ, ಹಂತ 4 ನ್ನು ಜಾರಿಗೆ ತರಬಹುದು.

ಮಾಲಿನ್ಯ ಮಟ್ಟಗಳ ಅಪಾಯಕಾರಿ ಏರಿಕೆಯನ್ನು ತಡೆಯಲು ನ್ಯಾಯಾಲಯವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತಿಳಿಯಲು ಬಯಸುತ್ತದೆ ಎಂದು ನ್ಯಾಯಪೀಠ ದೆಹಲಿ ಸರ್ಕಾರಕ್ಕೆ ಹೇಳಿದೆ.

A woman crosses the Kartavya Path amid low visibility due to smog as air quality remains in 'severe' category, in New Delhi, Monday, Nov. 18, 2024.
'ತೀವ್ರ ಹದಗೆಟ್ಟ' ಪರಿಸ್ಥಿತಿ ತಲುಪಿದ ವಾಯು ಗುಣಮಟ್ಟ: ದೆಹಲಿ-NCR ಪ್ರದೇಶದಲ್ಲಿ GRAP 4 ಜಾರಿ

ಅಗತ್ಯ ವಸ್ತುಗಳನ್ನು ಸಾಗಿಸುವ ಅಥವಾ ಶುದ್ಧ ಇಂಧನ (LNG/CNG/BS-VI ಡೀಸೆಲ್/ಎಲೆಕ್ಟ್ರಿಕ್) ಬಳಸುವುದನ್ನು ಹೊರತುಪಡಿಸಿ ಯಾವುದೇ ಟ್ರಕ್‌ಗಳನ್ನು ದೆಹಲಿಯೊಳಗೆ ಬಿಡುತ್ತಿಲ್ಲ. EVಗಳು ಮತ್ತು CNG ಮತ್ತು BS-VI ಡೀಸೆಲ್ ವಾಹನಗಳನ್ನು ಹೊರತುಪಡಿಸಿ ದೆಹಲಿಯ ಹೊರಗೆ ನೋಂದಾಯಿಸಲಾದ ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳನ್ನು ಸಹ ನಿಷೇಧಿಸಲಾಗಿದೆ.

ನವೆಂಬರ್ 14 ರಂದು, ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರವಾಗಬಾರದು ಎಂದು ಹೇಳಿದ ನಂತರ ಅರ್ಜಿಯನ್ನು ತುರ್ತಾಗಿ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು. ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಅದು ಮೊದಲು ಹೇಳಿತ್ತು, ಇದನ್ನು ಸಂವಿಧಾನದ 21 ನೇ ವಿಧಿಯಿಂದ ರಕ್ಷಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com