'ದೇಶದ್ರೋಹಿ' ಶಿಂಧೆ ಸರ್ಕಾರದ ಹಗರಣಗಳು ಮತ್ತು ಭ್ರಷ್ಟಾಚಾರದ ಪಟ್ಟಿ 'ಪಂಚನಾಮ' ಬಿಡುಗಡೆ ಮಾಡಿದ MVA!

ನಾನು ಮತ್ತು ಶರದ್ ಪವಾರ್ ದೇಶದ್ರೋಹಿಗಳಿಂದ ದ್ರೋಹಕ್ಕೆ ಒಳಗಾಗಿದ್ದೇವೆ. ಅಲ್ಲದೆ ಮಹಾರಾಷ್ಟ್ರಕ್ಕೂ ದ್ರೋಹ ಬಗೆದಿದೆ ಎಂದು ಹೇಳಿದರು. ಇದು ಮಹಾಯುತಿಯ ದೊಡ್ಡ ಪಾಪದ ಕೆಲಸ ಎಂದು ಆರೋಪಿಸಿದರು.
ಶರದ್ ಪವಾರ್-ಉದ್ಧವ್ ಠಾಕ್ರೆ
ಶರದ್ ಪವಾರ್-ಉದ್ಧವ್ ಠಾಕ್ರೆPTI
Updated on

ಮುಂಬೈ: ಮಹಾರಾಷ್ಟ್ರದ ವಿಪಕ್ಷ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಭಾನುವಾರ ರಾಜ್ಯದ ಏಕನಾಥ್ ಶಿಂಧೆ ಸರ್ಕಾರವನ್ನು ಗುರಿಯಾಗಿಸಿಕೊಂಡು 'ದೇಶದ್ರೋಹಿ ಪಂಚನಾಮ' (ದೇಶದ್ರೋಹಿಗಳ ಸಾಕ್ಷ್ಯ) ಎಂಬ ದಾಖಲೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶಿಂಧೆ ಸರ್ಕಾರ ಮಹಾರಾಷ್ಟ್ರಕ್ಕೆ ದ್ರೋಹ ಬಗೆದಿದ್ದು ನೆರೆಯ ಗುಜರಾತ್‌ನ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ಮೈತ್ರಿ ಆರೋಪಿಸಿದೆ.

ಎಂವಿಎಯು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ), ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಮತ್ತು ಕಾಂಗ್ರೆಸ್ ಅನ್ನು ಒಳಗೊಂಡಿದೆ. ಗುಜರಾತ್‌ನಲ್ಲಿ ನಡೆಯುತ್ತಿರುವ ದೊಡ್ಡ ಯೋಜನೆಗಳನ್ನು ತಡೆಯಲು ಆಡಳಿತಾರೂಢ ಮೈತ್ರಿಕೂಟದ 'ಮಹಾಯುತಿ' ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಮೈತ್ರಿಕೂಟವು ಆಗಾಗ್ಗೆ ಆರೋಪಿಸಿದೆ.

ಎಂವಿಎ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಶಿವಸೇನೆ ಮತ್ತು ಎನ್‌ಸಿಪಿ ನಡುವಿನ ಒಡಕನ್ನು ಉಲ್ಲೇಖಿಸಿ, ನಾನು ಮತ್ತು ಶರದ್ ಪವಾರ್ ದೇಶದ್ರೋಹಿಗಳಿಂದ ದ್ರೋಹಕ್ಕೆ ಒಳಗಾಗಿದ್ದೇವೆ. ಅಲ್ಲದೆ ಮಹಾರಾಷ್ಟ್ರಕ್ಕೂ ದ್ರೋಹ ಬಗೆದಿದೆ ಎಂದು ಹೇಳಿದರು. ಇದು ಮಹಾಯುತಿಯ ದೊಡ್ಡ ಪಾಪದ ಕೆಲಸ ಎಂದು ಆರೋಪಿಸಿದರು. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮೈತ್ರಿಕೂಟ 'ಮಹಾಯುತಿ' ಭಾರತೀಯ ಜನತಾ ಪಕ್ಷ (ಬಿಜೆಪಿ), ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಳಗೊಂಡಿದೆ.

ಶರದ್ ಪವಾರ್-ಉದ್ಧವ್ ಠಾಕ್ರೆ
NCP ನಾಯಕ ಬಾಬಾ ಸಿದ್ದಿಕಿ ಹತ್ಯೆ: ಕೊಲೆ ಮಾಡಿಸಿದ್ದು ನಾವೇ- ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್!

ಎಂವಿಎ ಮುಖಂಡರು 'ದೇಶದ್ರೋಹಿ ಪಂಚನಾಮ'ದಲ್ಲಿ ರಾಜ್ಯ ಸರ್ಕಾರದ "ಶಾಸಕರು ಮತ್ತು ಕೌನ್ಸಿಲರ್‌ಗಳ ಖರೀದಿ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ದರ ಕಾರ್ಡ್" ಜೊತೆಗೆ ಧಾರಾವಿ ಪುನರಾಭಿವೃದ್ಧಿ ಯೋಜನೆ, (ಮುಂಬೈ) ರಸ್ತೆಯ ಡಾಂಬರೀಕರಣ ಮತ್ತು ಅ ಟೆಂಡರ್‌ಗಳಲ್ಲಿನ ಹಗರಣಗಳ ಪಟ್ಟಿ. 'ಪಂಚನಾಮ' ಕೂಡ ಅಗತ್ಯ ವಸ್ತುಗಳ ಬೆಲೆಯಲ್ಲಿ ಐತಿಹಾಸಿಕ ಬೆಲೆ ಏರಿಕೆಯನ್ನು ಉಲ್ಲೇಖಿಸುತ್ತದೆ.

ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಮಾತನಾಡಿ, ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಿಂಧೆ ಸರಕಾರ ಕೂಡ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸುವಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ, ಇದು ಆಡಳಿತ ಸಮ್ಮಿಶ್ರ ಸರ್ಕಾರದ 'ಘೋರ ಪಾಪ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com