ಡಾನಾ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಇನ್ನಿಬ್ಬರು ಸಾವು, ಮೃತರ ಸಂಖ್ಯೆ 4ಕ್ಕೆ ಏರಿಕೆ

ಚಂದನ್ ದಾಸ್ (31ವ) ಎಂಬ ನಾಗರಿಕ ಸ್ವಯಂಸೇವಕ, ಪುರ್ಬಾ ಬರ್ಧಮಾನ್ ಜಿಲ್ಲೆಯ ಬಡ್ ಬಡ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಪೊಲೀಸ್ ತಂಡದೊಂದಿಗೆ ಹೊರಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.
ಬಾಲಸೋರ್ ಜಿಲ್ಲೆಯ ಅನಂತಪುರ ಗ್ರಾಮದಲ್ಲಿ ಡಾನಾ ಚಂಡಮಾರುತ ಪರಿಣಾಮ ಮನೆಯೊಂದರ ಮೇಲೆ ಬಿದ್ದ ಮರವನ್ನು NDRF ಸಿಬ್ಬಂದಿ ಕತ್ತರಿಸುತ್ತಿದ್ದಾರೆ.
ಬಾಲಸೋರ್ ಜಿಲ್ಲೆಯ ಅನಂತಪುರ ಗ್ರಾಮದಲ್ಲಿ ಡಾನಾ ಚಂಡಮಾರುತ ಪರಿಣಾಮ ಮನೆಯೊಂದರ ಮೇಲೆ ಬಿದ್ದ ಮರವನ್ನು NDRF ಸಿಬ್ಬಂದಿ ಕತ್ತರಿಸುತ್ತಿದ್ದಾರೆ.
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಡಾನಾ ಚಂಡಮಾರುತದಿಂದ ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂದನ್ ದಾಸ್ (31ವ) ಎಂಬ ನಾಗರಿಕ ಸ್ವಯಂಸೇವಕ, ಪುರ್ಬಾ ಬರ್ಧಮಾನ್ ಜಿಲ್ಲೆಯ ಬಡ್ ಬಡ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಪೊಲೀಸ್ ತಂಡದೊಂದಿಗೆ ಹೊರಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.

ತಂತಿಪಾರಾದಲ್ಲಿ ಜಲಾವೃತ ರಸ್ತೆಯಲ್ಲಿ ಹೌರಾ ಮುನ್ಸಿಪಲ್ ಕಾರ್ಪೊರೇಶನ್‌ನ ಉದ್ಯೋಗಿಯೊಬ್ಬರ ಶವ ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ರಾಜ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮೃತಪಟ್ಟಿದ್ದರು. ದಕ್ಷಿಣ 24 ಪರಗಣ ಜಿಲ್ಲೆಯ ಪಥರ್‌ಪ್ರತಿಮಾದಲ್ಲಿ ಒಬ್ಬರು ಮೃತಪಟ್ಟರೆ, ಮತ್ತೊಬ್ಬರು ದಕ್ಷಿಣ ಕೋಲ್ಕತ್ತಾದ ಭಬಾನಿಪುರ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ.

ಡಾನಾ ಚಂಡಮಾರುತ ನಿನ್ನೆ ಮುಂಜಾನೆ ಪೂರ್ವ ಕರಾವಳಿಗೆ ಅಪ್ಪಳಿಸಿತು, ಧಾರಾಕಾರ ಮಳೆ ಮತ್ತು ಹೆಚ್ಚಿನ ವೇಗದಲ್ಲಿ ಗಾಳಿ ಬೀಸಿ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಕಿತ್ತುಹಾಕಿತು. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಾಗರಿಕರ ಮೂಲಸೌಕರ್ಯಗಳು ಮತ್ತು ಬೆಳೆಗಳಿಗೆ ಹಾನಿಯುಂಟಾಗಿವೆ.

ಬಾಲಸೋರ್ ಜಿಲ್ಲೆಯ ಅನಂತಪುರ ಗ್ರಾಮದಲ್ಲಿ ಡಾನಾ ಚಂಡಮಾರುತ ಪರಿಣಾಮ ಮನೆಯೊಂದರ ಮೇಲೆ ಬಿದ್ದ ಮರವನ್ನು NDRF ಸಿಬ್ಬಂದಿ ಕತ್ತರಿಸುತ್ತಿದ್ದಾರೆ.
ಡಾನಾ ಚಂಡಮಾರುತ ಎಫೆಕ್ಟ್: ವಾಯುಭಾರ ಕುಸಿತ; ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com