ಇತಿಹಾಸದಲ್ಲೇ ಮೊದಲು: ಗಣೇಶ ವಿಸರ್ಜನೆ ಭಾಗವಾಗಿ ಲಾಲ್ ಚೌಕ್ ವರೆಗೆ ಅದ್ಧೂರಿ ಮೆರವಣಿಗೆ!

ಹರಿ ಸಿಂಗ್ ಹೈ ಸ್ಟ್ರೀಟ್ ನಿಂದ ಸಂಗೀತದ ಬ್ಯಾಂಡ್ ಗಳೊಂದಿಗೆ ಮೆರವಣಿಗೆ ಲಾಲ್ ಚೌಕ್ ನಲ್ಲಿರುವ ಐತಿಹಾಸಿಕ ಕ್ಲಾಕ್ ಟವರ್ ಗೆ ತಲುಪಿತು.
Ganapati tableau procession taken out in Srinagar
ಶ್ರೀನಗರದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆonline desk
Updated on

ಶ್ರೀನಗರ: ಶ್ರೀನಗರದಲ್ಲಿ ಇದೇ ಮೊದಲ ಬಾರಿಗೆ ಗಣೇಶ ವಿಸರ್ಜನೆಯ ಭಾಗವಾಗಿ ಗಣಪತಿ ಪ್ರತಿಮೆಯ ಮೆರವಣಿಗೆ ಅದ್ಧೂರಿಯಿಂದ ನಡೆದಿದೆ.

ಹರಿ ಸಿಂಗ್ ಹೈ ಸ್ಟ್ರೀಟ್ ನಿಂದ ಸಂಗೀತದ ಬ್ಯಾಂಡ್ ಗಳೊಂದಿಗೆ ಮೆರವಣಿಗೆ ಲಾಲ್ ಚೌಕ್ ನಲ್ಲಿರುವ ಐತಿಹಾಸಿಕ ಕ್ಲಾಕ್ ಟವರ್ ಗೆ ತಲುಪಿತು.

ಭಕ್ತಾದಿಗಳು ನಂತರ ಹನುಮಾನ್ ಮಂದಿರದ ಬಳಿ ಝೇಲಂ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಿದರು. ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿದ್ದ ಭಕ್ತರು ಮೆರವಣಿಗೆಯಲ್ಲಿ ಡೋಲು, ತಾಳಗಳ ಬಾರಿಸುತ್ತಾ ಕುಣಿದು ಕುಪ್ಪಳಿಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.

Ganapati tableau procession taken out in Srinagar
ಜಮ್ಮು ಕಾಶ್ಮೀರದಲ್ಲಿ ಮೇಘ ಸ್ಫೋಟ: ಶ್ರೀನಗರ- ಲೇಹ್ ಹೆದ್ದಾರಿ ಬಂದ್; ಸಂಚಾರ ಅಸ್ತವ್ಯಸ್ತ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಲ್ಕತ್ತಾ ನಿವಾಸಿ ಮಾಣಿಕ್ ಚತುರ್ದಾಸ್ ಮಾತನಾಡಿ, ಇಲ್ಲಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು, ನಾವು ಇಲ್ಲಿ ವ್ಯಾಪಾರ ಮಾಡುತ್ತೇವೆ. ಇಂದು ನಮ್ಮ ಮರಾಠಿ ಸಹೋದರರು ಗಣಪತಿ ನಿಮಜ್ಜನ ಮೆರವಣಿಗೆಯನ್ನು ಆಯೋಜಿಸಿದ್ದಾರೆ. ಈ ಮೆರವಣಿಗೆಯಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com