ಚುಚ್ಚುಮದ್ದು ನೀಡಲು OTP: ಬಿಜೆಪಿ ಸದಸ್ಯತ್ವ ನೀಡಲು ರೋಗಿಯೊಬ್ಬರ ಟ್ರ್ಯಾಪ್!

ಬಿಜೆಪಿಯ "ಪ್ರಾಥಮಿಕ ಸದಸ್ಯತ್ವ ಅಭಿಯಾನ - 2024"ದಲ್ಲಿ ಹೊಸ ವಿವಾದಗಳು ಹೊರಹೊಮ್ಮುತ್ತಿದ್ದಂತೆ ಹೆಚ್ಚುತ್ತಿರುವ ಪರಿಶೀಲನೆಯನ್ನು ಎದುರಿಸುತ್ತಿದೆ.
The BJP's ongoing "Primary Membership Campaign - 2024" is facing growing scrutiny as fresh controversies emerge.
ಬಿಜೆಪಿ ಸದಸ್ಯತ್ವ ಅಭಿಯಾನ-2024online desk
Updated on

ಅಹ್ಮದಾಬಾದ್: ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರನ್ನು ಆತನ ಒಪ್ಪಿಗೆ ಇಲ್ಲದೆಯೇ ಬಿಜೆಪಿ ಸದಸ್ಯನನ್ನಾಗಿ ಮಾಡಿದ ಘಟನೆ ಗುಜರಾತ್ ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

ವಿಸ್ ನಗರದಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಚುಚ್ಚು ಮದ್ದು ಪಡೆಯುತ್ತಿದ್ದ ರೋಗಿಯ ಬಳಿ ಮೊಬೈಲ್ ನಂಬರ್ ಕೇಳಿದ ಸಿಬ್ಬಂದಿ ಒಟಿಪಿಯನ್ನು ಕೇಳಿ ಅದನ್ನು ದಾಖಲಿಸಿಕೊಳ್ಳುವ ಮೂಲಕ ಆತನನ್ನು ಬಿಜೆಪಿ ಸದಸ್ಯನನ್ನಾಗಿ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಬಿಜೆಪಿಯ "ಪ್ರಾಥಮಿಕ ಸದಸ್ಯತ್ವ ಅಭಿಯಾನ - 2024"ದಲ್ಲಿ ಹೊಸ ವಿವಾದಗಳು ಹೊರಹೊಮ್ಮುತ್ತಿದ್ದಂತೆ ಹೆಚ್ಚುತ್ತಿರುವ ಪರಿಶೀಲನೆಯನ್ನು ಎದುರಿಸುತ್ತಿದೆ. ಹೊಸ ಬಿಜೆಪಿ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವವರಿಗೆ ಭಾವ್ನಗರ ಕಾರ್ಪೊರೇಟರ್‌ಗಳು ಹಣ ನೀಡುತ್ತಿರುವುದನ್ನು ತೋರಿಸುವ ಮತ್ತೊಂದು ವಿಡಿಯೋ ಮಂಗಳವಾರ ಹೊರಬಿದ್ದಿದೆ. ಈಗ, ವಿಸ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಚುಚ್ಚುಮದ್ದನ್ನು ಬಯಸಿದ ರೋಗಿಯನ್ನು ಆಕೆಗೆ ತಿಳಿಯದೆ ಬಿಜೆಪಿ ಸದಸ್ಯರಾಗಿ ಮಾಡಲಾಗಿದೆ.

ರೋಗಿಯ ಪತಿ ಈ ಬಗ್ಗೆ ಮಾತನಾಡಿದ್ದು, ತಾವು ಮತ್ತು ತಮ್ಮ ಪತ್ನಿ ಪ್ರಕಾಶ್ ಬೆನ್ ದರ್ಬಾರ್ ಬುಧವಾರ ವಿಸ್‌ನಗರ ಸಿವಿಲ್ ಆಸ್ಪತ್ರೆಗೆ ನಾಯಿ ಕಚ್ಚಿದ ನಂತರ ಇಂಜೆಕ್ಷನ್‌ಗಾಗಿ ಭೇಟಿ ನೀಡಿದರು. ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆಯೇ ರಿಜಿಸ್ಟ್ರಾರ್‌ನಲ್ಲಿ ಚೆಕ್ ಇನ್ ಮಾಡುವುದಕ್ಕೆ ಸೂಚಿಸಲಾಯಿತು. ಬಳಿಕ ಇಂಜೆಕ್ಷನ್ ಪಡೆಯಲು ಒಳಗೆ ಹೋದಾಗ ಆಸ್ಪತ್ರೆಯ ಸಿಬ್ಬಂದಿ ಒಟಿಪಿ ಹೇಳುವಂತೆ ಕೇಳಿದರು. ಒಟಿಪಿ ಏಕೆ ಬೇಕು ಎಂದಿದ್ದಕ್ಕೆ, ಇಂಜೆಕ್ಷನ್ ಬೇಕಾದಲ್ಲಿ ಒಟಿಪಿ ನೀಡಬೇಕು ಎಂದು ಹೇಳಿದರು. ಈ ನಿಯಮವನ್ನು ಪ್ರಶ್ನಿಸಿದ್ದಕ್ಕೆ ಇದು ಸಿವಿಲ್ ಆಸ್ಪತ್ರೆಯ ಹೊಸ ನಿಯಮ ಎಂದು ಹೇಳಿದರು ಎಂದು ವಿಕುಂಭ ದರ್ಬಾರ್ ಹೇಳಿದ್ದಾರೆ.

ಜನರನ್ನು ಬಿಜೆಪಿ ಸದಸ್ಯರನ್ನಾಗಿ ದಾಖಲಿಸಲು ಆಸ್ಪತ್ರೆಯ ಸಿಬ್ಬಂದಿ ಒಟಿಪಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

"ಇದು ಆಸ್ಪತ್ರೆಯ ಕಾರ್ಯವಿಧಾನದ ಭಾಗವಾಗಿದೆ ಎಂದು ನಂಬಿದ ನಾನು OTP ನ್ನು ನೀಡಿದ್ದೇನೆ, ಆದರೆ ಸ್ವಲ್ಪ ಸಮಯದ ನಂತರ, ನನಗೆ ಬಿಜೆಪಿ ಸದಸ್ಯತ್ವವನ್ನು ದೃಢೀಕರಿಸುವ ಸಂದೇಶವೊಂದು ಬಂದಿತು. ಇದು ಆಸ್ಪತ್ರೆಗೆ ಸಂಬಂಧಿಸಿಲ್ಲ ಎಂದು ನಾನು ತಕ್ಷಣ ಅರಿತುಕೊಂಡೆ ಮತ್ತು ಕಾರ್ಯಕರ್ತನೋರ್ವ ನನ್ನನ್ನು ಎದುರುಗೊಂಡು 'ಈ ಸದಸ್ಯತ್ವ ಬಿಜೆಪಿಗೆ. ಆಸ್ಪತ್ರೆಗೆ ಅಲ್ಲ ಎಂದು ಹೇಳಿ, ಯಾವುದೇ ಮಾತಿಲ್ಲದೆ ಹೊರಟುಹೋದ. ಆಸ್ಪತ್ರೆಯ ಸಿಬ್ಬಂದಿಗೆ ಅವರು ಕಾನೂನುಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿದೆ, ಆದಾಗ್ಯೂ, ಅಧಿಕಾರಿಗಳು ಘಟನೆಯ ಬಗ್ಗೆ ಯಾವುದೇ ದೂರುಗಳನ್ನು ಸ್ವೀಕರಿಸಲಿಲ್ಲ ಎಂದು ದರ್ಬಾರ್ ವಿವರಿಸಿದರು.

ವಿಸ್‌ನಗರ ಸಿವಿಲ್ ಆಸ್ಪತ್ರೆಯ ಅಧೀಕ್ಷಕ ಪಾರುಲ್ ಪಟೇಲ್ ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, "ಈ ಘಟನೆಯ ಬಗ್ಗೆ ನನಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ, ವೀಡಿಯೊ ನೋಡಿದ ನಂತರವೇ ನನಗೆ ಇದು ಅರಿವಾಯಿತು. ಭಾಗಿಯಾಗಿರುವ ಉದ್ಯೋಗಿ ಖಾಯಂ ಸಿಬ್ಬಂದಿ ಅಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಇಲ್ಲ. ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಚಟುವಟಿಕೆಯನ್ನು ಇತ್ತೀಚೆಗೆ ಬಾಹ್ಯ ಏಜೆನ್ಸಿಯೊಂದು ಇಲ್ಲಿ ನಡೆಸುತ್ತಿದೆ ಎಂದು ಹೇಳಿದ್ದಾರೆ.

The BJP's ongoing "Primary Membership Campaign - 2024" is facing growing scrutiny as fresh controversies emerge.
ರಾಹುಲ್ ಗಾಂಧಿ ನಾಲಿಗೆ ಸೀಳಬೇಕು: ಬಿಜೆಪಿ ಸಂಸದ ಅನಿಲ್ ಬೋಂಡೆ

ಏತನ್ಮಧ್ಯೆ, ಮಂಗಳವಾರ ಕಾಣಿಸಿಕೊಂಡ ವೈರಲ್ ವೀಡಿಯೊದಲ್ಲಿ, ಭಾವನಗರದಲ್ಲಿರುವ ಬಿಎಂಸಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಯುವರಾಜ್ ಸಿಂಗ್ ಗೋಹಿಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದಿದ್ದಾರೆ. ವೀಡಿಯೊದಲ್ಲಿ, ಗೋಹಿಲ್ ಅವರು "100 ಬಿಜೆಪಿ ಸದಸ್ಯರನ್ನು ಮಾಡಿ ಮತ್ತು ನನ್ನಿಂದ ₹ 500 ತೆಗೆದುಕೊಳ್ಳಿ" ಎಂದು ಹೇಳಿಕೆ ನೀಡುತ್ತಿರುವುದು ದಾಖಲಾಗಿದೆ. ಈ ಘಟನೆಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com