ಅಜಿತ್ ಪವಾರ್ ಬಣಕ್ಕೆ ಎನ್‌ಸಿಪಿ ಹೆಸರು ಮತ್ತು ಚಿಹ್ನೆ: ಶರದ್ ಪವಾರ್ ಗೆ ತೀವ್ರ ಹಿನ್ನಡೆ!

ಮಹಾರಾಷ್ಟ್ರದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದ್ದು, ಚುನಾವಣಾ ಆಯೋಗವು ಅಜಿತ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ.
ಅಜಿತ್ ಪವಾರ್-ಶರದ್ ಪವಾರ್
ಅಜಿತ್ ಪವಾರ್-ಶರದ್ ಪವಾರ್
Updated on

ನವದೆಹಲಿ: ಮಹಾರಾಷ್ಟ್ರದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದ್ದು, ಚುನಾವಣಾ ಆಯೋಗವು ಅಜಿತ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ. 

ಚುನಾವಣಾ ಆಯೋಗದೊಂದಿಗೆ ಈ ಹೋರಾಟ ಬಹಳ ದಿನಗಳಿಂದ ನಡೆಯುತ್ತಿದ್ದು, ಶರದ್ ಪವಾರ್ ಅವರ ಕಡೆಯವರು ಕೂಡ ವಾದ ಮಂಡಿಸಿದ್ದರು. ಆದರೆ ಇದೀಗ ಅಲ್ಲಿಂದ ಅಜಿತ್ ಬಣಕ್ಕೆ ಜಯ ಸಿಕ್ಕಿದ್ದು ನಿಜವಾದ ಎನ್‌ಸಿಪಿ ಎಂದರೆ ಅಜಿತ್ ಬಣ ಎಂದು ಒತ್ತಿ ಹೇಳಿದೆ.

ಕಳೆದ ವರ್ಷವೇ, ಅಜಿತ್ ಬಣ ಬಂಡಾಯವೆದ್ದು ಎನ್‌ಸಿಪಿಯನ್ನು ಎರಡು ತುಂಡು ಮಾಡಿತ್ತು. ಅನೇಕ ಶಾಸಕರ ಜೊತೆಗೂಡಿ ಶಿಂಧೆ ಸರ್ಕಾರವನ್ನು ಬೆಂಬಲಿಸಿದರು. ಈ ಕಾರಣಕ್ಕೆ ಅಜಿತ್ ಉಪ ಮುಖ್ಯಮಂತ್ರಿಯೂ ಆದರು. ಆಗ ಅಜಿತ್ ಅವರು ನಿಜವಾದ ಎನ್‌ಸಿಪಿ ಎಂದು ಹೇಳಿಕೊಂಡಿದ್ದರು. ಇದರ ಹಿಂದಿನ ತರ್ಕವೆಂದರೆ ತಮಗೆ ಸಾಕಷ್ಟು ಶಾಸಕರ ಬೆಂಬಲವಿದೆ ಎಂದು ವಾದಿಸಿದ್ದರು. ಅದೇ ಸಮಯದಲ್ಲಿ, ಶರದ್ ಪವಾರ್ ಕೂಡ ತಮ್ಮ ಹಕ್ಕು ಮಂಡಿಸಿದ್ದರು. ಶರದ್ ಅಜಿತ್ ಅನ್ನು ಹೊರಹಾಕುವ ಕೆಲಸವನ್ನು ಮಾಡಿದ್ದಾರೆ.

ಆದರೆ ಇದೀಗ ಚುನಾವಣಾ ಆಯೋಗವು ಅಖಾಡದಲ್ಲಿನ ಎಲ್ಲಾ ಸಮೀಕರಣಗಳನ್ನು ಬದಲಾಯಿಸಿದೆ. ಇಸಿ ಅಜಿತ್ ಬಣಕ್ಕೆ ದೊಡ್ಡ ರಿಲೀಫ್ ನೀಡಿದ್ದು, ಅವರನ್ನು ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com