ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ತಹವ್ವೂರ್ ರಾಣಾನನ್ನು ಗಡಿಯಲ್ಲಿ ಗಲ್ಲಿಗೇರಿಸಬೇಕು! ಮಹಾರಾಷ್ಟ್ರ ಸಚಿವ

26/11 ರ ಮುಂಬೈ ದಾಳಿಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸದಾನಂದ್ ಡೇಟ್ ಅವರೇ ತಹವ್ವೂರ್ ರಾಣಾ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ.
Tahawwur Rana
ತಹವ್ವೊರು ರಾಣಾ
Updated on

ಮುಂಬೈ: 2008ರ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತ- ಪಾಕಿಸ್ತಾನ ಗಡಿಯಲ್ಲಿ ಸಾಯುವವರೆಗೂ ಗಲ್ಲಿಗೇರಿಸಬೇಕು. ಇದರಿಂದ ಮುಂದೆ ಅಂತಹ ಕೃತ್ಯ ನಡೆಸಿದರೆ ನೆರೆಯ ರಾಷ್ಟ್ರಕ್ಕೆ ಪರಿಣಾಮದ ಅರಿವಾಗಲಿದೆ ಎಂದು ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ ನಾಯರ್ ಶುಕ್ರವಾರ ಒತ್ತಾಯಿಸಿದ್ದಾರೆ.

26/11 ರ ಮುಂಬೈ ದಾಳಿಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸದಾನಂದ್ ದಾಟೆ ಅವರೇ ತಹವ್ವೂರ್ ರಾಣಾ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ.

ಕಸಬ್‌ನನ್ನು ಗಲ್ಲಿಗೇರಿಸಿದಂತೆಯೇ ರಾಣಾನನ್ನೂ ಗಲ್ಲಿಗೇರಿಸಬೇಕು ಎಂಬುದು ಭಾರತದ ಪ್ರತಿಯೊಬ್ಬರೂ ಬಯಸುತ್ತಿದ್ದಾರೆ. ಆತನನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಗಲ್ಲಿಗೇರಿಸಬೇಕು, ಹೀಗಾಗಿ ಭಾರತದಲ್ಲಿ ಮುಂದೆ ಈ ರೀತಿಯ ಕೃತ್ಯ ಎಸಗಿದರೆ ಆಗುವ ಪರಿಣಾಮಗಳನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳುತ್ತದೆ ಎಂದು ಸರ್ ನಾಯಕ್ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

Tahawwur Rana
'26/11 ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು'; ಪಾಕ್ ನ ಅತ್ಯುನ್ನತ ಪ್ರಶಸ್ತಿ ಬಯಸಿದ್ದ ತಹವ್ವೂರ್ ರಾಣಾ!

ಮುಂಬೈನಲ್ಲಿ ನಡೆದ 26/11 ಭಯೋತ್ಪಾದನಾ ದಾಳಿಯ ಪರಿಣಾಮವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ರಚಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಶುಕ್ರವಾರ ಹೇಳಿದ್ದಾರೆ. ಇಂತಹ ಘಟನೆಗಳನ್ನು ನಿಭಾಯಿಸಲು ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಭಯೋತ್ಪಾದನಾ ನಿಗ್ರಹ ಕಾನೂನು ಜಾರಿ ಸಂಸ್ಥೆಯನ್ನು ಸ್ಥಾಪಿಸಲಾಯಿತು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com