ಪಾಕ್ ಗೆ ಕಾದಿದೆ ಮಾರಿ ಹಬ್ಬ: ಕಡತದೊಂದಿಗೆ ರಾಷ್ಟ್ರಪತಿಗಳನ್ನು ಭೇಟಿಯಾದ ಅಮಿತ್ ಶಾ, ಜೈಶಂಕರ್, ಮಹತ್ವದ ನಿರ್ಧಾರ?

ಗುರಿಯಾಗಿಸಿಕೊಂಡ ದಾಳಿಯಲ್ಲಿ, ಭಯೋತ್ಪಾದಕರ ಗುಂಪೊಂದು ಪುರುಷ ಪ್ರವಾಸಿಗರನ್ನು ತಿನಿಸುಗಳ ಸುತ್ತಲೂ ಓಡಾಡುತ್ತಿದ್ದಾಗ, ಕುದುರೆ ಸವಾರಿ ಮಾಡುತ್ತಿದ್ದಾಗ ಅಥವಾ 'ಮಿನಿ ಸ್ವಿಟ್ಜರ್ಲೆಂಡ್' ಎಂದು ಹೇಳಲಾದ ಹುಲ್ಲುಗಾವಲಿನಲ್ಲಿ ತಮ್ಮ ಕುಟುಂಬಗಳೊಂದಿಗೆ ಪಿಕ್ನಿಕ್ ಮಾಡುತ್ತಿದ್ದಾಗ ಕೊಂದಿತು.
Amit Shah
ಅಮಿತ್ ಶಾonline desk
Updated on

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. ಈ ದಾಳಿಯಲ್ಲಿ ಹೆಚ್ಚಾಗಿ ಪ್ರವಾಸಿಗರು ಮತ್ತು ನೇಪಾಳದ ಪ್ರಜೆ ಸೇರಿದಂತೆ 26 ಪುರುಷರು ಗುಂಡಿನ ದಾಳಿಗೆ ಬಲಿಯಾದರು.

Amit Shah
Pahalgam attack: ಪಾಕ್ ರಾಯಭಾರಿಗಳ ಹೊರಗಟ್ಟಿದ ಭಾರತ; ಅಠಾರಿ ಗಡಿ ಬಂದ್, ಮೋದಿ ಸರ್ಕಾರ ಕೈಗೊಂಡ ಕ್ರಮಗಳೇನು?

"ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು" ಎಂದು ರಾಷ್ಟ್ರಪತಿ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಸಭೆಯ ಚಿತ್ರದೊಂದಿಗೆ ತಿಳಿಸಿದೆ.

ಗುರಿಯಾಗಿಸಿಕೊಂಡ ದಾಳಿಯಲ್ಲಿ, ಭಯೋತ್ಪಾದಕರ ಗುಂಪೊಂದು ಪುರುಷ ಪ್ರವಾಸಿಗರನ್ನು ತಿನಿಸುಗಳ ಸುತ್ತಲೂ ಓಡಾಡುತ್ತಿದ್ದಾಗ, ಕುದುರೆ ಸವಾರಿ ಮಾಡುತ್ತಿದ್ದಾಗ ಅಥವಾ 'ಮಿನಿ ಸ್ವಿಟ್ಜರ್ಲೆಂಡ್' ಎಂದು ಹೇಳಲಾದ ಹುಲ್ಲುಗಾವಲಿನಲ್ಲಿ ತಮ್ಮ ಕುಟುಂಬಗಳೊಂದಿಗೆ ಪಿಕ್ನಿಕ್ ಮಾಡುತ್ತಿದ್ದಾಗ ಕೊಂದಿತು.

ಏತನ್ಮಧ್ಯೆ ಭಾರತದ ವಿದೇಶಾಂಗ ಸಚಿವಾಲಯ ರಷ್ಯಾ, ಫ್ರಾನ್ಸ್, ಜರ್ಮನಿ, ಸೌದಿ, ಅಮೆರಿಕ, ಬ್ರಿಟನ್ ನ ಉನ್ನತ ಮಟ್ಟದ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಸಿಕೊಂಡು ಪಹಲ್ಗಾಮ್ ಉಗ್ರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದನ್ನು ಸಾಕ್ಷ್ಯ ಸಹಿತ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com