ಬಂಗಾಳ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಬೆಂಗಾವಲು ವಾಹನದ ಮೇಲೆ ದಾಳಿ

ಟಿಎಂಸಿ ಕಾರ್ಯಕರ್ತರಿಂದ ದಾಳಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಆಡಳಿತರೂಢ ಪಕ್ಷ, ಇದು ಬಿಜೆಪಿ ಸೃಷ್ಟಿಸಿದ "ಉತ್ತಮ ನಾಟಕ" ಎಂದು ಟೀಕಿಸಿದೆ.
Suvendu Adhikari's convoy attacked in Cooch Behar
ಸುವೇಂದು ಅಧಿಕಾರಿ ಬೆಂಗಾವಲು ವಾಹನದ ಮೇಲೆ ದಾಳಿ
Updated on

ಕೂಚ್ ಬೆಹಾರ್: ಕೂಚ್ ಬೆಹಾರ್ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನದ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಟಿಎಂಸಿ ಕಾರ್ಯಕರ್ತರಿಂದ ದಾಳಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಆಡಳಿತರೂಢ ಪಕ್ಷ, ಇದು ಬಿಜೆಪಿ ಸೃಷ್ಟಿಸಿದ "ಉತ್ತಮ ನಾಟಕ" ಎಂದು ಟೀಕಿಸಿದೆ.

ಕೂಚ್ ಬೆಹಾರ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಬಿಜೆಪಿ ಪ್ರತಿಭಟನೆ ಮುನ್ನಡೆಸಲು ಉತ್ತರ ಬಂಗಾಳ ಜಿಲ್ಲೆಗೆ ಆಗಮಿಸಿದ್ದ ಸುವೇಂದು ಅಧಿಕಾರಿ ವಿರುದ್ಧ ಘೋಷಣೆ ಕೂಗಲಾಗಿದ್ದು, ಖಗ್ರಾಬರಿ ಪ್ರದೇಶದ ಬಳಿ ಅವರಿಗೆ ಕಪ್ಪು ಬಾವುಟ ತೋರಿಸಲಾಯಿತು.

ಬಿಜೆಪಿ ನಾಯಕರ ಪ್ರಕಾರ, ಟಿಎಂಸಿ ಪಕ್ಷದ ಧ್ವಜಗಳು ಮತ್ತು ಕಪ್ಪು ಬಾವುಟಗಳನ್ನು ಹಿಡಿದಿದ್ದ ಗುಂಪೊಂದು ಇಂದು ಮಧ್ಯಾಹ್ನ 12.35 ರ ಸುಮಾರಿಗೆ ಸುವೇಂದು ಅಧಿಕಾರಿಯ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

Suvendu Adhikari's convoy attacked in Cooch Behar
ಪಶ್ಚಿಮ ಬಂಗಾಳ: 45 ಸಾವಿರ ದುರ್ಗಾ ಪೆಂಡಾಲ್‌ಗಳಿಗೆ ತಲಾ 1.10 ಲಕ್ಷ ರೂ; ಮಮತಾ ಬ್ಯಾನರ್ಜಿ ಘೋಷಣೆ!

ಪ್ರತಿಭಟನಾಕಾರರು "ವಾಪಸ್ ಹೋಗಿ" ಘೋಷಣೆಗಳನ್ನು ಕೂಗಿದರು ಮತ್ತು ಸುವೇಂದು ಅಧಿಕಾರಿಯ ವಾಹನದ ಮೇಲೆ ಬೂಟುಗಳನ್ನು ಎಸೆದರು ಎಂದು ವರದಿಯಾಗಿದೆ. ಪೊಲೀಸ್ ಬೆಂಗಾವಲು ವಾಹನ ಸೇರಿದಂತೆ ಅವರ ಬೆಂಗಾವಲು ಪಡೆಯಲ್ಲಿದ್ದ ಕನಿಷ್ಠ ಒಂದು ಕಾರಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ವರದಿಯಾಗಿದೆ.

ಬಿಜೆಪಿ ಈ ದಾಳಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ದೂಷಿಸಿದ್ದು, ಇದು "ವಿರೋಧ ಪಕ್ಷದ ನಾಯಕನನ್ನು ಬೆದರಿಸಲು ಪೂರ್ವ ಯೋಜಿತ ಪ್ರಯತ್ನ" ಎಂದು ಹೇಳಿದೆ.

ಆದಾಗ್ಯೂ, ಟಿಎಂಸಿಯ ಯಾವುದೇ ಕಾರ್ಯಕರ್ತರು ಈ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿಲ್ಲ ಮತ್ತು ಈ ದಾಳಿ "ಬಿಜೆಪಿಯೊಳಗಿನ ಆಂತರಿಕ ಕಲಹದ ಪರಿಣಾಮ" ಎಂದು ತಿರುಗೇಟು ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com