Parliament monsoon session | ECI, ಬಿಹಾರ SIR ವಿರುದ್ಧ ಇಂಡಿಯಾ ಬ್ಲಾಕ್ ಪ್ರತಿಭಟನೆ; ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

ಲೋಕಸಭೆಯ ಕಾರ್ಯಸೂಚಿಯ ಪ್ರಕಾರ, ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಇಂದು ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025 ನ್ನು ಮಂಡಿಸಲಿದ್ದಾರೆ.
INDIA Bloc MP's protest in Parliament on Friday
ಇಂದು ಸಂಸತ್ತು ಮುಂದೆ ಇಂಡಿಯಾ ಬ್ಲಾಕ್ ಸದಸ್ಯರು
Updated on

ನವದೆಹಲಿ: ವಾರಾಂತ್ಯವಾದ ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ನಡೆಯುವ ಬದಲು ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ ಸದಸ್ಯರು ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ.

ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (INDIA) ನಾಯಕರು ಸಂಸತ್ತಿನ ಸಂಕೀರ್ಣದ ಒಳಗೆ ಮಕರ ದ್ವಾರದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಮನ್ಸುಖ್ ಮಾಂಡವಿಯಾ ಅವರಿಂದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025

ಲೋಕಸಭೆಯ ಕಾರ್ಯಸೂಚಿಯ ಪ್ರಕಾರ, ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಇಂದು ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025 ನ್ನು ಮಂಡಿಸಲಿದ್ದಾರೆ.

ಕೇಂದ್ರ ಸರ್ಕಾರವು ಮುಂಗಾರು ಅಧಿವೇಶನದಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಅಂಗೀಕರಿಸಲು ಉತ್ಸುಕವಾಗಿರುವುದರಿಂದ, ಆಡಳಿತ ಪೀಠದ ಸದಸ್ಯರು ನಿನ್ನೆ ಅದನ್ನು ಮುಂದಿನ ವಾರದ ಆರಂಭದಲ್ಲಿ ಚರ್ಚೆಗೆ ತೆಗೆದುಕೊಂಡು ಅಂಗೀಕಾರ ಪಡೆಯಬಹುದು ಎಂದು ಸೂಚಿಸಿದರು.

ವಿವರವಾದ ಅಧ್ಯಯನಕ್ಕಾಗಿ ಮಸೂದೆಯನ್ನು ಸಂಸದೀಯ ಸಮಿತಿಗೆ ಉಲ್ಲೇಖಿಸಬೇಕೆಂದು ಬಯಸಿದ ವಿರೋಧ ಪಕ್ಷವು, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಚರ್ಚೆಯಲ್ಲಿನ ಅಸ್ತವ್ಯಸ್ತತೆಯನ್ನು ಕೊನೆಗೊಳಿಸಲು ಚರ್ಚೆ ನಡೆಸಬೇಕೆಂದು ಒತ್ತಾಯಿಸಿದೆ.

ಸಂಸತ್ತಿನಲ್ಲಿ ಚುನಾವಣಾ ಪ್ರಕ್ರಿಯೆಯ ಕುರಿತು ಯಾವುದೇ ಚರ್ಚೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿರುವುದರಿಂದ, ನಾವು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಗೆ ಮಾಹಿತಿ ನೀಡಿ, ಎಸ್‌ಐಆರ್ ಕುರಿತು ಚರ್ಚೆ ನಡೆಸಲು ಸಾಧ್ಯವಿಲ್ಲ. ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಮತ್ತು ನಿಯಮಗಳು ತೀರ್ಪಿನ ಅಡಿಯಲ್ಲಿರುವ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಕ್ರೀಡಾ ಮಸೂದೆಯಂತಹ ಮಸೂದೆ ಮತ್ತು ಸುಂಕಗಳಂತಹ ಸಮಸ್ಯೆಗಳು ದೂರಗಾಮಿ ಪರಿಣಾಮ ಬೀರುತ್ತವೆ. SIR ಕುರಿತು ಪ್ರತಿಭಟನೆಯನ್ನು ಮುಂದುವರಿಸುವಾಗಲೂ ಅವುಗಳನ್ನು ಚರ್ಚಿಸುವುದು ಯೋಗ್ಯವಾಗಿರುತ್ತದೆ ಎಂಬ ಭಾವನೆ ಅನೇಕ ಪಕ್ಷಗಳಲ್ಲಿದೆ ಎಂದು ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರೊಬ್ಬರು ಹೇಳಿದರು.

INDIA Bloc MP's protest in Parliament on Friday
ಮಹಾರಾಷ್ಟ್ರ, ಕರ್ನಾಟಕದಲ್ಲಿ "ಮತಗಳ್ಳತನ": ರಾಹುಲ್‌ ಗಾಂಧಿಯಿಂದ ಸ್ಫೋಟಕ ದಾಖಲೆ ಬಿಡುಗಡೆ; Video

ಆಗಸ್ಟ್ 25 ರಂದು ವ್ಯಾಪಾರ ಮಾತುಕತೆಗಾಗಿ ಅಮೆರಿಕದ ಸಮಾಲೋಚಕರು ಆಗಮಿಸುವ ಮೊದಲು ಸರ್ಕಾರವು ಭಾರತ-ಅಮೆರಿಕ ಸುಂಕ ಸಮರ ಕುರಿತು ಚರ್ಚೆಗೆ ಒಲವು ತೋರಬಹುದು ಎನ್ನಲಾಗುತ್ತಿದೆ.

ಈ ಮಧ್ಯೆ, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಕ್ರೀಡಾ ಮಸೂದೆಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (BCCI) ಆರ್ ಟಿಐ ಕಾಯ್ದೆಯಿಂದ ವಿನಾಯಿತಿ ನೀಡುವುದಿಲ್ಲ ಎಂದರು, ಆದರೆ ಕ್ರೀಡಾ ಒಕ್ಕೂಟವು ಸರ್ಕಾರದಿಂದ ನಿಧಿ ಅಥವಾ ಅನುದಾನವನ್ನು ಬಳಸಿದರೆ ಮಾತ್ರ ಈ ಕಾಯ್ದೆ ಅನ್ವಯಿಸುತ್ತದೆ ಎಂದರು.

ಬಿಸಿಸಿಐ, ಇತರ ಕ್ರೀಡಾ ಆಡಳಿತ ಸಂಸ್ಥೆಗಳಂತೆ ಇದು ಸರ್ಕಾರಿ ನಿಧಿಯ ಮೇಲೆ ಅವಲಂಬಿತವಾಗಿಲ್ಲ ಎಂದು ವಾದಿಸುತ್ತಾ ಕಾಯ್ದೆಯ ವ್ಯಾಪ್ತಿಗೆ ಬರುವುದನ್ನು ಯಾವಾಗಲೂ ವಿರೋಧಿಸಿದೆ.

INDIA Bloc MP's protest in Parliament on Friday
ಬಿಹಾರ SIR ಕುರಿತು ಚರ್ಚೆಗೆ ಅವಕಾಶ ನೀಡಿ: ರಾಜ್ಯಸಭೆ ಉಪಸಭಾಪತಿಗೆ ಖರ್ಗೆ ಪತ್ರ

ಲೋಕಸಭೆ ಅಪರಾಹ್ನಕ್ಕೆ ಮುಂದೂಡಿಕೆ

ಸಂಸದರು ಸಲ್ಲಿಸಿದ ಯಾವುದೇ ಮುಂದೂಡಿಕೆ ಸೂಚನೆಗಳನ್ನು ಸ್ವೀಕರಿಸಲು ಸ್ಪೀಕರ್ ಓಂ ಬಿರ್ಲಾ ಅವಕಾಶ ನೀಡಿಲ್ಲ ಎಂದು ಸದನದ ಅಧ್ಯಕ್ಷ ಕೃಷ್ಣ ಪ್ರಸಾದ್ ಟೆನ್ನೇಟಿ ಸದನಕ್ಕೆ ತಿಳಿಸಿದರು. ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದವು. ತೀವ್ರ ಗದ್ದಲ, ಕೋಲಾಹಲ ನಂತರ ಕಲಾಪವನ್ನು ಅಪರಾಹ್ನ 3 ಗಂಟೆಗೆ ಮುಂದೂಡಲಾಯಿತು.

ರಾಜ್ಯಸಭೆ ಕಲಾಪ ದಿನದ ಮಟ್ಟಿಗೆ ಮುಂದೂಡಿಕೆ

ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗುತ್ತಲೇ ಇದ್ದ ಕಾರಣ ಕಲಾಪವನ್ನು ಆಗಸ್ಟ್ 11, ಬೆಳಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com