'ನಮ್ಮತ್ರ ಬ್ರಹ್ಮೋಸ್ ಇದೆ': ಪಾಕ್ ಪ್ರಧಾನಿಗೆ ಅಸಾದುದ್ದೀನ್ ಓವೈಸಿ ತಿರುಗೇಟು! Video

ಅಂತಹ ಬೆದರಿಕೆ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇಂತಹ ಹೇಳಿಕೆಗಳು ಸಾಕು-ಸಾಕು. ಮುಂದೆ ಇಂತಹ ಹೇಳಿಕೆ ನೀಡುವುದಕ್ಕೆ ಹೋಗಬೇಡಿ.
Asaduddin Owaisi and Pakistan Prime Minister Shehbaz Sharif
ಅಸಾದುದ್ದೀನ್ ಓವೈಸಿ, ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಚಿತ್ರ
Updated on

ನವದೆಹಲಿ: ಸಿಂಧು ನದಿ ನೀರು ವಿಚಾರವಾಗಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ಬೆದರಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬುಧವಾರ ತಿರುಗೇಟು ನೀಡಿದ್ದಾರೆ.

ಭಾರತ ಪಾಕಿಸ್ತಾನದಿಂದ ಒಂದು ಹನಿ ನೀರನ್ನು ಸಹ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಪಾಕ್ ಪ್ರಧಾನಿ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ನಮ್ಮತ್ರ ಬ್ರಹ್ಮೋಸ್ ಕ್ಷಿಪಣಿ ಇದೆ. ಪಾಕ್ ಪ್ರಧಾನಿ ಅಂತಹ ಮೂರ್ಖತನದ ಹೇಳಿಕೆ ನೀಡಬಾರದು ಎಂದರು.

ಅಂತಹ ಬೆದರಿಕೆ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇಂತಹ ಹೇಳಿಕೆಗಳು ಸಾಕು-ಸಾಕು. ಮುಂದೆ ಇಂತಹ ಹೇಳಿಕೆ ನೀಡುವುದಕ್ಕೆ ಹೋಗಬೇಡಿ ಎಂದು ಪಾಕ್ ಪ್ರಧಾನಿಗೆ ತಾಕೀತು ಮಾಡಿದರು.

ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ತಡೆಯುವ ಯಾವುದೇ ಪ್ರಯತ್ನವು ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯಾಗಿದ್ದು, ಅದಕ್ಕೆ ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮಂಗಳವಾರ ಭಾರತಕ್ಕೆ ನೀಡಿದ್ದ ಎಚ್ಚರಿಕೆಗೆ ಓವೈಸಿ ಈ ರೀತಿ ಪ್ರತಿಕ್ರಿಯಿಸಿದರು.

ಹೌದು. ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್, ನಮ್ಮ ಶತ್ರು ದೇಶ ಭಾರತ ಪಾಕಿಸ್ತಾನದಿಂದ ಒಂದು ಹನಿ ನೀರನ್ನು ಸಹ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ನೀವು ನಮ್ಮ ನೀರನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದೀರಿ. ನೀವು ಅಂತಹ ಕ್ರಮಕ್ಕೆ ಪ್ರಯತ್ನಿಸಿದರೆ, ಪಾಕಿಸ್ತಾನವು ನಿಮಗೆ ಎಂದಿಗೂ ಮರೆಯಲಾಗದ ಪಾಠ ಕಲಿಸುತ್ತದೆ ಎಂದು ಹೇಳಿದ್ದರು.

Asaduddin Owaisi and Pakistan Prime Minister Shehbaz Sharif
ಭಾರತಕ್ಕೆ ಎಂದಿಗೂ ಮರೆಯಲಾಗದ ತಕ್ಕ ಪಾಠ ಕಲಿಸುತ್ತೇವೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com